ಬ್ರೇಕಿಂಗ್ ನ್ಯೂಸ್
01-01-25 11:18 am Mangalore Correspondent ಕರಾವಳಿ
ಮಂಗಳೂರು, ಜ.1: ನಗರ ಹೊರವಲಯದ ಅರ್ಕುಳ ಬಳಿ ನಡೆದ ಅಪಘಾತದಲ್ಲಿ ಸಸಿಹಿತ್ಲು ಯಕ್ಷಗಾನ ಮೇಳದ ಸ್ತ್ರೀ ವೇಷಧಾರಿ ಪ್ರವೀತ್ ಆಚಾರ್ಯ (22) ಸ್ಥಳದಲ್ಲೇ ದುರಂತ ಸಾವಿಗೀಡಾಗಿದ್ದಾರೆ.
ವಿಟ್ಲ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಎಸ್ ಡಬ್ಲ್ಯು ಮಾಡುತ್ತಿದ್ದ ಪ್ರವೀತ್ ಇದರ ಜೊತೆಗೆ ಸಸಿಹಿತ್ಲು ಮೇಳದಲ್ಲಿ ಯಕ್ಷಗಾನ ಕಲಾವಿದರಾಗಿದ್ದರು. ಮಂಗಳವಾರ ಬೈಕ್ ನಲ್ಲಿ ಬಿಸಿ ರೋಡಿನಿಂದ ಮಂಗಳೂರಿನತ್ತ ಬರುತ್ತಿದ್ದಾಗ ಅರ್ಕುಳ ಹೆದ್ದಾರಿಯಲ್ಲಿ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಐಸ್ ಕ್ರೀಮ್ ಸಾಗಿಸುತ್ತಿದ್ದ ಟೆಂಪೋ ಪ್ರವೀತ್ ತಲೆಯ ಮೇಲೆ ಚಲಿಸಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪದ ಮೇಲಂತಬೆಟ್ಟು ಮುಂಡೂರು ನಿವಾಸಿ ಶೇಖರ ಆಚಾರ್ಯ ಮತ್ತು ಭಾರತಿ ಆಚಾರ್ಯ ಅವರ ಪುತ್ರ ಪ್ರವೀತ್ ವಿಟ್ಲಕ್ಕೆ ಎಂಎಸ್ ಡಬ್ಲ್ಯು ಕಲಿಯಲು ಬರುತ್ತಿದ್ದರು. ಯಕ್ಷಗಾನ ವೇಷಧಾರಿಯಾಗಿ ಹೋಗಬೇಕಾದ ಕಾರಣ ಮಂಗಳೂರು ಸಮೀಪದ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಕೆಲವೊಮ್ಮೆ ಪಡೀಲ್ ಮತ್ತು ಬಿಸಿ ರೋಡ್ ನಲ್ಲಿ ವಾಹನ ನಿಲ್ಲಿಸಿ ವಿಟ್ಲ ಕಾಲೇಜಿಗೆ ಹೋಗುತ್ತಿದ್ದರು. ಮಂಗಳವಾರ ಬಿಸಿ ರೋಡ್ ನಲ್ಲಿ ಬೈಕ್ ನಿಲ್ಲಿಸಿ ವಿಟ್ಲ ಕಾಲೇಜಿಗೆ ತೆರಳಿದ್ದು ಸಂಜೆಯ ವೇಳೆಗೆ ಸ್ನೇಹಿತನೊಂದಿಗೆ ಬಸ್ಸಿನಲ್ಲಿ ಬಂದು ಅಲ್ಲಿಂದ ಬೈಕಿನಲ್ಲಿ ಮಂಗಳೂರಿಗೆ ಬರುತ್ತಿದ್ದರು.
ಮೂರು ವರ್ಷಗಳಿಂದ ಸಸಿಹಿತ್ಲು ಭಗವತಿ ಮೇಳದಲ್ಲಿ ಯಕ್ಷಗಾನ ಕಲಾವಿದನಾಗಿದ್ದು, ಮಂಗಳವಾರ ಗುರುಪುರ ಬಳಿಯ ಕಂದಾವರದಲ್ಲಿ ಯಕ್ಷಗಾನದಲ್ಲಿ ಭಾಗವಹಿಸಬೇಕಿತ್ತು. ಸ್ತ್ರೀವೇಷಧಾರಿಯಾಗಿ ದೇವಿ, ಇನ್ನಿತರ ಪ್ರಧಾನ ಪಾತ್ರಗಳನ್ನು ಮಾಡುತ್ತಿದ್ದ ಪ್ರವೀತ್ ಆಚಾರ್ಯ ಕಿರಿಯ ವಯಸ್ಸಿನಲ್ಲಿಯೇ ಭರವಸೆ ಮೂಡಿಸಿದ್ದರು. ಕಾಲೇಜು ಕಲಿಕೆಗೆ ಹಣಕಾಸು ಅಗತ್ಯವಿದ್ದುದರಿಂದ ಯಕ್ಷಗಾನ ಕಲಾವಿದನಾಗಿ ತೆರಳುತ್ತಿದ್ದರು. ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಯುವ ಕಲಾವಿದ ಜೀವ ತೆತ್ತಿದ್ದಾರೆ.
Mangalore 22 year old Yakshagana artiste dies of road accident at arkula. The deceased has been identified as Pravith Acharaya.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm