ಬ್ರೇಕಿಂಗ್ ನ್ಯೂಸ್
09-02-25 11:03 pm Mangalore Correspondent ಕರಾವಳಿ
ಮಂಗಳೂರು, ಫೆ.9: 12 ವರ್ಷದ ಬಾಲಕನ ಭುಜದ ಮೂಲಕ ಎದೆಗೆ ಹೊಕ್ಕಿದ್ದ ತೆಂಗಿನ ದಂಟನ್ನು ವೆನ್ಲಾಕ್ ವೈದ್ಯರು ಸಕಾಲಿಕವಾಗಿ ನಡೆಸಿದ ಶಸ್ತ್ರಚಿಕಿತ್ಸೆಯಿಂದ ಹೊರ ತೆಗೆದಿದ್ದು, ಬಾಲಕನ ಜೀವ ಉಳಿಸಿದ್ದಾರೆ. ಆಮೂಲಕ ಸರಕಾರಿ ಆಸ್ಪತ್ರೆಯಲ್ಲಿಯೂ ಶಸ್ತ್ರಚಿಕಿತ್ಸೆಯಿಂದ ಜನಸಾಮಾನ್ಯರ ಜೀವ ಉಳಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮಡಿಕೇರಿಯ ಕಾಫಿ ಎಸ್ಟೇಟ್ ಒಂದರಲ್ಲಿ ಅಸ್ಸಾಮ್ ಮೂಲದ ಕಾರ್ಮಿಕ ದಂಪತಿಯ ಪುತ್ರ ಕಮಲ್ ಹುಸೇನ್ (12) ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕ. ಶುಕ್ರವಾರ ಸಂಜೆ ಇವರು ಉಳಿದುಕೊಂಡಿದ್ದ ಮನೆಯ ಬಳಿ ನೇರಳೆ ಹಣ್ಣಿನ ಮರಕ್ಕೆ ಬಾಲಕ ಹತ್ತಿದ್ದು ಅಕಸ್ಮಾತ್ ಮರದಿಂದ ಕೆಳಕ್ಕೆ ಬಿದ್ದಿದ್ದಾನೆ. ಈ ವೇಳೆ, ತೆಂಗಿನ ಗರಿಯ ದಂಟು ಭುಜದ ಮೂಲಕ ಬಾಲಕನ ಎದೆಯ ಭಾಗಕ್ಕೆ ಹೊಕ್ಕಿತ್ತು. ಜೊತೆಗೆ, ಆತನ ಕುತ್ತಿಗೆಯಲ್ಲಿದ್ದ ಸ್ಟೀಲ್ ಚೈನ್ ಕೂಡ ಗಾಯದ ಮೂಲಕ ಒಳಸೇರಿತ್ತು. ಮೂರು ಇಂಚಿನಷ್ಟು ಎದೆಗೆ ಒಳ ಹೋಗಿರುವುದು ಎಕ್ಸ್ ರೇಯಲ್ಲಿ ಕಂಡುಬಂದಿತ್ತು.
ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು. ಶನಿವಾರ ಸಂಜೆ ವೆನ್ಲಾಕ್ ತಲುಪಿದ್ದ ಬಾಲಕನಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ವೆನ್ಲಾಕ್ ಆಸ್ಪತ್ರೆಯ ಎದೆ ಮತ್ತು ರಕ್ತನಾಳಗಳ ವೈದ್ಯರಾದ ಡಾ.ಸುರೇಶ್ ಪೈ ನೇತೃತ್ವದ ತಂಡವು ಭಾನುವಾರ ನಸುಕಿನ 1.30ರಿಂದ 3.30ರ ವರೆಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಯಶಸ್ವಿಯಾಗಿ ತೆಂಗಿನ ಗರಿಯನ್ನು ಮತ್ತು ಸ್ಟೀಲ್ ಚೈನ್ ಅನ್ನು ಹೊರತೆಗೆದಿದೆ. ಸಕಾಲಿಕವಾಗಿ ಸ್ಪಂದಿಸಿರುವ ವೈದ್ಯರ ತಂಡಕ್ಕೆ ವೆನ್ಲಾಕ್ ಆಸ್ಪತ್ರೆಯ ಸುಪರಿಡೆಂಟ್ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಬಾಲಕ ಉಷಾರಾಗಿದ್ದಾನೆ ಎಂದು ಆತನ ಕುಟುಂಬಸ್ಥರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಅಸ್ಸಾಮ್ ಮೂಲದ ಏಳು ಮಂದಿ ಎರಡು ವರ್ಷಗಳ ಹಿಂದೆ ಮಡಿಕೇರಿ ಬಂದು ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಬಾಲಕ ಊರಿನಲ್ಲೇ ಇದ್ದು ಶಾಲೆಗೆ ಹೋಗುತ್ತಿದ್ದ. ಈ ಬಾರಿ ಶಾಲೆಗೆ ಹೋಗದೆ ಹೆತ್ತವರ ಜೊತೆಗೆ ಊರಿಗೆ ಬಂದಿದ್ದ ಎಂದು ಆತನ ಸಂಬಂಧಿಕ ತಸ್ಸಾರ್ ಆಲಿ ಮಾಹಿತಿ ನೀಡಿದ್ದಾರೆ.
Coconut cassava stuck on shoulder operated successfully by Wenlock hospital in Mangalore.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm