ಬ್ರೇಕಿಂಗ್ ನ್ಯೂಸ್
15-02-25 04:59 pm Mangalore Correspondent ಕರಾವಳಿ
ಮಂಗಳೂರು, ಫೆ.15: ಬಿಜೆಪಿಗರ ರಾಜಕೀಯ ಮೇಲಾಟದಲ್ಲಿ ಒಮ್ಮೆ ಉದ್ಘಾಟನೆಯಾಗಿದ್ದ ನಗರದ ಜಪ್ಪಿನಮೊಗರಿನ ಹೊಸ ಆರೋಗ್ಯ ಕೇಂದ್ರವನ್ನು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತೆ ಉದ್ಘಾಟನೆ ಮಾಡಿದ್ದಾರೆ. ಇದೇ ವೇಳೆ, ಸಚಿವರು ಬಿಜೆಪಿ ನಾಯಕರು ಡರ್ಟಿ ಪಾಲಿಟಿಕ್ಸ್ ಮಾಡಿದ್ದಾರೆ. ರಾಜಕೀಯ ವಾತಾವರಣ ಕೆಡಿಸುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಉದ್ಘಾಟನೆ ಕಾರ್ಯಕ್ರಮದ ಬಳಿಕ ಸಮಾರಂಭದಲ್ಲಿ ಮಾತನಾಡಿದ ಸಚಿವ ಗುಂಡೂರಾವ್, ನೇರವಾಗಿ ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಕಿಡಿಕಾರಿದರು. ಇವರು ಚೀಪ್ ರಾಜಕೀಯ ಮಾಡುತ್ತಿದ್ದಾರೆ. ನಾವು ಎಲ್ಲರನ್ನು ಕರೆದು ಬೆಂಗಳೂರಿನಲ್ಲಿ ಇನ್ವೆಸ್ಟ್ ಕರ್ನಾಟಕ ಮಾಡಿಲ್ವಾ.. ಅಭಿವೃದ್ಧಿ ವಿಚಾರದಲ್ಲಿ ಈ ರೀತಿ ಡರ್ಟಿ ರಾಜಕೀಯ ಮಾಡೋದಾ.. ಇವರು ತಮ್ಮ ಸ್ವಂತ ದುಡ್ಡಿನಲ್ಲಿ ಮಾಡಿದ್ದಲ್ಲ, ಇವರದೇ ಹಣ, ಭೂಮಿ ಆಗಿರುತ್ತಿದ್ದರೆ ಕೇಳುತ್ತಿರಲಿಲ್ಲ. ನಾನೇನು ವರ್ಷಕ್ಕೊಮ್ಮೆ ಬರುವ ಉಸ್ತುವಾರಿ ಅಲ್ಲ, ತಿಂಗಳಲ್ಲಿ 2-3 ಬಾರಿ ಮಂಗಳೂರಿಗೆ ಬರುತ್ತೇನೆ. ಒಂದು ಫೋನ್ ಮಾಡಬಹುದಿತ್ತಲ್ವಾ.. ಶಾಸಕನ ನಡೆಯಿಂದ ಮುಜುಗರ ಸೃಷ್ಟಿ ಆಗಿದೆ ಎಂದು ಹೇಳಿದರು.
ಉದ್ಘಾಟನೆಯನ್ನು ಸೂಚಿಸುವ ಕಲ್ಲಿನಲ್ಲೂ ಇವರದೇ ಹೆಸರು ಹಾಕಿದ್ದಾರೆ. ಇಷ್ಟೆಲ್ಲ ಆಗುವಾಗ ಅಧಿಕಾರಿಗಳು ಸುಮ್ಮನಿದ್ರಾ.. ಏನೂ ಗೊತ್ತೇ ಆಗಲಿಲ್ವಾ.. ಯಾಕೆ ನನ್ನ ಗಮನಕ್ಕೆ ತಂದಿಲ್ಲ. ಇದಕ್ಕೆ ಯಾರು ಕಾರಣ ಅಂತ ವರದಿ ಕೊಡಬೇಕು ಎಂದು ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗೆ ಸೂಚನೆ ನೀಡಿದರು. ಎಂಎಲ್ಸಿ ಐವಾನ್ ಡಿಸೋಜ, ಇಲ್ಲಿನ ಬಿಜೆಪಿ ಶಾಸಕರು ರಾಜಕೀಯದ ಸಣ್ಣತನ ತೋರಿಸಿದ್ದಾರೆ. ಇವತ್ತು ಕೂಡ ನಮ್ಮ ಶಾಸಕರು ಕಾರ್ಯಕ್ರಮಕ್ಕೆ ಬಂದಿಲ್ಲ, ಇದೇನಾ ಇವರು ಸರ್ಕಾರಿ ಕಾರ್ಯಕ್ರಮಕ್ಕೆ ಕೊಡುವ ಗೌರವ ಎಂದು ಪ್ರಶ್ನಿಸಿದರು.
Mangalore Inauguration of development works in Mangaladevi ward, minister Dinesh Gundurao slams Vedavyas Kamath. He said its a cheap politics by BJP to inaugurate the building without my knowledge. He also has instructed chief secretaries to take action against officials who violated the protocol during the inauguration of development works in Mangaladevi ward of the MCC.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm