ಬ್ರೇಕಿಂಗ್ ನ್ಯೂಸ್
12-06-24 10:55 pm Mangalore Correspondent ಕರಾವಳಿ
ಮಂಗಳೂರು, ಜೂನ್ 12: ಕರಾವಳಿಯ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಂಡು ಮತಾಂಧ ಕೆಲಸ ಮಾಡುತ್ತಿದ್ದಾರೆ ಅಂತ ನಾವು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಈಗಲೂ ಹೇಳುತ್ತೇವೆ. ಎಲ್ಲ ಮಸೀದಿಗಳನ್ನು ತಪಾಸಣೆ ನಡೆಸಿದರೆ, ಒಳಗೇನು ಇಟ್ಕೊಂಡಿದ್ದಾರೆ ಅಂತ ಹೊರಬರುತ್ತದೆ. ಮಸೀದಿ ಎದುರಲ್ಲಿ ಮೆರವಣಿಗೆ ಹೋದ ಮಾತ್ರಕ್ಕೆ ಚೂರಿ ಇರಿಯುತ್ತಾರಂದ್ರೆ, ಇವರು ಒಳಗೆ ಶಸ್ತ್ರಾಸ್ತ್ರ ಇಟ್ಕೊಂಡಿರ್ತಾರೆ ಅಂತ ಅರ್ಥ ಅಲ್ಲವೇ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಶ್ನಿಸಿದ್ದಾರೆ.
ಬೋಳಿಯಾರು ಚೂರಿ ಇರಿತಕ್ಕೊಳಗಾದ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಹರೀಶ್ ಪೂಂಜ, ಕಳೆದ ಬಾರಿ ಸಿದ್ದರಾಮಯ್ಯ ಸರಕಾರ ಇದ್ದಾಗ 24 ಹಿಂದುಗಳ ಹತ್ಯೆಯಾಗಿತ್ತು. ಈ ಬಾರಿ ಸಿದ್ದರಾಮಯ್ಯ ಎಷ್ಟು ಹತ್ಯೆ ಮಾಡಲು ಹೊರಟಿದ್ದಾರೆ ಅಂತ ಚಿಂತೆಯಾಗುತ್ತದೆ. ಈಗಲೇ ಅಶಾಂತಿ ಮೂಡಿದೆ, ಕೋಮು ಶಕ್ತಿಗಳು ಕಾನೂನು ಕೈಗೆ ತೆಗೆದುಕೊಂಡಿರುವುದು ಕಾಣುತ್ತದೆ.
ಬೋಳಿಯಾರಿನಲ್ಲಿ ಹತ್ಯೆಗೆ ಯತ್ನಿಸಿದವರೆಲ್ಲ ಇಲ್ಲಿನ ಶಾಸಕ ಯುಟಿ ಖಾದರ್ ಅವರ ಆಪ್ತ ವಲಯದಲ್ಲಿದ್ದವರು. ಅಲ್ಲ ಹೇಳಲಿ ನೋಡೋಣ ಖಾದರ್. ಉಸ್ತುವಾರಿ ಸಚಿವರು ಆಸ್ಪತ್ರೆಗೆ ಬಂದಾಗ ಕ್ಷೇತ್ರದ ಶಾಸಕರಾಗಿ ಅವರನ್ನು ತನ್ನ ಕ್ಷೇತ್ರದಲ್ಲಿ ಇರಿತಕ್ಕೊಳಗಾದ ಯುವಕರ ಬಳಿಗೊಯ್ದು ತೋರಿಸುವುದು ಜವಾಬ್ದಾರಿ ಅಲ್ಲವೇ. ಯಾಕೆ ಇವರಿಗೆ ಮುಸ್ಲಿಮರ ಭಯವೇ, ನೀವು ಮುಸ್ಲಿಮರಿಗೆ ಮಾತ್ರ ಶಾಸಕನಾ. ನೀವು ಯಾರ ಪರ ವಹಿಸ್ತೀರಿ ಎಂದು ಸ್ಪಷ್ಟನೆ ನೀಡಬೇಕು ಎಂದು ಖಾದರ್ ಅವರಿಗೆ ಆಗ್ರಹ ಮಾಡಿದ್ದಾರೆ.
ನೀವು ಭಾರತ್ ಮಾತಾಕೀ ಜೈ ಎಂದರೆ ಕೇಸು ಹಾಕುತ್ತೀರಿ ಎಂದಾದರೆ, ನಾವು ಯಾವ ದೇಶದಲ್ಲಿದ್ದೇವೆ ಎಂದು ಕೇಳಬೇಕಾಗುತ್ತದೆ. ನಮ್ಮ ದೇಶಕ್ಕೆ ಜೈಕಾರ ಹಾಕದೆ ಯಾರಿಗೆ ಹಾಕಬೇಕು ಸ್ವಾಮಿ. ಯುಟಿ ಖಾದರ್, ಜಿಲ್ಲಾಧಿಕಾರಿ ಅವರಿಗೆ ಆಗ್ರಹ ಮಾಡುತ್ತೀನಿ, ಕೂಡಲೇ ನೀವು ಹಾಕಿರುವ ಕೇಸನ್ನು ಹಿಂಪಡೆಯಬೇಕು, ಕೂಲಿ ಕೆಲಸ ಮಾಡುವವರು ಆಸ್ಪತ್ರೆಯಲ್ಲಿ ಮಲಗುವ ಸ್ಥಿತಿಯಾಗಿದೆ, ಆಸ್ಪತ್ರೆ ವೆಚ್ಚವನ್ನು ಭರಿಸಲು ಜಿಲ್ಲಾಧಿಕಾರಿ ವ್ಯವಸ್ಥೆ ಮಾಡಬೇಕು. ದನ ಕಳ್ಳತನ ಮಾಡಿದವರಿಗೆ ಪರಿಹಾರ ಮಾಡ್ತೀರಾದ್ರೆ ಚೂರಿ ಇರಿತಕ್ಕೊಳಗಾದವರಿಗೂ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡುತ್ತೇವೆ. ಈ ದೇಶಕ್ಕೆ ಬದ್ಧತೆ ಇಲ್ಲದವರ ಮೇಲೆ ಪಾಕಿಸ್ತಾನ ಕುನ್ನಿಗಳು ಅನ್ನೋದಲ್ಲದೆ ಬೇರೇನು ಹೇಳಬೇಕು. ಅಷ್ಟಕ್ಕೇ ನೀವು ಎಫ್ಐಆರ್ ಮಾಡ್ತೀರಂದ್ರೆ ಅದನ್ನು ನಾವು ಸಹಿಸಿಕೊಳ್ಳಲ್ಲ ಎಂದು ಹೇಳಿದರು.
Belthangady MLA Harish poonja makes controversy statement on Boliyar Stabbing case. Every mosques have kept weapons and trying to disturb communial harmony. Every mosque should be examined by police he slammed.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am