ಬ್ರೇಕಿಂಗ್ ನ್ಯೂಸ್
17-07-24 09:40 pm Mangalore Correspondent ಕರಾವಳಿ
ಮಂಗಳೂರು, ಜುಲೈ.17: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಜುಲೈ 18 ಮತ್ತು 19ರಂದು ಮತ್ತೆ ಭಾರೀ ಮಳೆಯಾಗುವ ಬಗ್ಗೆ ರೆಡ್ ಅಲರ್ಟ್ ಸೂಚನೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆಯಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಜುಲೈ 15 ಮತ್ತು 16ರಂದು ರೆಡ್ ಅಲರ್ಟ್ ನೀಡಿದ್ದರಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. 17ರಂದು ಮೊಹರಂ ರಜೆ ಹಿನ್ನೆಲೆಯಲ್ಲಿ ಸರಕಾರಿ ರಜೆ ಇತ್ತು. ಇದರಿಂದಾಗಿ ಸತತ ಮೂರು ದಿನ ರಜೆ ಆಗಿದ್ದು, ಮತ್ತೆ ರೆಡ್ ಅಲರ್ಟ್ ನೀಡಿರುವುದರಿಂದ ಜಿಲ್ಲಾಡಳಿತ ರಜೆ ನೀಡುವುದಾ, ಬೇಡವಾ ಎನ್ನುವ ಸಂದಿಗ್ಧದಲ್ಲಿದೆ. ಇದಲ್ಲದೆ, ಎರಡು ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಾರು ಏಳು ರಜೆಗಳನ್ನು ಮಳೆಗಾಗಿ ನೀಡಲಾಗಿದ್ದು ಶಾಲಾ ಶಿಕ್ಷಕರು ಪಠ್ಯ ಪೂರೈಸುವ ಚಿಂತೆಯಲ್ಲಿದ್ದಾರೆ.
ರೆಡ್ ಅಲರ್ಟ್ ಇದ್ದರೂ, ಕಳೆದೆರಡು ದಿನಗಳಲ್ಲಿ ವಿಪರೀತ ಎನ್ನುವ ರೀತಿ ಮಳೆ ಆಗಿಲ್ಲ. ಸಾಮಾನ್ಯ ರೀತಿಯ ಮಳೆಯಷ್ಟೇ ಸುರಿದಿದೆ. ಬುಧವಾರ ಬಹುತೇಕ ಹಗಲಿನಲ್ಲಿ ಮಂಗಳೂರಿನಲ್ಲಿ ಮಳೆ ಇರಲಿಲ್ಲ. ಮೂಡುಬಿದ್ರೆ, ಬೆಳ್ತಂಗಡಿ ಭಾಗದಲ್ಲಿ ಸೋನೆ ಮಳೆಯ ರೀತಿ ಸುರಿಯುತ್ತಿತ್ತು ಎನ್ನುವ ಮಾಹಿತಿ ಇದೆ. ಉಳಿದಂತೆ, ರಾತ್ರಿ ಎಂಟು ಗಂಟೆ ವೇಳೆಗೆ ಜೋರಾದ ಮಳೆಯಾಗಿದೆ. ಜುಲೈ ತಿಂಗಳಲ್ಲಿ ಈ ರೀತಿಯ ಮಳೆ ಹಿಂದಿನಿಂದಲೂ ಸಾಮಾನ್ಯ. ತುಳುನಾಡಿನಲ್ಲಿ ಆಷಾಢ ತಿಂಗಳು ಈಗಷ್ಟೇ ಆರಂಭ ಆಗಿದ್ದು, ಮಳೆ ಬಂದರೆ ಬಿರುಸಾಗಿರುತ್ತದೆ. ಬಿಸಿಲು ಬಂದರೆ, ಅದೂ ಪ್ರಖರವಾಗಿರುತ್ತದೆ. ಇದು ಹಿಂದಿನಿಂದ ಮಾಮೂಲಿ ಎಂಬಂತಿದ್ದ ವಾತಾವರಣ. ಈ ಬಾರಿ ಹವಾಮಾನ ವೈಪರೀತ್ಯದಿಂದ ಆಗಿಂದಾಗ್ಗೆ ತೀವ್ರ ಮಳೆ ಮತ್ತು ತೀವ್ರ ಬರವೂ ಎದುರಾಗುತ್ತಿದೆ. ಹಾಗಾಗಿ, ಮಳೆಯ ಬಗ್ಗೆ ಹವಾಮಾನ ಇಲಾಖೆಯವರು ನೀಡುವ ಭವಿಷ್ಯವೂ ಈ ಬಾರಿ ನಿಜವಾಗಿಲ್ಲ.
ಪ್ರತಿ ಬಾರಿ ಜುಲೈ ಕೊನೆಯಲ್ಲಿ ಮಳೆಯಿಂದಾಗಿ ವಿಕೋಪ ಸಂಭವಿಸುತ್ತದೆ. ಅಂಕೋಲಾದಲ್ಲಿ ಹೆದ್ದಾರಿ ಕುಸಿತಗೊಂಡು ಈಗಾಗಲೇ ಹಲವರು ಪ್ರಾಣ ಕಳಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಬೆಳ್ತಂಗಡಿ, ಸುಳ್ಯ, ಕೊಡಗು ಭಾಗದಲ್ಲಿ ಬೆಟ್ಟವೇ ಕುಸಿದು ಅಪಾರ ನಷ್ಟವುಂಟಾಗಿತ್ತು. ಹೀಗಾಗಿ ಮಳೆಯ ಬಗ್ಗೆ ರೆಡ್ ಅಲರ್ಟ್ ನೀಡಿದ ಕೂಡಲೇ ಜಿಲ್ಲಾಡಳಿತವೂ ಹಳ್ಳಿಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಅಪಾಯ ಆಗಬಾರದು ಎಂಬ ಮುಂಜಾಗ್ರತೆಯಿಂದ ಮೊದಲೇ ರಜೆ ನೀಡುವುದನ್ನು ವಾಡಿಕೆ ಮಾಡಿಕೊಂಡು ಬಂದಿದೆ. ಈ ನಡುವೆ, ಜಿಲ್ಲಾಧಿಕಾರಿಗಳು ರಜೆಯ ಬಗ್ಗೆ ಆದೇಶ ನೀಡಿರದೇ ಇದ್ದರೂ ಕಿಡಿಗೇಡಿಗಳು ರಜೆ ನೀಡಿರುವ ಪತ್ರವನ್ನು ಸೃಷ್ಟಿಸಿ ವೈರಲ್ ಮಾಡಿದ್ದಾರೆ. ಈ ಬಗ್ಗೆ ಮಂಗಳೂರಿನ ಜಿಲ್ಲಾಧಿಕಾರಿ ಗರಂ ಆಗಿದ್ದು, ಅಂಥ ಪತ್ರಗಳನ್ನು ಫಾರ್ವರ್ಡ್ ಮಾಡಿದರೂ ಎಫ್ಐಆರ್ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
Rain, Fake letter on school college holiday goes viral, Mangalore DC Mullai Muhilan M P Orders for strict action against those miscreants who have created fake letter and are circulating it online.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am