ಬ್ರೇಕಿಂಗ್ ನ್ಯೂಸ್
10-11-24 04:44 pm Mangalore Correspondent ಕರಾವಳಿ
ಮಂಗಳೂರು, ನ.10: ನೋಡ ನೋಡುತ್ತಲೇ ನಗರದ ನಾರಾಯಣ ಗುರು ವೃತ್ತದ (ಲೇಡಿಹಿಲ್ ವೃತ್ತ) ಬಳಿ ಮಾರುತಿ 800 ಕಾರು ಬೆಂಕಿ ಹತ್ತಿಕೊಂಡು ಧಗಧಗನೆ ಉರಿದು ಬಿಟ್ಟಿದೆ. ಮಧ್ಯಾಹ್ನ 3.30ರ ಸುಮಾರಿಗೆ ಲೇಡಿಹಿಲ್ ಪೆಟ್ರೋಲ್ ಪಂಪ್ ಗೆ ಕಾರು ಬಂದಿದ್ದು, ಪಂಪ್ ಬಳಿ ನಿಲ್ಲುತ್ತಲೇ ಬೆಂಕಿ ಹತ್ತಿಕೊಂಡಿದೆ.
ಬಜ್ಪೆ ಕಡೆಯಿಂದ ಬಂದಿರುವ ಕಾರು ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಖರ ಬಿಸಿಲಿಗೆ ಶಾರ್ಟ್ ಸರ್ಕಿಟ್ ಆಗಿಯೋ ಏನೋ ಬೆಂಕಿ ಹೊತ್ತಿದ್ದು, ಬೆಂಕಿಯ ಜ್ವಾಲೆ ಪೆಟ್ರೋಲ್ ಪಂಪನ್ನು ಆವರಿಸಿದೆ. ಕೂಡಲೇ ಪಂಪ್ ಸಿಬಂದಿ, ಬಕೆಟ್ ಗಳಲ್ಲಿ ನೀರು ಸುರಿದು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಪಂಪ್ ಬಳಿಯಲ್ಲೇ ಘಟನೆ ನಡೆದಿದ್ದರಿಂದ ಆತಂಕ ವ್ಯಕ್ತವಾಗಿತ್ತು. ಪಂಪ್ ಅಡಿಭಾಗದಲ್ಲಿರುವ ಪೆಟ್ರೋಲ್ ಟ್ಯಾಂಕಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದರೆ ದುರಂತವೇ ಆಗಿರುತ್ತಿತ್ತು.



ಲೇಡಿಹಿಲ್ ಪೆಟ್ರೋಲ್ ಪಂಪ್ ನಲ್ಲಿ ವೈಟ್ ಪೆಟ್ರೋಲ್ ಕೂಡ ಇದೆ. ಮಂಗಳೂರು ನಗರದಲ್ಲಿ ಈ ಪಂಪ್ ನಲ್ಲಿ ಮಾತ್ರ ಹೈಎಂಡ್ ಕಾರು, ಬೈಕ್ ಗಳಿಗೆ ಬಳಸುವಂಥ ಪೆಟ್ರೋಲ್ ಸಿಗುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಅತಿ ಹೆಚ್ಚು ಜ್ವಲಿಸುವಂತಹ ಪೆಟ್ರೋಲ್ ಶೇಖರಣೆ ಇದ್ದುದರಿಂದ ಪಂಪ್ ಸಿಬಂದಿಗೆ ಭಯ ಆವರಿಸಿತ್ತು. ಸಕಾಲದಲ್ಲಿ ನೀರು ಹಾಕಿ, ಆನಂತರ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಲೇ ಅದರಲ್ಲಿದ್ದವರು ಹೊರಗಿಳಿದಿದ್ದು ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಬೆಂಕಿ ಹತ್ತಿಕೊಂಡಿತ್ತು.
A Maruti 800 #car caught #fire at the #Ladyhill #petrolpump in Mangalore. Fortunately, no casualties have been reported. The petrol pump staff immediately used a fire extinguisher. A video of the incident has gone viral on social media. #carfiremangalore #mangalore #BreakingNews pic.twitter.com/dBKMrnuVJQ
— Headline Karnataka (@hknewsonline) November 10, 2024
Maruti 800 car catches fire at ladyhill petrol pump in Mangalore. No casualties have been reported. Petrol pump staffs immediately used the fire extinguisher. Video of this has gone viral on social media.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm