ಬ್ರೇಕಿಂಗ್ ನ್ಯೂಸ್
17-01-25 10:50 pm Mangalore Correspondent ಕರಾವಳಿ
ಮಂಗಳೂರು, ಜ.17: ತನ್ನ ಕಟ್ಟಡದಲ್ಲಿ ಬಾಡಿಗೆ ಇರುವ ಮಹಿಳೆಯೊಬ್ಬರಿಗೆ ಮಾಲೀಕನೇ ಮಾನಸಿಕ ಕಿರುಕುಳ ಕೊಡುವುದಲ್ಲದೆ, ನೀರು, ವಿದ್ಯುತ್ ಕಡಿತಗೊಳಿಸಿ ವಿನಾಕಾರಣ ತೊಂದರೆ ಕೊಡುತ್ತಿರುವ ಆರೋಪ ಕೇಳಿಬಂದಿದೆ.
ಸೋಮೇಶ್ವರ ಗ್ರಾಮದ ಅಂಬಿಕಾ ರೋಡ್ ಬಳಿಯ ಸುಧಾಕರ ಭಂಡಾರಿ ಎಂಬವರ ಕಟ್ಟಡದಲ್ಲಿ ಮಹಿಳೆ ತನ್ನ ಮಕ್ಕಳೊಂದಿಗೆ ಬಾಡಿಗೆಗೆ ಇದ್ದಾರೆ. ಕಳೆದ ಡಿಸೆಂಬರ್ ತಿಂಗಳಿನಿಂದ ರಾತ್ರಿ ವೇಳೆ ಈ ವ್ಯಕ್ತಿ ಮನೆಯ ಬಾಗಿಲು ಬಡಿಯುವುದು, ನಾಯಿ ಬಿಟ್ಟು ಕಿರುಕುಳ ಕೊಡುವುದು ಮಾಡುತ್ತಿದ್ದಾರೆ. ತಿಂಗಳ ಬಾಡಿಗೆಯನ್ನು ಸರಿಯಾಗಿ ಕೊಟ್ಟರೂ, ವಿನಾಕಾರಣ ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ, ನೀರು ಪೂರೈಕೆ ಮಾಡದೆ ಸತಾಯಿಸುತ್ತಿದ್ದಾರೆಂದು ಮಹಿಳೆ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಆದರೆ ಪೊಲೀಸರು ಆರೋಪಿ ವ್ಯಕ್ತಿಯನ್ನು ಕರೆಸಿ ಮುಚ್ಚಳಿಕೆ ಬರೆಸಿ ಕಳಿಸಿಕೊಟ್ಟಿದ್ದಾರೆ. ಹಾಗಿದ್ದರೂ ನೀರು ಕೊಡದೆ ಸತಾಯಿಸುವ ಚಾಳಿ ಮುಂದುವರಿದಿದೆ. ಇದರಿಂದಾಗಿ ಮಹಿಳೆ ತೀವ್ರ ನೊಂದುಕೊಂಡಿದ್ದು, ಮಹಿಳೆಯರ ಆಸರೆಯಾದ ಸಖೀ ಕೇಂದ್ರಕ್ಕೂ ದೂರು ನೀಡಿದ್ದಾರೆ. ಅಲ್ಲಿನ ಸಿಬಂದಿ ಬಂದು ಪರಿಶೀಲನೆ ನಡೆಸಿದ್ದು, ಬಿಟ್ಟಿ ಸಲಹೆ ಕೊಟ್ಟು ಹೋಗಿದ್ದಾರಂತೆ. ತನ್ನ ಕಿರುಕುಳದ ಬಗ್ಗೆ 112 ಸಂಖ್ಯೆಗೂ ಮಹಿಳೆ ದೂರು ನೀಡಿದ್ದು, ಕಟ್ಟಡ ಮಾಲೀಕನ ದುರ್ನಡತೆ ಬಗ್ಗೆ ಹೇಳಿಕೊಂಡಿದ್ದಾರೆ. ಆದರೂ ಪ್ರಯೋಜನ ಆಗಿಲ್ಲ ಎಂದು ಮಹಿಳೆ ದೂರಿದ್ದಾರೆ.
ಈ ಹಿಂದೆ ಸುಧಾಕರ ಭಂಡಾರಿ ತನ್ನ ನಾಯಿಯನ್ನು ಬಿಟ್ಟು ಕಚ್ಚುವಂತೆ ಮಾಡಿದ್ದು ಆನಂತರ ಮಹಿಳೆ ಲೇಡಿಗೋಶನ್ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದು ಸುಧಾರಿಸಿಕೊಂಡಿದ್ದರು. ಆದರೂ ತಾಯಿ, ಮಕ್ಕಳಿಗೆ ಕಿರುಕುಳ ಕೊಡುವುದು ಬಿಟ್ಟಿಲ್ಲ. ನೀರು, ವಿದ್ಯುತ್ ಮನುಷ್ಯನ ಮೂಲಭೂತ ಹಕ್ಕು. ಅದನ್ನು ಬಾಡಿಗೆದಾರ ನಿರಾಕರಿಸುವ ಹಾಗಿಲ್ಲ. ಅಲ್ಲದೆ, ಅಗ್ರಿಮೆಂಟ್ ಅವಧಿಯಲ್ಲಿ ಮೂಲಭೂತ ಸೌಕರ್ಯ ಒದಗಿಸುವುದು ಕರ್ತವ್ಯ ಆಗಿರುತ್ತದೆ. ಪೊಲೀಸರೇ ಈ ಬಗ್ಗೆ ಕಠಿಣ ಕ್ರಮ ಜರುಗಿಸಬೇಕಾಗಿದೆ.
Mangalore Mental torture to by house owner in ullal, case filed. The owner is alleged of disconnecting curent and water facility to the women who is staying for rent.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
30-04-25 11:26 am
Mangalore Correspondent
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm