ಬ್ರೇಕಿಂಗ್ ನ್ಯೂಸ್
27-10-24 02:41 pm HK News Desk ಕರಾವಳಿ
ಮಂಗಳೂರು, ಅ.27: ನನ್ನನ್ನು ಶಾಸಕ ಮಾಡಿದ್ದು ಕಾಂಗ್ರೆಸ್ ಪಕ್ಷ. 22 ವರ್ಷಗಳಿಂದ ಬಿಜೆಪಿಯಲ್ಲಿದ್ದೆ, ಕ್ಷೇತ್ರದ ಅಭಿವೃದ್ಧಿಯ ಕನಸು ಹೊಂದಿದ್ದೇನೆ, ಬಿಜೆಪಿಯಲ್ಲಿ ಅವಕಾಶ ಸಿಗದೇ ಇದ್ದುದರಿಂದ ಕಾಂಗ್ರೆಸಿಗೆ ಬಂದಿದ್ದೇನೆ. ಪಕ್ಷ ಬಿಟ್ಟು ಹೋಗುವ ಯಾವುದೇ ಉದ್ದೇಶ ಇಲ್ಲ. ನಾನೊಬ್ಬ ಹಿಂದು, ವಿಶ್ವ ಹಿಂದು ಪರಿಷತ್ತಿನ ಕಾರ್ಯಕ್ರಮಕ್ಕೆ ಕರೆದಿದ್ದರು, ಹೋಗಿದ್ದೇನೆ. ಶಾಸಕನಾಗಿ ಮಸೀದಿಗೆ, ಚರ್ಚ್, ದೇವಸ್ಥಾನ ಎಲ್ಲದಕ್ಕೂ ಹೋಗುತ್ತೇನೆ. ಅದರಲ್ಲಿ ತಪ್ಪು ಕಾಣುವುದಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.
ವಿಶ್ವ ಹಿಂದು ಪರಿಷತ್ ಕಚೇರಿಯ ಭೂಮಿಪೂಜನ ಕಾರ್ಯಕ್ರಮಕ್ಕೆ ಶಾಸಕ ಅಶೋಕ್ ರೈ ಹೋಗಿದ್ದಕ್ಕೆ ಎಡಪಂಥೀಯರಿಂದ ಟೀಕೆ ವ್ಯಕ್ತವಾಗಿತ್ತು. ಅಶೋಕ್ ರೈ ಬಿಜೆಪಿಗೆ ಹೋಗುವ ಸೂಚನೆ ಎಂಬ ಟೀಕೆ ಕೇಳಿಬಂದಿತ್ತು. ಸುದ್ದಿಗೋಷ್ಟಿ ಸಂದರ್ಭದಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶೋಕ್ ರೈ, ಭಜನಾ ಮಂದಿರ, ಮಸೀದಿಗಳಲ್ಲಿ ಅತಿ ಹೆಚ್ಚು ಸರ್ಕಾರಿ ಜಾಗದಲ್ಲೇ ಇದೆ. ಇವನ್ನು ಸರಿಪಡಿಸಿ ಹಕ್ಕುಪತ್ರ ಪಡೆಯುವಂತೆ ಹೇಳಿದ್ದೇನೆ. ಈ ಸಲ ಅತಿ ಹೆಚ್ಚು ಅನುದಾನ ಭಜನಾ ಮಂದಿರಗಳಿಗೆ ಕೊಟ್ಟಿದ್ದರೂ, ಸರಿಯಾದ ದಾಖಲೆ ಇಲ್ಲದ ಕಾರಣ ಅನುದಾನ ಹಿಂದಿರುಗಿ ಬಂದಿದೆ.
ಶಾಸಕನಾಗಿ ನನಗೆ ಎಲ್ಲರೂ ಒಂದೇ. ನಾನೊಬ್ಬ ಹಿಂದು, ಶಾಸಕನೆಂದು ನನ್ನ ಧರ್ಮದಲ್ಲಿ ಬದಲಾವಣೆ ಮಾಡಲು ಆಗಲ್ಲ. ದಿನವೂ ಬೆಳಗ್ಗೆ ಮತ್ತು ರಾತ್ರಿ 50 ಶ್ಲೋಕಗಳನ್ನು ಹೇಳಿಯೇ ಕೆಲಸ ಮುಂದುವರಿಸುತ್ತೇನೆ. ಹುಲಿ ವೇಷ, ಕಂಬಳ ಮಾಡಿ ಎಲ್ಲರನ್ನೂ ಕರೆಯುತ್ತೇನೆ, ಪಕ್ಷ ಭೇದ ಮಾಡಲ್ಲ, ಹೋಗುತ್ತೇವೆ. ಮುಸ್ಲಿಮರು, ಕ್ರಿಸ್ತಿಯನ್ನರ ಕಾರ್ಯಕ್ರಮಕ್ಕೂ ಹೋಗುತ್ತೇನೆ. ಹಿಂದುಗಳಲ್ಲಿಗೆ ಬರುವುದಿಲ್ಲ ಎಂದು ಹೇಳಬಾರದಲ್ವಾ ಎಂದು ಮರು ಪ್ರಶ್ನೆ ಹಾಕಿದರು.
ಪುತ್ತೂರಿನಲ್ಲಿ ಅತಿ ಹೆಚ್ಚು ಅಡಿಕೆ ಕೃಷಿಕರಿದ್ದಾರೆ, ಬರ್ಮಾ ಅಡಿಕೆ ಬರುತ್ತಿರುವುದರಿಂದ ಸಮಸ್ಯೆ ಆಗಲ್ವೇ ಎಂಬ ಪ್ರಶ್ನೆಗೆ, ಅಡಿಕೆ ಸೇರಿ 28 ವಾಣಿಜ್ಯ ಬೆಳೆಗಳನ್ನು ಕೃಷಿ ಬೆಳೆಗಳೆಂದು ಪರಿಗಣಿಸಲು ಸರಕಾರಕ್ಕೆ ಪ್ರಸ್ತಾಪ ಇಟ್ಟಿದ್ದೇವೆ. ಅಡಿಕೆ ಈಗಲೂ ವಾಣಿಜ್ಯ ಬೆಳೆಯೆಂದೇ ಪರಿಗಣನೆ ಇದೆ. ಅಡಿಕೆಯನ್ನು ಜಗಿಯುವುದಕ್ಕೆ ಬಿಟ್ಟರೆ ಬೇರಾವುದಕ್ಕೂ ಬಳಕೆ ಮಾಡುವುದಿಲ್ಲ. ಅಡಿಕೆ ಕೃಷಿಕರ ಮಕ್ಕಳು ಬೇರೆ ಬೆಳೆಗಳತ್ತಲೂ ಮನಸ್ಸು ಮಾಡಬೇಕು. ಕೇವಲ ಅಡಿಕೆಗಾಗಿ ಜೋತು ಬೀಳುವುದನ್ನು ಮಾಡಬಾರದು ಎಂದು ಹೇಳಿದರು.
ತುಳು ಭಾಷೆಯನ್ನು ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯಾಗಿ ಮಾಡಲು ಮೂರು ರಾಜ್ಯಗಳ ಕಾನೂನು ಮಾದರಿಗಳನ್ನು ಪಡೆದಿದ್ದು, ಸರ್ಕಾರಕ್ಕೆ ವರದಿ ಕೊಟ್ಟಿದ್ದೇನೆ. ಸದ್ಯದಲ್ಲೇ ಸಿಎಂ ಜೊತೆಗೆ ಕುಳಿತು ಈ ಬಗ್ಗೆ ಮಾತುಕತೆ ನಡೆಸಿ ದ್ವಿತೀಯ ಭಾಷೆಯಾಗಿ ಮಾಡಿಸುತ್ತೇನೆ. ಅದು ನನ್ನ ಆದ್ಯತೆ. ಈ ಭಾಗದ ಹಲವರು ಶಾಸಕರಾಗಿದ್ದರೂ, ತುಳು ಭಾಷೆಯ ಬಗ್ಗೆ ಯಾರು ಕೂಡ ಗಮನ ಹರಿಸಿರಲಿಲ್ಲ ಎಂದರು.
ಪೇಟಾದವರ ಬಾಯಲ್ಲಿ ನೊರೆ ಬರುತ್ತದೆಯೇ ?
ಕಳೆದ ಬಾರಿ ಬೆಂಗಳೂರು ಕಂಬಳವನ್ನು 9 ಕೋಟಿ ಖರ್ಚಿನಲ್ಲಿ ಮಾಡಿದ್ದೇವೆ. ಈ ಸಲ ಪೇಟಾದವರು ಕೇಸು ಮಾಡಿದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಾತ್ರ ಕಂಬಳ ಮಾಡುತ್ತಾರೆಂದು ಬರೆದು ಕೊಟಿದ್ದಾರೆಂದು ಆಕ್ಷೇಪಿಸಿದ್ದಾರೆ. ಕರಾವಳಿ ಜಿಲ್ಲೆಗಳ ಜನಪದ ಕ್ರೀಡೆಯೆಂದು ಹೇಳಿದ್ದೇವೆ, ಇಲ್ಲಿ ಮಾತ್ರ ಮಾಡುತ್ತೇವೆಂದು ನಾವು ಬರೆದುಕೊಟ್ಟಿಲ್ಲ. ಮಣಿಪುರದ ನೃತ್ಯವನ್ನು ಮಣಿಪುರದಲ್ಲಿ ಮಾತ್ರ ಮಾಡಬೇಕೆನ್ನುವುದು ಸರಿಯಲ್ಲ. ಬೇರೆ ಕಡೆ ಮಾಡಬಾರದೇ ಎಂಬ ಪ್ರಶ್ನೆ ಬರುತ್ತದೆ. ಇನ್ನು ಕೋಣದ ಬಾಯಲ್ಲಿ ನೊರೆ ಬರುತ್ತದೆ ಎಂದು ಆಕ್ಷೇಪಿಸಿದ್ದಾರೆ. ಕೋಣನ ಬಾಯಲ್ಲಿ ನೊರೆ ಬರದೆ ಪೇಟಾದವರ ಬಾಯಲ್ಲಿ ನೊರೆ ಬರುತ್ತದೆಯೇ.? ಇವರಿಗೆ ಅಮೆರಿಕದಿಂದ ದುಡ್ಡು ಬರುತ್ತದೆ, ದೊಡ್ಡ ವಕೀಲರನ್ನು ಇಟ್ಟು ಆಕ್ಷೇಪ ಮಾಡುತ್ತಿದ್ದಾರೆ. ಇವರು ತಾಕತ್ತಿದ್ದರೆ ಒಂದು ಜೊತೆ ಕೋಣವನ್ನು ಒಂದು ತಿಂಗಳು ಸಾಕಿ ನೋಡಲಿ ಎಂದು ಸವಾಲು ಹಾಕಿದರು.
Mangalore Ashok rain slams those mocking him attending VHP bhoomi Pooja in puttur. Ashok Rai was mocked on social media after he attending the Vhp bhoomi Pooja being a congress MLA.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm