ಬ್ರೇಕಿಂಗ್ ನ್ಯೂಸ್
29-05-24 01:06 pm Mangalore Correspondent ಕರಾವಳಿ
ಮಂಗಳೂರು, ಮೇ.29: ಗಡಿಭಾಗ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದ ಹಿಂದು ಯುವತಿಯನ್ನು ಮುಸ್ಲಿಂ ಯುವಕನೊಬ್ಬ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದು ಲವ್ ಜಿಹಾದ್ ಆರೋಪ ಕೇಳಿಬಂದಿದೆ.
ಮೇ 23ರಂದು ಬದಿಯಡ್ಕ ಬಳಿಯ ನಿವಾಸಿ ನೇಹಾ ಎಂಬ ಯುವತಿ ಮನೆಯಿಂದ ನಾಪತ್ತೆಯಾಗಿದ್ದಳು. ಆನಂತರ, ಮೇ 27ರಂದು ಬದಿಯಡ್ಕ ರಿಜಿಸ್ಟ್ರಾರ್ ಕಚೇರಿಯಲ್ಲಿ ನೇಹಾ ಮತ್ತು ಮಿರ್ಶಾದ್ ಎಂಬ ಯುವಕ ಮದುವೆಯಾಗಿರುವ ಬಗ್ಗೆ ನೋಟೀಸ್ ಹಾಕಲಾಗಿತ್ತು. ಇದಕ್ಕೂ ಮೊದಲೇ ಯುವತಿ ಮನೆಯವರು ಬದಿಯಡ್ಕ ಠಾಣೆಗೆ ದೂರು ನೀಡಿದ್ದು, ಮಗಳನ್ನು ಮಿರ್ಶಾದ್ ಎಂಬ ಯುವಕ ಅಪಹರಿಸಿರುವ ಶಂಕೆಯಲ್ಲಿ ದೂರು ನೀಡಿದ್ದರು. ಆದರೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು.
ಮದುವೆಯ ಬಳಿಕ ಯುವಕ- ಯುವತಿ ಬದಿಯಡ್ಕ ಠಾಣೆಗೆ ಹಾಜರಾಗಿದ್ದು, ಯುವತಿ ಗಂಡನ ಜೊತೆಗೆ ತೆರಳುವುದಾಗಿ ಹೇಳಿದ್ದರಿಂದ ಪೊಲೀಸರು ಅವರನ್ನು ಕಾಸರಗೋಡಿನಲ್ಲಿ ಕೋರ್ಟಿಗೆ ಹಾಜರುಪಡಿಸಿ ಬಿಟ್ಟು ಕಳಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಒಟ್ಟು ಪ್ರಕ್ರಿಯೆಗೆ ಮುಸ್ಲಿಂ ಲೀಗ್ ನಾಯಕರು ಬೆಂಗಾವಲು ನಿಂತಿದ್ದು, ಪೊಲೀಸರ ಕೈಕಟ್ಟಿ ಹಾಕಿದ್ದಾರೆ. ಯುವತಿಯನ್ನು ಆಮಿಷ ತೋರಿಸಿ ಮದುವೆಯಾಗಿದ್ದು, ಮತಾಂತರ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಹಿಂದು ಸಂಘಟನೆ ನಾಯಕರು ಆರೋಪಿಸಿದ್ದಾರೆ.
ಯುವತಿ ನೇಹಾ ಕಾಸರಗೋಡಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕಿಯಾಗಿದ್ದಳು. ನೋಡಲು ಸ್ಫುರದ್ರೂಪಿಯಾಗಿದ್ದ ಯುವತಿಯನ್ನು ಮುಸ್ಲಿಂ ಯುವಕ ಪ್ರೀತಿ ನೆಪದಲ್ಲಿ ಪಟಾಯಿಸಿದ್ದು, ಈಗ ಸದ್ದಿಲ್ಲದೆ ಮದುವೆಯಾಗಿದ್ದಾನೆ. ಯುವತಿ ಮನೆಯವರು ಏನು ಮಾಡುವುದೆಂದು ತೋಚದೆ ಕಂಗಾಲಾಗಿದ್ದಾರೆ. ಬಜರಂಗದಳ ನಾಯಕರು, ಯುವತಿಯನ್ನು ಮರಳಿ ಬರುವಂತೆ ಬಹಿರಂಗ ಕರೆ ನೀಡಿದ್ದು, ಈಗ ಮರಳಿ ಬಂದರೂ ಇಡೀ ಹಿಂದು ಸಮಾಜ ನಿನ್ನ ಜೊತೆಗಿರುತ್ತದೆ ಎಂದು ಆಹ್ವಾನ ನೀಡಿದ್ದಾರೆ.
ಯಾಕೆ ಲವ್ ಜಿಹಾದ್ ಗಂಭೀರ ಸಮಸ್ಯೆ ?
ಕರಾವಳಿಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಲವ್ ಜಿಹಾದ್ ಮೂಲಕ ಹಿಂದು ಯುವತಿಯರನ್ನು ಪ್ರೀತಿಸಿ ಮದುವೆಯಾಗುವುದು, ಆನಂತರ ಅವರನ್ನು ಇಸ್ಲಾಮಿಗೆ ಮತಾಂತರಿಸುವ ಕೃತ್ಯ ನಡೆದುಬಂದಿದೆ. ಕೆಲವು ಕಡೆ, ಹಿಂದು ಯುವತಿಯರಿಗೆ ಎರಡು ಮಕ್ಕಳು ಕರುಣಿಸಿ ನಡು ನೀರಿನಲ್ಲಿ ಕೈಬಿಟ್ಟು ಮುಸ್ಲಿಂ ಯುವಕರು ಪರಾರಿಯಾಗಿರುವ ಉದಾಹರಣೆಯೂ ಇದೆ. ಕೆಲವು ಯುವತಿಯರನ್ನು ಮದುವೆಯಾಗಿ ಮುಸ್ಲಿಂ ಉಗ್ರವಾದಿಗಳಾಗಿಸಿದ ನಿದರ್ಶನವೂ ಇದೆ. ಈ ರೀತಿಯ ಉದಾಹರಣೆ ಇರುವ ಕಾರಣಕ್ಕೆ ಹಿಂದು ಸಂಘಟನೆಗಳು ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರಕಾರಗಳಿಗೆ ಒತ್ತಡ ಹೇರುತ್ತ ಬಂದರೂ, ಅದಿನ್ನೂ ಸಾಧ್ಯವಾಗಿಲ್ಲ. ಲವ್ ಜಿಹಾದ್ ಅನ್ನುವುದು ಕಠೋರ ಪರಿಕಲ್ಪನೆಯಾಗಿದ್ದರೂ, ಭಾರತೀಯ ಅಪರಾಧ ಕಾನೂನಿನಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಪೊಲೀಸರಿಗೂ ಕ್ರಮ ಕೈಗೊಳ್ಳುವುದು ಸಾಧ್ಯವಾಗಿಲ್ಲ.
Mangalore Love Jihad at Badiyadka in kasaragod, Hindu teacher marries muslim youth, sparks controversy. Hindu outfits have raged over the incident demanding the girl to come back home. But the boy has been backed by Muslim league organisations.
16-06-25 10:44 pm
Bangalore Correspondent
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
16-06-25 05:29 pm
HK News Desk
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
17-06-25 01:48 pm
Mangalore Correspondent
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
Rain, Pilikula Zoo, Mangalore, Flood: ಪಿಲಿಕುಳ...
16-06-25 08:34 pm
Mangalore Rain, Belthanagdy, Bike: ಸವಣಾಲು ; ಧ...
16-06-25 05:07 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm