ಬ್ರೇಕಿಂಗ್ ನ್ಯೂಸ್
07-11-24 10:30 pm Mangalore Correspondent ಕರಾವಳಿ
ಮಂಗಳೂರು, ನ.7: ಅಡ್ಯಾರ್- ಪಡೀಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಗುಂಡಿ ಬಿದ್ದು ಸಂಚಾರಕ್ಕೆ ತೀವ್ರ ತೊಡಕಾಗಿತ್ತು. ಪಡೀಲಿನಲ್ಲಿ ರಸ್ತೆ ಹೊಂಡ ಬಿದ್ದಿರುವ ಬಗ್ಗೆ ಹೆಡ್ ಲೈನ್ ಕರ್ನಾಟಕ ಸುದ್ದಿ ಬಿತ್ತರಿಸಿತ್ತು. ಅದರ ಬೆನ್ನಲ್ಲೇ ಹೊಂಡ ಮುಚ್ಚುವ ಕಾಮಗಾರಿ ನಡೆದಿತ್ತು. ವಾಹನ ಸವಾರರು ಹೆದ್ದಾರಿಗೊಂದು ಒಳ್ಳೆಯ ಟಾರು ಹಾಕಲಿ, ಇಲ್ಲಿ ಟಾರು ಕಾಣದೆ ಎಷ್ಟೋ ವರ್ಷ ಆಯ್ತು ಎಂದು ನಿರೀಕ್ಷೆ ಮಾಡಿದ್ದರು. ಇದೀಗ ಅಡ್ಯಾರು- ಪಡೀಲ್ ಹೆದ್ದಾರಿಯಲ್ಲಿ ಕಡೆಗೂ ಟಾರು ಹಾಕಿದ್ದು, ಫಳಫಳನೆ ಹೊಳೆಯುವ ಹೊಸ ರಸ್ತೆ ಸಂಚಾರಕ್ಕೆ ತೆರೆದುಕೊಂಡಿದೆ.
ಸುರತ್ಕಲ್ - ಬಿಸಿ ರೋಡ್ ಮಧ್ಯೆ 15 ವರ್ಷಗಳ ಹಿಂದೆ ಹೆದ್ದಾರಿ ನಿರ್ಮಾಣವಾಗಿತ್ತು. ಇರ್ಕಾನ್ ಸಂಸ್ಥೆಯವರು ಈ ರಸ್ತೆಯನ್ನು ನಿರ್ಮಿಸಿ ನಿರ್ವಹಣೆಗೆ ಎನ್ಎಂಪಿಟಿ ಬಂದರಿಗೆ ನೀಡಿದ್ದರು. ಕರಾವಳಿಯಲ್ಲಿ ಮೊದಲ ಬಾರಿಗೆ ಈ ರಸ್ತೆ ಚತುಷ್ಪಥಕ್ಕೆ ತೆರೆದುಕೊಂಡಿದ್ದರೂ, ಕಾಮಗಾರಿ ಸಮರ್ಪಕವಾಗದೆ ಹೆದ್ದಾರಿಯಲ್ಲಿ ಅಪಘಾತಗಳೇ ಹೆಚ್ಚಿದ್ದವು. ಮಂಗಳೂರು- ಬಿಸಿ ರೋಡ್ ಮಧ್ಯೆ ತಿರುವಿನ ರಸ್ತೆಗಳನ್ನು ನೇರವಾಗಿಸದೆ ಇದ್ದಂತೆಯೇ ತಿರುವು ಮುರುವು ರಸ್ತೆಗಳನ್ನು ನಿರ್ಮಿಸಲಾಗಿತ್ತು.
15 ವರ್ಷಗಳಲ್ಲಿ ಕೆಲವು ಬಾರಿ ಗುಂಡಿ ಬಿದ್ದ ಜಾಗಕ್ಕೆ ತೇಪೆ ಹಚ್ಚಿದ್ದು ಬಿಟ್ಟರೆ ಪೂರ್ತಿಯಾಗಿ ಡಾಮರು ಹಾಕಿದ್ದು ಇಲ್ಲ. ಈಗ ಪಡೀಲಿನಲ್ಲಿ ರಸ್ತೆಗೆ ಪೂರ್ತಿಯಾಗಿ ಡಾಮರು ಹಾಕಲಾಗುತ್ತಿದ್ದು ಕಪ್ಪಗಿನ ರಸ್ತೆ ಹೊಳೆಯುತ್ತಿದೆ. ಆದರೆ, ಆಧುನಿಕ ಮಾದರಿಯ ರಬ್ಬರ್ ಡಾಮರು ಹಾಕಿದರಷ್ಟೇ ಈಗ ಬಾಳಿಕೆ. ಅದಿಲ್ಲದಿದ್ದರೆ, ಮುಂದಿನ ವರ್ಷದ ಮಳೆಗಾಲಕ್ಕೆ ಡಾಮರು ಎದ್ದು ಹೋಗುತ್ತದೆ. ಕೇರಳದಲ್ಲಿ ಹೊಸತಾಗಿ ರಬ್ಬರ್ ಡಾಮರ್ ಹಾಕಿದರೂ, 5 ವರ್ಷ ಕಾಲ ಗ್ಯಾರಂಟಿ ಕೊಡಬೇಕು. ಅದರಲ್ಲಿ ಸಮಸ್ಯೆಯಾದರೆ, ಡಾಮರು ಹಾಕಿದವರೇ ಹೊಣೆ ಹೊರಬೇಕು. ಇಂಥ ಕಾನೂನು ಎಲ್ಲ ಕಡೆ ಇದ್ದರೂ ಅದನ್ನು ಮಂಗಳೂರಿನಲ್ಲಿ ಲಾಗಾಯ್ತಿ ಮಾಡ್ತಾ ಇಲ್ಲ. ಇದರಿಂದಾಗಿ ಹೆದ್ದಾರಿ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ರಸ್ತೆ ಮಾಡೋದು, ತಿರುವು ಮುರುವಿನಲ್ಲಿ ಅಪಘಾತ ಆದರೂ ನಿರ್ಲಕ್ಷ್ಯ ಮಾಡೋದು, ಉತ್ತಮ ಗುಣಮಟ್ಟದ ಡಾಮರು ಹಾಕದಿರುವುದನ್ನು ಮಾಡುತ್ತ ಇದ್ದಾರೆ.
Mangalore Padil road filled with huge pot holes finally gets new tar after report by headline karnataka. Report was made expressing the pain of two wheelers who had to cross padil road.
22-08-25 10:28 pm
Bangalore Correspondent
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
22-08-25 10:00 pm
HK News Desk
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
22-08-25 05:07 pm
Mangalore Correspondent
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಬೆಳ್ತಂಗಡಿ ಠಾಣೆಯಲ್ಲ...
22-08-25 04:21 pm
Activist Mahesh Shetty Timarodi Arrest: ಬಿ.ಎಲ...
21-08-25 09:35 pm
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
22-08-25 09:57 pm
HK News Desk
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm