ಬ್ರೇಕಿಂಗ್ ನ್ಯೂಸ್
18-05-24 05:13 pm Mangalore Correspondent ಕರಾವಳಿ
ಮಂಗಳೂರು, ಮೇ.18: ಕರಾವಳಿ ಜನರು ರಾಷ್ಟ್ರೀಯತೆ, ಹಿಂದುತ್ವದ ಮೇಲೆ ಓಟ್ ಹಾಕುತ್ತಾರೆಂಬ ಭಾವನೆ ಇದೆ. ಒಂದು ರೀತಿ ಟೇಕನ್ ಫಾರ್ ಗ್ರಾಂಟೆಡ್ ಎನ್ನುವ ರೀತಿ. ಆ ರೀತಿಯ ಭಾವನೆಯನ್ನು ಹೋಗಲಾಡಿಸಿ, ರಾಷ್ಟ್ರೀಯ ನಾಯಕರಿಗೆ ಗಟ್ಟಿ ಸಂದೇಶ ನೀಡಬೇಕೆಂಬ ನೆಲೆಯಲ್ಲಿ ಚುನಾವಣಾ ಕಣಕ್ಕಿಳಿದಿದ್ದೇನೆ. ಕರಾವಳಿಯ ಮತದಾರರು ಅವಕಾಶ ನೀಡುತ್ತಾರೆಂಬ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಹೇಳಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪಕ್ಷದಲ್ಲಿ ಸೀನಿಯಾರಿಟಿ ಮೇಲೆ ಯಾರಿಗೇ ಆದರೂ ಅವಕಾಶ ನೀಡುತ್ತಿದ್ದರೆ ನನಗೆ ಬೇಜಾರು ಆಗುತ್ತಿರಲಿಲ್ಲ. ಆದರೆ ಹಣ, ಜಾತಿಗೆ ಮಣೆ ಹಾಕಿದ್ದಾರೆ. ಕರಾವಳಿ ಜನರನ್ನು ಕಡೆಗಣಿಸಿದ್ದಾರೆ, ನನ್ನದು ಸಣ್ಣ ಜಾತಿ. ಮೂರು ಬಾರಿ ಶಾಸಕನಾಗಿ ಕ್ಷೇತ್ರದಲ್ಲಿ ಯಾರು ನಿಂತರೂ ಗೆಲ್ಲುವಷ್ಟು ಪಕ್ಷವನ್ನು ಬೆಳೆಸಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಮೀನುಗಾರ ಸಮುದಾಯಕ್ಕೆ ಅವಕಾಶ ನೀಡಬೇಕೆಂದು ನನ್ನ ಕ್ಷೇತ್ರದಲ್ಲಿ ಯಶಪಾಲ್ ಸುವರ್ಣಗೆ ಅವಕಾಶ ನೀಡಿದರು,
ಮನಸ್ಸಿಗೆ ನೋವಾದರೂ, ಪಕ್ಷದ ವಿರುದ್ಧ ಹೋಗಿಲ್ಲ. ಚುನಾವಣೆ ಗೆಲುವಿಗಾಗಿ ಕೆಲಸ ಮಾಡಿದ್ದೇನೆ. ಆಗಲೇ ಪದವೀಧರ ಕ್ಷೇತ್ರದಲ್ಲಿ ಆಯನೂರು ಮಂಜುನಾಥ್ ಜೆಡಿಎಸ್ಸಿಗೆ ಹೋಗಿದ್ದರಿಂದ ಆ ಕ್ಷೇತ್ರವನ್ನು ನನಗೆ ಕೊಡುವಂತೆ ಹೇಳಿದ್ದೆ, ಅಂದಿನಿಂದಲೇ ಕೆಲಸದಲ್ಲಿಯೂ ತೊಡಗಿದ್ದೆ. ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದ ಪ್ರಭಾರ ಕೊಟ್ಟಾಗ 42 ದಿನಗಳ ಕಾಲ ಅಲ್ಲಿಯೇ ಇದ್ದು ಕೆಲಸ ಮಾಡಿದ್ದೇನೆ, ಮೊನ್ನೆ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಪಕ್ಷದ ಕಚೇರಿಯಲ್ಲೇ ಇದ್ದೆ. ಎರಡು ಹೆಸರು ಮಾತ್ರ ಹೋಗಿದೆ, ನಿಮ್ಮದೇ ಹೆಸರು ಬರುತ್ತದೆ ಎಂದು ಹೇಳುತ್ತ ಬಂದಿದ್ದರು. ಟಿಕೆಟ್ ನನ್ನ ಬದಲು ಒಂದೂವರೆ ವರ್ಷದ ಮೊದಲು ಪಕ್ಷಕ್ಕೆ ಬಂದಿದ್ದ ಧನಂಜಯ ಸರ್ಜಿ ಪಾಲಾಗಿತ್ತು.
ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದಾಗ, ಟಿಪ್ಪು ಸುಲ್ತಾನ್ ಕಟೌಟ್ ಹಾಕಿದಾಗ ಧನಂಜಯ ಸರ್ಜಿ ಕಾಂಗ್ರೆಸಿನಲ್ಲಿದ್ದು ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದಾರೆ. ಕಾಂಗ್ರೆಸ್, ಕಮ್ಯುನಿಸ್ಟ್, ಮುಸ್ಲಿಮರನ್ನು ಸೇರಿಸಿ ಶಾಂತಿಗಾಗಿ ನಡಿಗೆ ಕಾರ್ಯಕ್ರಮ ಆಯೋಜಿಸಿದ್ದರಲ್ಲೂ ಇವರ ಪಾತ್ರ ಇದೆ. ಪಕ್ಷದ ಸಿದ್ಧಾಂತ ತಿಳಿಯದ ವ್ಯಕ್ತಿಯನ್ನು ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿಸಿದ್ದಾರೆ. ಈ ಚುನಾವಣೆ ಪಕ್ಷದ ಮೇಲೆ ನಡೆಯುವುದಿಲ್ಲ. ಕೇವಲ ಅಭ್ಯರ್ಥಿ ಮೇಲೆ ನಡೆಯುತ್ತದೆ. ಕರಾವಳಿ ಜನರು ಹಿಂದುತ್ವ, ಪಕ್ಷದ ಸಿದ್ಧಾಂತ ಪರ ಇದ್ದಾರೆ. ಹಿಂದಿನಿಂದಲೂ ಪಕ್ಷ, ಸಿದ್ಧಾಂತಕ್ಕಾಗಿ ದುಡಿದ ನನ್ನನ್ನು ಗುರುತಿಸಿ ಮತ ಹಾಕಬೇಕು ಎಂದು ರಘುಪತಿ ಭಟ್ ಕೇಳಿಕೊಂಡರು.
ನಿಮಗೆ ಯಾರು ಟಿಕೆಟ್ ತಪ್ಪಿಸಿದ್ದು ಎಂಬ ನೇರ ಪ್ರಶ್ನೆಗೆ, ನೇರವಾಗಿ ಉತ್ತರ ನೀಡದ ರಘುಪತಿ ಭಟ್, ಯಾರು ತಪ್ಪಿಸಿದ್ದೆಂದು ಹೇಗೆ ಹೇಳೋದು.. ಕೊನೆಯ ಕ್ಷಣದ ವರೆಗೂ ಟಿಕೆಟ್ ಸಿಗುವ ನಿರೀಕ್ಷೆಯಿತ್ತು. ಹಾಗೆಂದು ಲಾಬಿ ನಡೆಸುವುದಕ್ಕೆ, ಓಲೈಸುವುದಕ್ಕೆ ಹೋಗಿರಲಿಲ್ಲ. ಬಿಜೆಪಿಯಲ್ಲೂ ಕಾಂಗ್ರೆಸ್ ರೀತಿ ಗಾಡ್ ಫಾದರ್ ಸಂಸ್ಕೃತಿ ಬಂದಿದೆ. ಗಣಪತಿ ಶಿವನಿಗೆ ಸುತ್ತು ಹೊಡೆದಂತೆ ಮಾಡಿದರೆ ಗರ್ಭಗೃಹದ ಸಂಸ್ಕೃತಿ ಇದೆ ಎಂದರು, ಒಟ್ಟು ಪದವೀಧರ ಕ್ಷೇತ್ರದಲ್ಲಿ 85 ಸಾವಿರ ಮತದಾರರಿದ್ದಾರೆ. ದಕ್ಷಿಣ ಕನ್ನಡ, ಉುಡುಪಿ ಜಿಲ್ಲೆಯಲ್ಲಿ 38 ಸಾವಿರದಷ್ಟು ಮತದಾರರಿದ್ದಾರೆ. ಹಾಗಾಗಿ, ಈ ಎರಡು ಜಿಲ್ಲೆಗಳ ಮೇಲೆ ಹೆಚ್ಚು ನಿರೀಕ್ಷೆ ಹೊಂದಿದ್ದೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಬಿಜೆಪಿ ಮುಖಂಡ ನವೀನ್ಚಂದ್ರ, ಶಿವಚರಣ್ ಶೆಟ್ಟಿ ಇದ್ದರು.
Former Udupi MLA Raghupati Bhat slams BJP, says party is working on with God father politics. Holding press meet at the press club in Mangalore he stated that party is giving position and power based on caste and money he added.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am