ಬ್ರೇಕಿಂಗ್ ನ್ಯೂಸ್
27-07-24 02:09 pm Mangalore Correspondent ಕರಾವಳಿ
ಮಂಗಳೂರು, ಜುಲೈ.27: ಸಕಲೇಶಪುರ ಬಳಿಯ ಎಡಕುಮೇರಿ- ಕಡಗರವಳ್ಳಿ ಮಧ್ಯೆ ರೈಲು ಹಳಿಗೆ ಭೂಕುಸಿತ ಆಗಿರುವುದರಿಂದ ಮಂಗಳೂರು – ಬೆಂಗಳೂರು ನಡುವಿನ ರೈಲು ಸಂಚಾರ ಅಸ್ತವ್ಯಸ್ತವಾಗಿದೆ. ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದಂತೆಯೇ ಈ ಹಾದಿಯಲ್ಲಿ ಸಾಗುವ ಜುಲೈ 29ರ ವರೆಗಿನ ಎಂಟು ರೈಲುಗಳನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ದಕ್ಷಿಣ ರೈಲ್ವೇಯ ಪಿಆರ್ ಓ ದೇವದಾನಂ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಜುಲೈ 27ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ವಿಜಯಪುರಕ್ಕೆ ತೆರಳಬೇಕಿದ್ದ ಸ್ಪೆಷಲ್ ಎಕ್ಸ್ ಪ್ರೆಸ್ ರೈಲನ್ನು (ಸಂಖ್ಯೆ 07378) ರದ್ದುಪಡಿಸಲಾಗಿದೆ. ಜುಲೈ 28ರಂದು ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಬೆಂಗಳೂರು ಯಶವಂತಪುರಕ್ಕೆ ತೆರಳಬೇಕಿದ್ದ ಪ್ಯಾಸೆಂಜರ್ ರೈಲು (ಸಂಖ್ಯೆ 16540) ರದ್ದಾಗಿದೆ. ರೈಲು ಸಂಖ್ಯೆ 07377 ವಿಜಯಪುರದಿಂದ ಮಂಗಳೂರು ಸೆಂಟ್ರಲ್ ನಿಲ್ದಾಣ ಮಧ್ಯೆ ಜುಲೈ 27ರಂದು ಓಡಾಟ ನಡೆಸಬೇಕಿದ್ದ ರೈಲನ್ನೂ ರದ್ದುಪಡಿಸಲಾಗಿದೆ.
ಜುಲೈ 28ರಂದು ಬೆಂಗಳೂರಿನಿಂದ ಕಾರವಾರಕ್ಕೆ ತೆರಳುವ ಸ್ಪೆಷಲ್ ಎಕ್ಸ್ ಪ್ರೆಸ್ (ಸಂಖ್ಯೆ 06567) ರೈಲನ್ನೂ ರದ್ದು ಮಾಡಲಾಗಿದೆ. ಜುಲೈ 27ರಂದು ಕಾರವಾರದಿಂದ ಬೆಂಗಳೂರು ತೆರಳಬೇಕಿದ್ದ 06568 ನಂಬರಿನ ರೈಲನ್ನೂ ರದ್ದುಪಡಿಸಲಾಗಿದೆ. ಜುಲೈ 27ರಂದು ಎಸ್ಎಂವಿಟಿ ಬೆಂಗಳೂರು- ಮುರುಡೇಶ್ವರ ಮಧ್ಯೆ ಓಡಾಟ ನಡೆಸಬೇಕಿದ್ದ ಎಕ್ಸ್ ಪ್ರೆಸ್ (ಸಂಖ್ಯೆ 16585) ರೈಲನ್ನು ರದ್ದು ಮಾಡಲಾಗಿದೆ. ಜುಲೈ 28ರಂದು ಮುರುಡೇಶ್ವರದಿಂದ ಬೆಂಗಳೂರು ತೆರಳಬೇಕಿದ್ದ 16586 ನಂಬರಿನ ರೈಲನ್ನೂ ರದ್ದು ಮಾಡಲಾಗಿದೆ. ಜುಲೈ 28ರಂದು ಯಶವಂತಪುರ- ಮಂಗಳೂರು ಜಂಕ್ಷನ್ ಮಧ್ಯೆ ಸಂಚರಿಸುವ (ಸಂಖ್ಯೆ 16575) ರೈಲನ್ನೂ ರದ್ದುಪಡಿಸಲಾಗಿದೆ. ಜುಲೈ 29ರಂದು ಸಂಚರಿಸುವ ಮಂಗಳೂರು ಜಂಕ್ಷನ್ – ಯಶವಂತಪುರ ಜಂಕ್ಷನ್ ನಡುವಿನ ರೈಲನ್ನೂ ರದ್ದು ಮಾಡಲಾಗಿದೆ.
Train services between Karwar-Mangaluru and Bengaluru were affected after a landslip between Yadakumari and Kadagaravalli (Western Ghats section) of South Western Railway at 6.56 p.m. on Friday. A release from South Western Railway said that train No. 06568 Karwar – SMVT Bengaluru Special Express was cancelled and seven other trains had been diverted as a result.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 06:08 pm
HK News Staffer
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
Mangalore Jail Jammer, Lawyers Protest, CM, M...
18-09-26 11:30 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am