ಬ್ರೇಕಿಂಗ್ ನ್ಯೂಸ್
08-09-24 09:06 pm Mangalore Correspondent ಕರಾವಳಿ
Photo credits : CatholicTime
ಮಂಗಳೂರು, ಸೆ.8: ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಗಣೇಶೋತ್ಸವ ಜೊತೆ ಜೊತೆಗೆ ಕ್ರೈಸ್ತರ ಮೋಂತಿ ಹಬ್ಬವೂ ಬಂದಿದೆ. ಭಾನುವಾರ ಉಭಯ ಜಿಲ್ಲೆಗಳ ಕ್ಯಾಥೊಲಿಕ್ ಚರ್ಚ್ ಗಳಲ್ಲಿ ಮೋಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮದರ್ ಮೇರಿಯ ಜನ್ಮದಿನದ ಹೆಸರಲ್ಲಿ ಮೋಂತಿ ಹಬ್ಬ ಆಚರಿಸಲಾಗುತ್ತದೆ. ಇದರ ಜೊತೆಗೆ ಕ್ರೈಸ್ತರ ಕೃಷಿ ಹಿನ್ನೆಲೆ ಬಿಂಬಿಸುವ ವಿವಿಧ ಆಚರಣೆಗಳನ್ನೂ ಮಾಡಲಾಗುತ್ತದೆ. ಭತ್ತದ ತೆನೆಯನ್ನು ತಂದು ಪೂಜಿಸಿ ಚರ್ಚ್ ಪಾದ್ರಿಗಳೇ ಭಕ್ತರಿಗೆ ವಿತರಣೆ ಮಾಡುತ್ತಾರೆ.
ಇದಲ್ಲದೆ, ಭತ್ತ ಇನ್ನಿತರ ಬೆಳೆಗಳು ಕೊಯ್ಲಿಗೆ ಬರುವುದರಿಂದ ಕೃಷಿ ಹಿನ್ನೆಲೆಯ ಕ್ರೈಸ್ತರು ಮೋಂತಿ ಹಬ್ಬಕ್ಕೆ ತಮ್ಮ ಬೆಳೆಗಳನ್ನು ತಂದು ಚರ್ಚ್ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಜೀಸಸ್ ಮಗುವಾಗಿದ್ದಾಗಿನ ಚಿತ್ರಣ, ಮದರ್ ಮೇರಿಯ ಚಿತ್ರಣವನ್ನು ಹೊತ್ತ ಟೆಂಪೋವನ್ನು ಶೃಂಗರಿಸಿ ಮಹಿಳೆಯರು, ಪುರುಷರು ಮೆರವಣಿಗೆಯಲ್ಲಿ ಬರುತ್ತಾರೆ. ಕಲ್ಯಾಣಪುರದ ಚರ್ಚ್, ಮಂಗಳೂರಿನ ಸೆಬಾಸ್ಟಿಯನ್ ಚರ್ಚ್ ಸೇರಿ ಪ್ರಮುಖ ಚರ್ಚ್ ಆವರಣಗಳಲ್ಲಿ ಮೋಂತಿ ಹಬ್ಬದ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿತ್ತು. ಮಕ್ಕಳು ಹೂವನ್ನು ಹಿಡಿದು ಬಂದಿದ್ದರೆ, ದೊಡ್ಡವರು ತಾವು ಬೆಳೆಸಿದ ಫಲ ವಸ್ತುಗಳನ್ನು ತರುತ್ತಾರೆ. ಬಳಿಕ ಹೊಸ ಅಕ್ಕಿಯ ಊಟವನ್ನೂ ಏರ್ಪಡಿಸುತ್ತಾರೆ. ಅಪರೂಪಕ್ಕೆ ತಾವು ಬೆಳೆದ ತರಕಾರಿಯನ್ನೇ ಬಳಸಿ ಊಟಕ್ಕೆ ಪದಾರ್ಥಗಳನ್ನು ಮಾಡುತ್ತಾರೆ.
ಗಣೇಶೋತ್ಸವ ಸಂದರ್ಭದಲ್ಲಿ ಕೆಲವು ಹಿಂದುಗಳ ಮನೆಗಳಲ್ಲಿ ಹೊಸ ಅಕ್ಕಿ ಊಟ, ತೆನೆ ಕಟ್ಟುವ ಸಂಪ್ರದಾಯ ಇದೆ. ಈ ಬಾರಿ ಕ್ರೈಸ್ತರ ಮೋಂತಿ ಹಬ್ಬವೂ ಜೊತೆಗೆ ಬಂದಿದ್ದರಿಂದ ಕರಾವಳಿಯಲ್ಲಿ ಎಲ್ಲೆಡೆ ಹಬ್ಬದ ಸಡಗರ ಮನೆ ಮಾಡಿದೆ.
Nativity 2024, Monthi Fest celebrated with joy in all catholic churches in Mangalore. Churches across the coastal districts of Mangaluru and Udupi celebrated the feast of Our Lady of Nativity, known as Monthi Fest, with joy and devotion on Sunday, September 8.
20-06-25 10:36 am
Bangalore Correspondent
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
19-06-25 10:58 pm
HK News Desk
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
ಪಾಕ್ ಸೇನಾ ಮುಖ್ಯಸ್ಥನಿಗೆ ಡೊನಾಲ್ಡ್ ಟ್ರಂಪ್ ಔತಣ ಕೂ...
18-06-25 09:54 pm
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
20-06-25 02:59 pm
Mangalore Correspondent
ಒಂದೇ ಮರ ತೆರವಿಗೆ ಸೂಚಿಸಿದ್ದ ಸೋಮೇಶ್ವರ ಪುರಸಭೆ ; ಐ...
19-06-25 10:08 pm
ಜಪ್ಪಿನಮೊಗರು ಕಾರು ಅಪಘಾತಕ್ಕೆ ಮದ್ಯ ಸೇವನೆ, ಅತಿ ವೇ...
19-06-25 07:48 pm
Mangalore Police, Sudheer Kumar Reddy: ಕೋಮು ಸ...
19-06-25 01:05 pm
Udupi Bus Driver: ಅಡ್ಡಾದಿಡ್ಡಿ ಬಸ್ ಚಲಾಯಿಸಿ ರಂಪ...
18-06-25 10:57 pm
20-06-25 02:04 pm
Mangalore Correspondent
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm