ಬ್ರೇಕಿಂಗ್ ನ್ಯೂಸ್
05-07-24 12:32 pm Mangalore Correspondent ಕರಾವಳಿ
ಮಂಗಳೂರು, ಜುಲೈ.5: ಮೂಡಾ ವಿಚಾರದಲ್ಲಿ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಮುಖ್ಯಮಂತ್ರಿ ತಪ್ಪಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಮೂರು ಎಕರೆ ಅತಿಕ್ರಮಣ ಮಾಡಿ ಮೂಡಾ ಲೇಔಟ್ ನಿರ್ಮಿಸಲಾಗಿದೆ. ಭೂ ಸ್ವಾಧೀನ ಆಗದ ಜಾಗದಲ್ಲಿ ಲೇಔಟ್ ಕಟ್ಟಿದ್ದಾರೆ. ಮುಖ್ಯಮಂತ್ರಿ ಆದ ತಕ್ಷಣ ಅವರು ತಮ್ಮ ಜಾಗ ಬಿಟ್ಟು ಕೊಡಬೇಕಾ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.
ಮಂಗಳೂರಿನಲ್ಲಿ ಮುಖ್ಯಮಂತ್ರಿ ಮೇಲಿನ ಮೂಡಾ ನಿವೇಶನ ಕುರಿತ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲೇ ಇದು ಅಗಿರೋದು. ಮುಖ್ಯಮಂತ್ರಿ ಆದ ತಕ್ಷಣ ಅವರು ಅವರ ಜಾಗ ಬಿಟ್ಟು ಕೊಡಬೇಕಾ? ನಿಮ್ಮ ಜಾಗ ಯಾರಾದ್ರೂ ಅತಿಕ್ರಮಣ ಮಾಡಿದ್ರೆ ಬಿಡ್ತೀರಾ? ಅದು ಅವರ ಪತ್ನಿಯ ಜಾಗ, ಮೂಡಾ ಕೂಡ ತಪ್ಪನ್ನು ಒಪ್ಪಿಕೊಂಡಿದೆ.
ಹಾಗೆ ನೋಡಿದ್ರೆ ಮುಖ್ಯಮಂತ್ರಿ ಕೋರ್ಟ್ ಗೆ ಹೋಗಿ ಜಾಗ ವಾಪಾಸ್ ಕೇಳಬೇಕಿತ್ತು. ಆದರೂ ಅವರು ಬದಲಿ ಜಾಗ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ಎಲ್ಲಿ ಬರುತ್ತೆ?ಬಿಜೆಪಿಯವರ ಕಥೆಗಳನ್ನು ತೆಗೆದ್ರೆ ಗೊತ್ತಾಗುತ್ತೆ, ಎಲ್ಲಾ ಅವರ ಅವಧಿಯಲ್ಲೇ ಅಗಿರೋದು. ಅವರು ಮಾಡಿದ್ದ 50:50 ನಿವೇಶನ ಹಂಚಿಕೆಯನ್ನು ನಮ್ಮ ಸರ್ಕಾರವೇ ಕ್ಯಾನ್ಸಲ್ ಮಾಡಿದ್ದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ರಾಜ್ಯದಲ್ಲಿ ಡೆಂಗ್ಯು ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಸೊಳ್ಳೆಗಳನ್ನು ಲಾರ್ವಾ ಉತ್ಪತ್ತಿ ಸ್ಥಳಗಳಲ್ಲಿ ನಿಯಂತ್ರಣ ಮಾಡೋದು ಮೊದಲ ಕೆಲಸ. ಸಂಗ್ರಹವಾದ ನೀರಲ್ಲಿ ಸೊಳ್ಳೆ ಉತ್ಪತ್ತಿ ಆಗ್ತಿದೆ, ಅದನ್ನು ನಿಯಂತ್ರಿಸಬೇಕು. ಈ ವಿಚಾರವನ್ನು ಜನರು ಗಂಭೀರವಾಗಿ ತೆಗೆದುಕೊಳ್ತಿಲ್ಲ, ಮನೆಗಳ ಮುಂದೆ ನೀರು ನಿಲ್ತಿದೆ. ಸರ್ಕಾರದ ಕಡೆಯಿಂದ ಡೆಂಗ್ಯೂ ಪ್ರಕರಣದಲ್ಲಿ ಸೂಕ್ತ ಚಿಕಿತ್ಸೆ ಕೊಡುವ ವ್ಯವಸ್ಥೆ ಆಗಿದೆ. ಡೆಂಗ್ಯೂ ಒಂದು ವೈರಲ್ ಜ್ವರ, ಆದರೆ ಸಾವು ಸಂಭವಿಸದಂತೆ ತಡೆಯಬೇಕಾಗಿದೆ.
ಡೆಂಗ್ಯೂ ಟೆಸ್ಟಿಂಗ್ ವಿಚಾರದಲ್ಲಿ ಆರೋಗ್ಯ ಇಲಾಖೆಯಿಂದ ಬೆಲೆ ನಿಗದಿ ಮಾಡಲಾಗಿದೆ. ಅದಕ್ಕಿಂತ ಹೆಚ್ಚಳ ಮಾಡಿರುವುದು ಕಂಡುಬಂದರೆ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ದರ ಹೆಚ್ಚು ತೆಗೊಂಡ್ರೆ ಅವರ ಲೈಸನ್ಸ್ ಕೂಡ ನಾವು ಕ್ಯಾನ್ಸಲ್ ಮಾಡಬಹುದು. ಎಪಿಡೆಮಿಕ್ ಮತ್ತು ಕೆಪಿಎಂಇ ಕಾನೂನು ಅಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮಂಗಳೂರು ಸೇರಿದಂತೆ ದ.ಕ ಜಿಲ್ಲೆಯಲ್ಲಿ ಹಲವೆಡೆ ಗುಡ್ಡ ಕುಸಿತ ಆಗಿರುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮನೆ ಕಟ್ಟಲು ನಾವೇ ಗುಡ್ಡ ಅಗೀತಾ ಇದೀವಿ, ಕಟ್ಟಿಂಗ್ ಮಾಡ್ತಾ ಇದೀವಿ. ಅದು ವೈಜ್ಞಾನಿಕವಾಗಿ ಇರದೇ ಇದ್ದಾಗ ಮಳೆ ಬಂದಾಗ ಕುಸೀತಾ ಇದೆ. ಇದು ನಾವೇ ಸೃಷ್ಟಿ ಮಾಡಿಕೊಂಡಿರೋ ಸಮಸ್ಯೆ. ತಡೆಗೋಡೆ ಕಟ್ಟೋಕೆ ದೊಡ್ಡ ಅನುದಾನ ಬೇಕು, ಅದರ ಬಗ್ಗೆ ನೋಡೋಣ ಎಂದರು.
Cm's legal advisor A.S. Ponnanna has clearly stated that the Chief Minister is not at fault. Muda Layout has been constructed by encroaching on their three acres. The layout has been constructed on land where land has not been acquired. Health Minister Dinesh Gundu Rao questioned whether he should give up his place immediately after becoming the Chief Minister.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am