ಬ್ರೇಕಿಂಗ್ ನ್ಯೂಸ್
12-06-24 10:55 pm Mangalore Correspondent ಕರಾವಳಿ
ಮಂಗಳೂರು, ಜೂನ್ 12: ಕರಾವಳಿಯ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಂಡು ಮತಾಂಧ ಕೆಲಸ ಮಾಡುತ್ತಿದ್ದಾರೆ ಅಂತ ನಾವು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಈಗಲೂ ಹೇಳುತ್ತೇವೆ. ಎಲ್ಲ ಮಸೀದಿಗಳನ್ನು ತಪಾಸಣೆ ನಡೆಸಿದರೆ, ಒಳಗೇನು ಇಟ್ಕೊಂಡಿದ್ದಾರೆ ಅಂತ ಹೊರಬರುತ್ತದೆ. ಮಸೀದಿ ಎದುರಲ್ಲಿ ಮೆರವಣಿಗೆ ಹೋದ ಮಾತ್ರಕ್ಕೆ ಚೂರಿ ಇರಿಯುತ್ತಾರಂದ್ರೆ, ಇವರು ಒಳಗೆ ಶಸ್ತ್ರಾಸ್ತ್ರ ಇಟ್ಕೊಂಡಿರ್ತಾರೆ ಅಂತ ಅರ್ಥ ಅಲ್ಲವೇ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಶ್ನಿಸಿದ್ದಾರೆ.
ಬೋಳಿಯಾರು ಚೂರಿ ಇರಿತಕ್ಕೊಳಗಾದ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಹರೀಶ್ ಪೂಂಜ, ಕಳೆದ ಬಾರಿ ಸಿದ್ದರಾಮಯ್ಯ ಸರಕಾರ ಇದ್ದಾಗ 24 ಹಿಂದುಗಳ ಹತ್ಯೆಯಾಗಿತ್ತು. ಈ ಬಾರಿ ಸಿದ್ದರಾಮಯ್ಯ ಎಷ್ಟು ಹತ್ಯೆ ಮಾಡಲು ಹೊರಟಿದ್ದಾರೆ ಅಂತ ಚಿಂತೆಯಾಗುತ್ತದೆ. ಈಗಲೇ ಅಶಾಂತಿ ಮೂಡಿದೆ, ಕೋಮು ಶಕ್ತಿಗಳು ಕಾನೂನು ಕೈಗೆ ತೆಗೆದುಕೊಂಡಿರುವುದು ಕಾಣುತ್ತದೆ.
ಬೋಳಿಯಾರಿನಲ್ಲಿ ಹತ್ಯೆಗೆ ಯತ್ನಿಸಿದವರೆಲ್ಲ ಇಲ್ಲಿನ ಶಾಸಕ ಯುಟಿ ಖಾದರ್ ಅವರ ಆಪ್ತ ವಲಯದಲ್ಲಿದ್ದವರು. ಅಲ್ಲ ಹೇಳಲಿ ನೋಡೋಣ ಖಾದರ್. ಉಸ್ತುವಾರಿ ಸಚಿವರು ಆಸ್ಪತ್ರೆಗೆ ಬಂದಾಗ ಕ್ಷೇತ್ರದ ಶಾಸಕರಾಗಿ ಅವರನ್ನು ತನ್ನ ಕ್ಷೇತ್ರದಲ್ಲಿ ಇರಿತಕ್ಕೊಳಗಾದ ಯುವಕರ ಬಳಿಗೊಯ್ದು ತೋರಿಸುವುದು ಜವಾಬ್ದಾರಿ ಅಲ್ಲವೇ. ಯಾಕೆ ಇವರಿಗೆ ಮುಸ್ಲಿಮರ ಭಯವೇ, ನೀವು ಮುಸ್ಲಿಮರಿಗೆ ಮಾತ್ರ ಶಾಸಕನಾ. ನೀವು ಯಾರ ಪರ ವಹಿಸ್ತೀರಿ ಎಂದು ಸ್ಪಷ್ಟನೆ ನೀಡಬೇಕು ಎಂದು ಖಾದರ್ ಅವರಿಗೆ ಆಗ್ರಹ ಮಾಡಿದ್ದಾರೆ.
ನೀವು ಭಾರತ್ ಮಾತಾಕೀ ಜೈ ಎಂದರೆ ಕೇಸು ಹಾಕುತ್ತೀರಿ ಎಂದಾದರೆ, ನಾವು ಯಾವ ದೇಶದಲ್ಲಿದ್ದೇವೆ ಎಂದು ಕೇಳಬೇಕಾಗುತ್ತದೆ. ನಮ್ಮ ದೇಶಕ್ಕೆ ಜೈಕಾರ ಹಾಕದೆ ಯಾರಿಗೆ ಹಾಕಬೇಕು ಸ್ವಾಮಿ. ಯುಟಿ ಖಾದರ್, ಜಿಲ್ಲಾಧಿಕಾರಿ ಅವರಿಗೆ ಆಗ್ರಹ ಮಾಡುತ್ತೀನಿ, ಕೂಡಲೇ ನೀವು ಹಾಕಿರುವ ಕೇಸನ್ನು ಹಿಂಪಡೆಯಬೇಕು, ಕೂಲಿ ಕೆಲಸ ಮಾಡುವವರು ಆಸ್ಪತ್ರೆಯಲ್ಲಿ ಮಲಗುವ ಸ್ಥಿತಿಯಾಗಿದೆ, ಆಸ್ಪತ್ರೆ ವೆಚ್ಚವನ್ನು ಭರಿಸಲು ಜಿಲ್ಲಾಧಿಕಾರಿ ವ್ಯವಸ್ಥೆ ಮಾಡಬೇಕು. ದನ ಕಳ್ಳತನ ಮಾಡಿದವರಿಗೆ ಪರಿಹಾರ ಮಾಡ್ತೀರಾದ್ರೆ ಚೂರಿ ಇರಿತಕ್ಕೊಳಗಾದವರಿಗೂ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡುತ್ತೇವೆ. ಈ ದೇಶಕ್ಕೆ ಬದ್ಧತೆ ಇಲ್ಲದವರ ಮೇಲೆ ಪಾಕಿಸ್ತಾನ ಕುನ್ನಿಗಳು ಅನ್ನೋದಲ್ಲದೆ ಬೇರೇನು ಹೇಳಬೇಕು. ಅಷ್ಟಕ್ಕೇ ನೀವು ಎಫ್ಐಆರ್ ಮಾಡ್ತೀರಂದ್ರೆ ಅದನ್ನು ನಾವು ಸಹಿಸಿಕೊಳ್ಳಲ್ಲ ಎಂದು ಹೇಳಿದರು.
Belthangady MLA Harish poonja makes controversy statement on Boliyar Stabbing case. Every mosques have kept weapons and trying to disturb communial harmony. Every mosque should be examined by police he slammed.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm