ಬ್ರೇಕಿಂಗ್ ನ್ಯೂಸ್
22-08-24 11:09 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 22: ಅಕ್ರಮ ಮರಳುಗಾರಿಕೆಯಿಂದಾಗಿ ಮಂಗಳೂರು ಉತ್ತರ ಕ್ಷೇತ್ರದ ಅಡ್ಡೂರು- ಪೊಳಲಿ ಸೇತುವೆ ಅಪಾಯಕ್ಕೀಡಾಗಿದೆ. ಅಡ್ಡೂರಲ್ಲಿ ಮಾತ್ರ ಸೇತುವೆ ಕೆಳಗೆ ಸ್ಯಾಂಡ್ ಮೈನಿಂಗ್ ತಡೆಯುವ ತಾಕತ್ತು ಜಿಲ್ಲಾಡಳಿತಕ್ಕೆ ಇಲ್ವಾ? ಎಂದು ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.
ಸೇತುವೆ ಕೆಳಭಾಗದಲ್ಲಿ ಮರಳುಗಾರಿಕೆ ಮಾಡಿ ಸೇತುವೆ ಶಿಥಿಲವಾಗಿದೆ. ಜಿಲ್ಲಾಡಳಿತಕ್ಕೆ ಹಾಗು ಪೊಲೀಸರಿಗೆ ಅಕ್ರಮ ಮರಳುಗಾರಿಕೆ ಬಗ್ಗೆ ಹಲವಾರು ಮಂದಿ ದೂರು ನೀಡಿದ್ದರೂ ಈವರೆಗೆ ಕ್ರಮ ಆಗಿಲ್ಲ. ಶಿಥಿಲಗೊಂಡ ಸೇತುವೆ ಮೇಲೆ ವಾಹನ ಸಂಚಾರ ಬಂದ್ ಆದರೂ ಪುನಃ ಮರಳುಗಾರಿಕೆ ಆರಂಭ ಆಗಿದೆ. ಆ ಪ್ರದೇಶದಲ್ಲಿ ಮಿನಿ ಪಾಕಿಸ್ಥಾನ ನಿರ್ಮಾಣವಾಗಿದೆ. ಅಡ್ಡೂರಲ್ಲಿ ಮಾತ್ರ ಬ್ರಿಜ್ ಕೆಳಗೆ ಸ್ಯಾಂಡ್ ಮೈನಿಂಗ್ ತಡೆಯುವ ತಾಕತ್ತು ಜಿಲ್ಲಾಡಳಿತಕ್ಕೆ ಇಲ್ವಾ?
ಇಲ್ಲಿ ಅಕ್ರಮ ಮರಳುಗಾರಿಕೆ ನಿಲ್ಲದಿದ್ದರೆ ದೊಡ್ಡ ಸಮಸ್ಯೆ ಎಡೆ ಆಗಬಹುದು. ಸಾವಿರ ಕಂಪ್ಲೇಂಟ್ ಕೊಟ್ಟರೂ ಮೈನಿಂಗ್ ಸ್ಟಾಪ್ ಆಗಲ್ಲ ಏನರ್ಥ. ಹೊಸ ಬ್ರಿಜ್ ಬಂದ ಮೇಲೆ ಇದೇ ಮೈನಿಂಗ್ ಮುಂದುವರಿದರೆ ಮತ್ತದೇ ಸಮಸ್ಯೆಯಾಗತ್ತೆ. ಮರಳುಗಾರಿಕೆಗೆ ಲೈಸನ್ಸ್ ಇಲ್ಲದೆ ಮಾಡೋರನ್ನು ಯಾಕೆ ನಿಲ್ಲಿಸಲು ಆಗ್ತಿಲ್ಲ? ಈ ಅಕ್ರಮ ನಡೆಸುವವರಿಗೆ ಯಾರು ಬೆಂಬಲ ಮಾಡ್ತಿದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.
ಐವಾನ್ ವಿರುದ್ಧ ಕೋರ್ಟ್ ಹೋರಾಟ
ಐವಾನ್ ಡಿಸೋಜಾ ವಿರುದ್ಧ ಕೇಸು ಹಾಕಲು ಪೊಲೀಸರು ಧೈರ್ಯ ತೋರುತ್ತಿಲ್ಲ. ಹೀಗಾಗಿ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ನಮ್ಮ ಪೊಲೀಸರು ಅಸಹಾಯಕರಾಗಿದ್ದಾರೆ. ಕೇಳಿದ್ರೆ ಅನುಮತಿಗೆ ಕಾಯುತ್ತಿದ್ದೇವೆಂದು ಪೊಲೀಸರು ಹೇಳ್ತಿದ್ದಾರೆ. ಪೊಲೀಸರು ನಮಗೆ ತಾಕತ್ತಿಲ್ಲ ಎಂದು ಸರೆಂಡರ್ ಆಗಿ ಕೂತುಕೊಳ್ಳಲಿ. ಲೀಗಲ್ ಆಗಿ ನಾವು ಕೇಸು ಮುಂದುವರಿಸುತ್ತೇವೆ. ಹೈಕೋರ್ಟ್ ಹಿರಿಯ ನ್ಯಾಯವಾದಿಗಳ ಜೊತೆ ಚರ್ಚೆ ಮಾಡಿದ್ದು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ತಿಳಿಸಿದ್ದಾರೆ.
Mangalore eAddur bridge damage is because of too much of sand mining says MLA Bharath Shetty. Why can’t the mangalore district administration take string action he added
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 11:30 am
HK News Staffer
SDPI Protest, CM DK Shivakumar, Mangalore: ರಹ...
18-09-26 10:35 am
Mangalore, Karnataka Cabinet Meeting, DK Shiv...
18-09-26 09:49 am
ಕಸ್ತೂರಿ ರಂಗನ್ ವರದಿ ; 43 ಗ್ರಾಮಗಳ ಆತಂಕ ನಿವಾರಣೆಗ...
17-09-26 08:48 pm
Mangalore, DK Shivakumar, Coastal Karnataka,...
17-09-26 08:02 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am