ಬ್ರೇಕಿಂಗ್ ನ್ಯೂಸ್
16-05-24 09:59 pm Mangalore Correspondent ಕರಾವಳಿ
ಮಂಗಳೂರು, ಮೇ.16: ಮಾನಸಿಕವಾಗಿ ಗಲಿಬಿಲಿಗೆ ಒಳಗಾದ ಮಹಿಳೆಯೊಬ್ಬರು ಆಟೋದಲ್ಲಿ ಬಜ್ಪೆ ಏರ್ಪೋರ್ಟ್ ತೆರಳಿದ್ದು, ಅಲ್ಲಿ ಹೋದ ಬಳಿಕ ದಿಕ್ಕು ತೋಚದಂತೆ ತಿರುಗಾಡಿ ಕೊನೆಗೆ ಭದ್ರತಾ ಸಿಬಂದಿಯಿಂದ ರಕ್ಷಣೆಗೊಳಗಾದ ಘಟನೆ ನಡೆದಿದೆ.
ಕದ್ರಿ ಠಾಣೆ ವ್ಯಾಪ್ತಿಯ ನಿವಾಸಿ ಅಂದಾಜು 35 ವರ್ಷದ ಮಹಿಳೆಯೊಬ್ಬರು ಮೇ 14ರಂದು ಸಂಜೆ ಮಿಸ್ಸಿಂಗ್ ಆಗಿದ್ದರು. ಕೆಲ ಹೊತ್ತಿನಲ್ಲಿ ಮನೆಯವರು ಮಹಿಳೆ ನಾಪತ್ತೆಯಾದ ಬಗ್ಗೆ ಕದ್ರಿ ಪೊಲೀಸರಿಗೂ ಮಾಹಿತಿ ನೀಡಿದ್ದರು. ಹುಡುಕಾಟವನ್ನೂ ಶುರು ಮಾಡಿದ್ದರು.
ಮಹಿಳೆ ನೇರವಾಗಿ ಆಟೋ ಹಿಡಿದು ಬಜ್ಪೆ ಏರ್ಪೋರ್ಟಿನತ್ತ ತೆರಳಿದ್ದು, ಯಾರೋ ವಿದೇಶದಿಂದ ಬರಲಿಕ್ಕಿದ್ದಾರೆ, ಅವರನ್ನು ಕರೆದೊಯ್ಯಲು ಬಂದಿದ್ದಾಗಿ ಭದ್ರತಾ ಸಿಬಂದಿಯಲ್ಲಿ ತಿಳಿಸಿದ್ದಾರೆ. ಆದರೆ ಯಾರು ಬರಲಿದ್ದಾರೆ, ಎಲ್ಲಿಂದ ಬರುವುದು, ಯಾವ ಫ್ಲೈಟ್ ಎನ್ನುವ ಪ್ರಶ್ನೆ ಕೇಳಿದರೆ, ಆಕೆಯ ಬಳಿ ಉತ್ತರ ಇರಲಿಲ್ಲ. ಏನೋ ಎಡವಟ್ಟು ಆಗಿದೆಯೆಂದು ಅಲ್ಲಿದ್ದ ಸ್ಥಳೀಯ ಮಹಿಳಾ ಸಿಬಂದಿಯೂ ಪ್ರಶ್ನೆ ಮಾಡಿದ್ದಾರೆ. ಬಳಿಕ ವಿಮಾನ ನಿಲ್ದಾಣದಿಂದ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಬಳಿ ನೀವು ಎಲ್ಲಿಂದ ಬಂದಿರೋದು ಅಂತ ಕೇಳಿದಾಗ, ಕದ್ರಿ ಎಂದು ಉತ್ತರ ನೀಡಿದ್ದಾರೆ. ಅದರಂತೆ, ಬಜ್ಪೆ ಪೊಲೀಸರು ಕದ್ರಿ ಠಾಣೆಗೆ ಮಾಹಿತಿ ನೀಡಿದಾಗ ಮಹಿಳೆ ಮಿಸ್ಸಿಂಗ್ ವಿಷಯ ತಿಳಿದುಬಂದಿದೆ.
ಕೂಡಲೇ ಮನೆಯವರಿಗೆ ಮಾಹಿತಿ ನೀಡಿದ್ದು, ರಾತ್ರಿ 10.30ರ ವೇಳೆಗೆ ಮನೆಮಂದಿ ಏರ್ಪೋರ್ಟ್ ತಲುಪಿದ್ದಾರೆ. ವಿಮಾನ ನಿಲ್ದಾಣದ ಭದ್ರತಾ ಸಿಬಂದಿ, ಬಜ್ಪೆ ಮತ್ತು ಕದ್ರಿ ಪೊಲೀಸರ ಸಕಾಲಿಕ ಪ್ರಯತ್ನದಿಂದಾಗಿ ಮಾನಸಿಕವಾಗಿ ಗೊಂದಲಕ್ಕೀಡಾದ ಮಹಿಳೆ ಮರಳಿ ಮನೆ ಸೇರಿದ್ದಾರೆ.
Stakeholders at Mangaluru International Airport acted in unison with a sense of purpose to unite an apparently disturbed woman with her family late on May 14. Security supervisor and staff, customer service and guest relations executives, Airport Security Group personnel of CISF, along with duty terminal manager and an executive in the security department, coordinated with local law enforcement agency to ensure a safe and happy ending.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am