ಬ್ರೇಕಿಂಗ್ ನ್ಯೂಸ್
05-01-25 10:51 pm Mangalore Correspondent ಕರಾವಳಿ
ಉಳ್ಳಾಲ, ಜ.5: ಉಳ್ಳಾಲ ತಾಲೂಕಿನ ಪ್ರತಿಷ್ಟಿತ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ನಿರ್ದೇಶಕರ ಚುನಾವಣೆ ಭಾನುವಾರ ನಡೆದಿದ್ದು, ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು ಅವರ ನೇತೃತ್ವದ ಕೋಟೆಕಾರು ಸಹಕಾರ ಅಭಿವೃದ್ಧಿ ಸಮಿತಿಯ ಸಮಾನ ಮನಸ್ಕ ಅಭ್ಯರ್ಥಿಗಳು 12 ಕ್ಷೇತ್ರಗಳಲ್ಲೂ ಸ್ಪರ್ಧಿಸಿ ಗೆದ್ದು ಬೀಗಿದ್ದಾರೆ. 12 ಕ್ಷೇತ್ರದಲ್ಲೂ ಸ್ಫರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಖಾತೆ ತೆರೆಯುವಲ್ಲಿ ಮುಗ್ಗರಿಸಿದ್ದಾರೆ.
ಭಾನುವಾರ ಕೋಟೆಕಾರಿನ ಸ್ಟೆಲ್ಲಾ ಮೆರೀಸ್ ಶಾಲೆಯಲ್ಲಿ ಬೆಳಗ್ಗೆ 9 ರಿಂದ 4 ಗಂಟೆಯ ವರೆಗೆ ಸಂಘದ ಸದಸ್ಯರಿಂದ ಮತದಾನ ಪ್ರಕ್ರಿಯೆ ನಡೆದಿದ್ದು, ಸಂಜೆ ವೇಳೆ ಮತ ಎಣಿಕೆ ನಡೆದಿದೆ. ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮಂಗಳೂರು ಇಲ್ಲಿನ ಅಧೀಕ್ಷಕರಾದ ಬಿ.ನಾಗೇಂದ್ರ ಅವರು ಫಲಿತಾಂಶವನ್ನು ಘೋಷಿಸಿದರು. ಫಲಿತಾಂಶದಲ್ಲಿ ಕೋಟೆಕಾರು ಸಹಕಾರ ಅಭಿವೃದ್ಧಿ ಸಮಿತಿಯ ಸಮಾನ ಮನಸ್ಕ 12 ಅಭ್ಯರ್ಥಿಗಳೂ ಜಯ ಗಳಿಸಿದ್ದಾರೆ.
ಸಾಲಗಾರ ಸಾಮಾನ್ಯ ಕ್ಷೇತ್ರದಲ್ಲಿ ಅಬ್ಬುಸಾಲಿ ಕೆ.ಬಿ, ಕೃಷ್ಣಪ್ಪ ಸಾಲ್ಯಾನ್, ಗಂಗಾಧರ ಯು, ರಾಘವ ಉಚ್ಚಿಲ್, ರಾಘವ ಆರ್.ಉಚ್ಚಿಲ್, ಸಾಲಗಾರ ಅನುಸೂಚಿತ ಜಾತಿ ಕ್ಷೇತ್ರದಲ್ಲಿ ಕೃಷ್ಣಪ್ಪ, ಸಾಲಗಾರ ಅನುಸೂಚಿತ ಪಂಗಡ ಕ್ಷೇತ್ರದಲ್ಲಿ ಬಾಬು ನಾಯಕ್ , ಸಾಲಗಾರ ಹಿಂದುಳಿದ ವರ್ಗ "ಎ" ಕ್ಷೇತ್ರದಲ್ಲಿ ಅರುಣ್ ಕುಮಾರ್ ಯು, ಸಾಲಗಾರ ಹಿಂದುಳಿದ ವರ್ಗ "ಬಿ" ಕ್ಷೇತ್ರದಲ್ಲಿ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು, ಸಾಲಗಾರ ಮಹಿಳಾ ಮೀಸಲು ಸ್ಥಾನ ಕ್ಷೇತ್ರದಲ್ಲಿ ಸುನಿತಾ ಲೋಬೊ, ಸುರೇಖಾ ಚಂದ್ರಹಾಸ್ ಜಯ ಗಳಿಸಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಲ್ಲಿ ಉದಯ ಕುಮಾರ್ ಶೆಟ್ಟಿ ಕೊಂಡಾಣಗುತ್ತು ಜಯ ಗಳಿಸಿದ್ದಾರೆ.
ಮತದಾನ ಕೇಂದ್ರದ ಬಳಿಯಲ್ಲೇ ಕೆಲವರಿಗೆ ಸಂಘದ ಸದಸ್ಯತನದ ನಕಲಿ ಗುರುತಿನ ಕಾರ್ಡ್ ಗಳನ್ನ ನೀಡಿ ಮತದಾನ ನಡೆಸುತ್ತಿರುವ ಬಗ್ಗೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.
Mangalore Kotekar Samaja Seva Sahakari Sangha bank election, major victory. BJP members thronged to open bank accounts soon after their leaders were announced as winners.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm