ಬ್ರೇಕಿಂಗ್ ನ್ಯೂಸ್
31-08-24 05:19 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.31: ಪ್ರೀತಿ ಮಾಯೆ ಅಂತಾರೆ, ಪ್ರೀತಿಗೆ ಬಿದ್ದೋರು ಜಗತ್ತನ್ನೇ ಮರೆಯುತ್ತಾರೆ ಎನ್ನೋದನ್ನು ಕೇಳಿದ್ದೇವೆ. ಇಲ್ಲೊಬ್ಬಳು ಹುಡುಗಿ ಪ್ರೀತಿಯ ಬಲೆಗೆ ಬಿದ್ದು ಕೊನೆಗೆ ವಿದೇಶದಲ್ಲಿ ಉದ್ಯೋಗ ಸಿಕ್ಕಿದೆ ಎಂಬ ನೆಪ ಹೇಳಿ ಹೆತ್ತವರು, ಗೆಳತಿಯರನ್ನೆಲ್ಲ ಯಮಾರಿಸಿ ಅನ್ಯಕೋಮಿನ ಪ್ರಿಯಕರನ ಜೊತೆಗೆ ಪರಾರಿಯಾಗಲು ಯತ್ನಿಸಿದ್ದು ಪೊಲೀಸರ ಸಕಾಲಿಕ ಪ್ರಯತ್ನದಿಂದ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ.
ಲವರ್ ಜೊತೆ ಎಸ್ಕೇಪ್ ಆಗುವುದಕ್ಕಾಗಿ ತನ್ನನ್ನು ನಂಬಿದ್ದ ಹೆತ್ತವರನ್ನೇ ಯುವತಿ ಮೋಸ ಮಾಡಿರುವುದು ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಯುವತಿ, ಸವಣೂರಿನ ಕಾಲೇಜಿನಲ್ಲಿ ಇದೇ ವರ್ಷ ಪಿಯುಸಿ ತೇರ್ಗಡೆಯಾಗಿದ್ದಳು. ಬಡತನದಲ್ಲಿಯೇ ಬೆಳೆದಿದ್ದ ಮಗಳಿಗೆ ವಿದೇಶದಲ್ಲಿ ಕೆಲಸ ಸಿಕ್ಕಿರುವ ಸುದ್ದಿಕೇಳಿ ಹೆತ್ತವರು ಸಂಭ್ರಮಿಸಿದ್ದರು. ಬೆಂಗಳೂರಿನಲ್ಲಿ ಇಬ್ಬರು ಗೆಳತಿಯರಿದ್ದಾರೆಂದು ಮನೆಯವರಿಗೆ ಹೇಳಿ, ಅವರ ಜೊತೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಳು. ಏರ್ಪೋರ್ಟ್ ವರೆಗೆ ಗೆಳತಿಯರು ಜೊತೆಗೆ ತೆರಳಿದ್ದು ಅಲ್ಲಿ ಆಕೆಗೆ ಟಾಟಾ ಮಾಡಿ ಹಿಂತಿರುಗಿದ್ದರು ಎನ್ನಲಾಗಿದೆ.
ವಿದೇಶಕ್ಕೆ ತೆರಳುವ ನೆಪವೊಡ್ಡಿದ 18ರ ಯುವತಿ ಮನೆಯಲ್ಲಿ ಪೋಷಕರನ್ನು ನಂಬಿಸಿ ಆಗಸ್ಟ್ 25 ರಂದು ಮನೆ ಬಿಟ್ಟಿದ್ದಳು. ದೀಕ್ಷಾ ತಂದೆ, ತಾಯಿ ಅವಿದ್ಯಾವಂತರಾಗಿದ್ದು ಮಗಳು ಹೇಳಿದ್ದ ಕತೆಯನ್ನು ನಿಜವೆಂದೇ ನಂಬಿದ್ದರು. ಆದರೆ ಆಕೆಯನ್ನು ಕೆಲವರು ಬೆಂಗಳೂರು - ಧರ್ಮಸ್ಥಳ ಬಸ್ಸಿನಲ್ಲಿ ನೋಡಿದ್ದಾಗಿ ಹೇಳಿದ್ದರಿಂದ ಮನೆಯವರು ಅನುಮಾನಗೊಂಡಿದ್ದರು. ಅಲ್ಲದೆ, ಆಕೆಯ ಫೋನ್ ಕೂಡ ರಿಂಗ್ ಆಗುತ್ತಿದ್ದುದರಿಂದ ಸಂಶಯ ಬಲವಾಗಿತ್ತು. ಅನುಮಾನದಲ್ಲೇ ಸುಬ್ರಹ್ಮಣ್ಯ ಪೋಲಿಸರನ್ನು ಸಂಪರ್ಕಿಸಿದ್ದ ಹೆತ್ತವರು, ನಾಪತ್ತೆ ವಿಷಯ ತಿಳಿಸಿದ್ದರು. ಯುವತಿ ಮೊಬೈಲ್ ಲೊಕೇಷನ್ ನೋಡಿದಾಗ, ಬೆಂಗಳೂರಿನ ಹೊರವಲಯದಲ್ಲಿ ಇರುವ ಬಗ್ಗೆ ತಿಳಿದುಬಂದಿತ್ತು.
ಸುಬ್ರಹ್ಮಣ್ಯ ಪೊಲೀಸರ ಸಲಹೆಯಂತೆ ಬೆಂಗಳೂರಿಗೆ ತೆರಳಿದ ಯುವತಿ ಪೋಷಕರು ಉಪ್ಪಾರಪೇಟೆ ಪೋಲಿಸ್ ಠಾಣೆಯಲ್ಲಿ 28ರಂದು ದೂರು ನೀಡಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಪ್ಪಾರಪೇಟೆ ಪೋಲಿಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಸವಣೂರು ಮೂಲದ ಮುಸ್ಲಿಂ ಯುವಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸಕ್ಕಿದ್ದು ಆತನ ಜೊತೆಗೆ ಯುವತಿ ಪರಾರಿಯಾಗಲು ವಿದೇಶಿ ಉದ್ಯೋಗದ ಕತೆ ಕಟ್ಟಿದ್ದಳು ಎನ್ನುವ ಅಂಶ ಬಯಲಾಗಿದೆ. ಸದ್ಯಕ್ಕೆ ಯುವತಿಯನ್ನು ಸುಬ್ರಹ್ಮಣ್ಯ ಠಾಣೆಗೆ ಕರೆತಂದು ಮಾತುಕತೆ ನಡೆಸಲಾಗಿದೆ.
Mangalore Sullia Hindu Girl flees with muslim youth, both caught by police in Bangalore. Girl had stated that she has got a job abroad and flee with her muslim boy friend to Bangalore.
25-08-25 03:02 pm
Bangalore Correspondent
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 12:24 pm
Mangalore Correspondent
Fake Human Right, Rowdy Sheeter Madan Bugadi,...
24-08-25 10:49 pm
YouTuber Sameer MD, Beltangady Police Station...
24-08-25 02:48 pm
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
25-08-25 02:29 am
Mangaluru Correspondent
ಮುಸ್ಲಿಂ ಗಂಡನನ್ನು ರಾಡ್ ನಲ್ಲಿ ಹೊಡೆದು ಕೊಲೆಗೈದು ಶ...
24-08-25 10:33 pm
ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ ಪೂರೈಕೆ ;...
24-08-25 06:36 pm
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಜೊತೆ ಸು...
24-08-25 04:48 pm
ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಪೊಲೀಸ...
24-08-25 04:00 pm