ಬ್ರೇಕಿಂಗ್ ನ್ಯೂಸ್
12-08-24 09:31 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.12: ಈ ಬಾರಿಯೂ ಬೆಂಗಳೂರಿನಲ್ಲಿ ಕರಾವಳಿಯ ಕಂಬಳ ನಡೆಸುವುದಕ್ಕೆ ಏರ್ಪಾಡು ಮಾಡಿಕೊಳ್ಳಲಾಗಿದೆ. ಈ ಸಲದ ಕಂಬಳ ವೇಳಾಪಟ್ಟಿಯಲ್ಲಿ ಬೆಂಗಳೂರು ಕಂಬಳವನ್ನು ಮೊದಲ ಸ್ಥಾನದಲ್ಲಿ ಇರಿಸಲಾಗಿದ್ದು, ಅಕ್ಬೋಬರ್ 26ರಂದು ಮೊದಲ ಕಂಬಳವೇ ಬೆಂಗಳೂರಿನಲ್ಲಿ ನಡೆಸಲು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ನಿರ್ಧರಿಸಿದೆ.
ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆದ ಕಂಬಳ ಸಮಿತಿ ಸಭೆಯಲ್ಲಿ 2024-25ನೇ ಸಾಲಿನ ಕಂಬಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದ್ರೆ, ಬೆಂಗಳೂರಿನಲ್ಲಿ ಮೊದಲ ಕಂಬಳವಾದ್ರೆ, ಕೊನೆಯ ಕಂಬಳವನ್ನು ಇದೇ ಮೊದಲ ಬಾರಿಗೆ ಎನ್ನುವಂತೆ ಶಿವಮೊಗ್ಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಅಕ್ಟೋಬರ್ 26ರಂದು ಮೊದಲ್ಗೊಂಡು ಪ್ರತಿ ಶನಿವಾರ, ಆದಿತ್ಯವಾರ ಕಂಬಳ ನಡೆಯಲಿದ್ದು, ಕೊನೆಯ ಕಂಬಳ ಎಪ್ರಿಲ್ 19ರಂದು ಶಿವಮೊಗ್ಗದಲ್ಲಿ ನಡೆಸಲು ವೇಳಾಪಟ್ಟಿ ಇದೆ.
ಅ.26ರಂದು ಬೆಂಗಳೂರು ಕಂಬಳ, ನ.9ರಂದು ಪಿಲಿಕುಳ, ನ.16ರಂದು ಪಣಪಿಲ, 23ರಂದು ಕೊಡಂಗೆ, 30ರಂದು ಕಕ್ಕೆಪದವು, ಡಿ.7ರಂದು ಹೊಕ್ಕಾಡಿಗೋಳಿ, 14ರಂದು ಬಾರಾಡಿ, 21ರಂದು ಮೂಲ್ಕಿ, ಡಿ.28ರಂದು ಮಂಗಳೂರು, ಜ.4ರಂದು ಮಿಯ್ಯಾರು, 11ರಂದು ನರಿಂಗಾನ, 18ರಂದು ಅಡ್ವೆ ನಂದಿಕೂರು, 25ರಂದು ಮೂಡುಬಿದಿರೆ, ಫೆ.1ರಂದು ಐಕಳ, 8ರಂದು ಜಪ್ಪಿನಮೊಗರು, 15ರಂದು ತಿರುವೈಲುಗುತ್ತು, 22ರಂದು ಕಟಪಾಡಿ, ಮಾರ್ಚ್ 1ರಂದು ಪುತ್ತೂರು, 8ರಂದು ಬಂಗಾಡಿ, 15ರಂದು ಬಂಟ್ವಾಳ, 22ರಂದು ಉಪ್ಪಿನಂಗಡಿ, 29ರಂದು ವೇಣೂರು, ಎಪ್ರಿಲ್ 5ರಂದು ಬಳ್ಕುಂಜೆ, 12ರಂದು ಗುರುಪುರ, ಎಪ್ರಿಲ್ 19ರಂದು ಶಿವಮೊಗ್ಗದಲ್ಲಿ ಈ ಸಾಲಿನ ಕೊನೆಯ ಕಂಬಳ ನಡೆಯಲಿದೆ.
ಕಳೆದ ಬಾರಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಕಂಬಳ ನಡೆದಿರುವುದು ಇಡೀ ರಾಜ್ಯದ ಗಮನ ಸೆಳೆದಿತ್ತು. ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಕಂಬಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಬಿಜೆಪಿ, ಕಾಂಗ್ರೆಸ್ ನಾಯಕರೆಲ್ಲ ಭಾಗವಹಿಸಿದ್ದರು. ಅಲ್ಲದೆ, ಲಕ್ಷಾಂತರ ಜನರು ಕಂಬಳದಲ್ಲಿ ಪಾಲ್ಗೊಂಡು ಕರಾವಳಿಯ ಜನಪದ ಕ್ರೀಡೆಯ ಝಲಕ್ ಅನುಭವಿಸಿದ್ದರು. ಈ ಸಲ ವಿಶೇಷ ಅಂದ್ರೆ, ಮಲೆನಾಡು ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಕಂಬಳ ಏರ್ಪಡಿಸಲಾಗಿದೆ. ಮಾಹಿತಿ ಪ್ರಕಾರ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಕಂಬಳ ನಡೆಸುವುದಕ್ಕೆ ಸಿದ್ಧತೆ ನಡೆದಿದೆ. ಈ ಸಾಲಿನ ಕೊನೆಯ ಕಂಬಳಕ್ಕೆ ಶಿವಮೊಗ್ಗಕ್ಕೆ ದಿನಾಂಕ ನಿಗದಿಪಡಿಸಿದ್ದು, ಬಿಜೆಪಿ ಪಕ್ಷದಿಂದ ಹೊರಬಂದ ಬಳಿಕ ಕಂಬಳದ ಮೂಲಕ ಕಹಳೆ ಊದಲು ತಯಾರಾಗಿದ್ದಾರೆ.
October 26th to have first kambala in Bangalore before Mangalore. This was discussed during the meeting held at Moodbidri Samaja Mandir.
24-06-25 10:42 pm
Bangalore Correspondent
Chikkamagaluru Student Suicide, Uniform: ಚಿಕ್...
24-06-25 10:15 pm
Tumakuru Suicide, Instagram Reels: ರೀಲ್ಸ್ ವಿಚ...
24-06-25 08:16 pm
FIR Ex MP Anantkumar Hegde: ಕಾರು ಓವರ್ ಟೇಕ್ ಮಾ...
24-06-25 05:23 pm
Lokayukta Raid, Karnataka: ಬೆಂಗಳೂರು, ಶಿವಮೊಗ್ಗ...
24-06-25 01:53 pm
24-06-25 12:03 pm
HK News Desk
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
24-06-25 09:49 pm
Mangalore Correspondent
Mangalore, College Student Suicide: ಕಲಿಕೆಯಲ್ಲ...
24-06-25 01:36 pm
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
24-06-25 09:51 pm
HK News Desk
Bangalore Chit Fund Scam, 10 Crore: ಚೀಟಿ ಹೆಸ್...
24-06-25 07:39 pm
Davanagere Rape: ಮನೆಯ ಮುಂದೆ ಆಟವಾಡುತ್ತಿದ್ದ 7 ವ...
23-06-25 08:51 pm
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm