ಬ್ರೇಕಿಂಗ್ ನ್ಯೂಸ್
17-03-25 04:27 pm Mangalore Correspondent ಕರಾವಳಿ
ಮಂಗಳೂರು, ಮಾ.17 : ಹಿಂದು ಹುಡುಗರು ಹೆಣ್ಣು ಸಿಗದಿದ್ದರೆ ಅನ್ಯಧರ್ಮದ ಹೆಣ್ಮಕ್ಕಳನ್ನು ಮದುವೆಯಾಗಿ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಾ.9 ರಂದು ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರದಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ಲವ್ ಜಿಹಾದ್ ಬಗ್ಗೆ ಉಲ್ಲೇಖಿಸುತ್ತ ಅನ್ಯಧರ್ಮದ ಹೆಣ್ಣುಗಳನ್ನು ಬರಸೆಳೆಯುವ ಕೆಲಸ ಮಾಡಿ ಎಂದು ಹೇಳಿದ್ದರು.
ಸೂಲಿಬೆಲೆ ಮಾತಿಗೆ ಮುಸ್ಲಿಂ ಸಂಘಟನೆಗಳು, ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಎಸ್ಡಿಪಿಐ ನಾಯಕರು ಬಂಟ್ವಾಳ ಮತ್ತು ಉಳ್ಳಾಲದಲ್ಲಿ ಸೂಲಿಬೆಲೆ ವಿರುದ್ಧ ದೂರು ನೀಡಿದ್ದರು. ಆನಂತರ, ಉಳ್ಳಾಲದ ಯುವ ಕಾಂಗ್ರೆಸ್ ಮುಖಂಡ ರಶೀದ್ ನೇತೃತ್ವದಲ್ಲಿ ಉಳ್ಳಾಲ ಪೊಲೀಸರಿಗೆ ದೂರು ನೀಡಲಾಗಿತ್ತು. ಇದೀಗ ಉಳ್ಳಾಲ ಪೊಲೀಸರು ಸೆಕ್ಷನ್ 192, 353 BNS (505(2) ಮತ್ತು 353IPC ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.
ಕೊರಗಜ್ಜನ ಕ್ಷೇತ್ರದಲ್ಲಿ ಭಾಷಣ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ಮತಾಂತರದ ಬಗ್ಗೆ ಉಲ್ಲೇಖಿಸಿ, ಮತಾಂತರ ಆದವರನ್ನ ಮತ್ತೆ ಘರ್ ವಾಪಸಿ ಹೇಗೆ ಮಾಡೋದು ಎಂದು ನಮ್ಮ ಯುವಕರನ್ನ ತರಬೇತುಗೊಳಿಸಬೇಕು. ಎಲ್ಲಿಯ ವರೆಗೆ ಲವ್ ಜಿಹಾದ್ ಬಗ್ಗೆ ಮಾತಾಡ್ತ ಇರೋದು. ನಮ್ ಗಂಡು ಮಕ್ಕಳು ನಮ್ಮ ಹೆಣ್ಮಕ್ಕಳನ್ನೇ ನೋಡ್ತೀರಾ..?ನಮ್ಮಲ್ಲಿ ಹುಡ್ಗಿ ಸಿಕ್ಕಿಲ್ಲಂತ ಎಷ್ಟು ದಿನ ಹೇಳ್ತಿರೋದು. ಸ್ವಲ್ಪ ಬೇರೆಯವರನ್ನ ನೋಡ್ರಪ್ಪಾ.. ನಮ್ಮ ಗಂಡು ಮಕ್ಕಳಿಗೆ ಹೆಣ್ಣು ಸಿಗಲಿಲ್ಲವೆಂದು ಕೊರಗಬೇಡಿ. ಪಕ್ಕದ ಸಮಾಜದತ್ತ ನೋಡಿ, ಸವಾಲುಗಳನ್ನ ಎದುರಿಸಲು ಅಗ್ರೆಸಿವ್ ಆಗಿಯೇ ಮುನ್ನಡೆಯಬೇಕು. ಟೆಸ್ಟ್ ಮ್ಯಾಚ್ ನಿಂತೋಗಿದೆ, ಇಪ್ಪತ್ತು ಓವರಲ್ಲಿ ಬಡಿಯಬೇಕಷ್ಟೆ ಎನ್ನುವ ಮೂಲಕ ಹಿಂದು ಯುವಕರಿಗೆ ಕರೆ ನೀಡಿದ್ದರು.
A case has been registered against Chakravarthy Sulibele at Ullal Police Station for allegedly making a provocative statement against another religion during a religious event at Koragajja Kshetra in Kuthar. Congress leaders filed a complaint on Sunday, accusing Sulibele of delivering a communal hate speech aimed at disturbing social harmony. The complaint was lodged under the leadership of Ullal City Congress President Mustafa Abdulla.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
16-06-25 05:29 pm
HK News Desk
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
17-06-25 01:48 pm
Mangalore Correspondent
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
Rain, Pilikula Zoo, Mangalore, Flood: ಪಿಲಿಕುಳ...
16-06-25 08:34 pm
Mangalore Rain, Belthanagdy, Bike: ಸವಣಾಲು ; ಧ...
16-06-25 05:07 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm