ಬ್ರೇಕಿಂಗ್ ನ್ಯೂಸ್
30-04-24 08:04 pm Mangalore Correspondent ಕರಾವಳಿ
ಉಳ್ಳಾಲ, ಎ.30: ಹೊನ್ನು, ಮಣ್ಣಿಗೆ ಹೂಡಿದ ಹೂಡಿಕೆಯಿಂದ ಎಂದಿಗೂ ನಷ್ಟ ಸಾಧ್ಯವಿಲ್ಲ. ನಾವು ಖರೀದಿಸುವ ಭೂಮಿ ಮತ್ತು ಚಿನ್ನವು ನಮ್ಮ ಜೀವನಕ್ಕೆ ಭದ್ರತೆಯಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಆರಂಭಗೊಂಡ ನೂತನ ಸೂಪರ್ ಗೋಲ್ಡ್ & ಡೈಮಂಡ್ಸ್ "ನ ಎರಡನೇ ಜ್ಯುವೆಲ್ಲರಿ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು. ಸೂಪರ್ ಗೋಲ್ಡ್ ಜ್ಯುವೆಲ್ಲರಿಯು ಅತ್ಯುತ್ತಮ ಗುಣಮಟ್ಟ ವಿಶ್ವಾಸದ ವ್ಯವಹಾರ ನಡೆಸುತ್ತ ಬಂದಿದೆ. ಕಲ್ಲಾಪುವಿನಲ್ಲಿ ನೂತನ ಶಾಖೆ ಆರಂಭಿಸುವುದರೊಂದಿಗೆ ಊರಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿದಂತಾಗಿದೆ. ಹೊಸ ಜ್ಯುವೆಲ್ಲರಿ ಮಳಿಗೆಗಳ ಆರಂಭದಿಂದ ಮಾಲಕರಿಗೆ ಮಾತ್ರವಲ್ಲದೆ ಉದ್ಯೋಗಿಗಳಿಗೂ ಅನುಕೂಲವಾಗಿ ಅನೇಕ ಕುಟುಂಬಗಳ ಜೀವನ ನಿರ್ವಹಣೆಗೆ ಸಹಕಾರಿಯಾಗುತ್ತದೆ. ಅಲ್ಲದೆ ಇಲ್ಲಿನ ಜಮೀನಿನ ಮೌಲ್ಯವೂ ವೃದ್ಧಿಯಾಗುತ್ತದೆ. ಇಂತಹ ಇನ್ನಷ್ಟು ವಾಣಿಜ್ಯ ಕೆಂದ್ರಗಳು ಸ್ಥಾಪನೆಗೊಂಡು ಜನರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸೇವೆ ನೀಡಲಿ. ಸೂಪರ್ ಗೋಲ್ಡ್ ಶಾಖೆಗಳು ರಾಜ್ಯ, ದೇಶಕ್ಕೆ ವ್ಯಾಪಿಸಿ ಅಂತರಾಷ್ಟ್ರೀಯ ಮಟ್ಟಕ್ಕೆ ಪಸರಿಸಲಿ. ಇಂದಿನ ಯುವಕರು ಬೇಗನೆ ಶ್ರೀಮಂತರಾಗಲು ಶಾರ್ಟ್ ಕಟ್ ದಾರಿಯನ್ನು ಅವಲಂಬಿಸಿ ಅಷ್ಟೇ ಬೇಗನೆ ನೆಲಕಚ್ಚಿ ಹೋಗುತ್ತಾರೆ. ಆದರೆ ಕಷ್ಟ ಪಟ್ಟು ಹಂತ ಹಂತವಾಗಿ ಅಭಿವೃದ್ಧಿ ಹೊಂದಬಹುದು ಎಂಬುದಕ್ಕೆ ಸೂಪರ್ ಸಮೂಹ ಸಂಸ್ಥೆಗಳೇ ನಿದರ್ಶನವಾಗಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆಯ ಚೆಯರ್ ಮ್ಯಾನ್ ಟಿ.ಎಂ ಬಾವಾ ಅವರು 2016 ರಲ್ಲಿ ತೊಕ್ಕೊಟ್ಟುವಿನಲ್ಲಿ ಚಿನ್ನದ ಮಳಿಗೆ ಆರಂಭಿಸಿ ತಯಾರಿ ವೆಚ್ಚ ಕಡಿಮೆ ಮಾಡಿ ಗ್ರಾಹಕರಿಗೆ ನೀಡುವ ಮೂಲಕ ಯಶಸ್ಸು ಕಂಡಿದ್ದೇವೆ. ಇದೀಗ ಕಲ್ಲಾಪು ಬಳಿ ನಿರ್ಮಾಣಗೊಂಡ ಸ್ವಂತ ಕಟ್ಟಡ ದಲ್ಲಿ ಎರಡನೇ ಮಳಿಗೆ ಆರಂಭಿಸಿದ್ದೇವೆ. ಮದುವೆ ಸಮಾರಂಭಕ್ಕಾಗಿ ಚಿನ್ನ ಖರೀದಿ ಮಾಡುವವರಿಗೆ ವಿಶೇಷವಾದ ರಿಯಾಯಿತಿ ಕೂಡ ಇದೆ. ಚಿನ್ನ ಖರೀದಿಯಲ್ಲಿ ಗ್ರಾಹಕರಿಗೆ ಖುಷಿ ಸಿಗಬೇಕು. ಮುಂದಿನ ಹಂತದಲ್ಲಿ ಚಿನ್ನಾಭರಣ ಖರೀದಿಯಡಿ ಲಕ್ಕಿ ಕೂಪನ್ ಮೂಲಕ ಬೈಕ್ ಹಾಗೂ ಇನ್ನಿತರ ಆಕರ್ಷಕ ಬಹುಮಾನಗಳ ಡ್ರಾ ಕಾರ್ಯಕ್ರಮ ಇಡಲಾಗುವುದು. ಚಿನ್ನಾಭರಣ ಖರೀದಿ ಮಾಡಿದವರಿಗೆ ವಿಶೇಷ ಉಡುಗೊರೆ ಕೂಡ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ್, ಹೈದರ್ ಪರ್ತಿಪ್ಪಾಡಿ, ಇಬ್ರಾಹಿಂ ಕೋಡಿಜಾಲ್, ದಿನೇಶ್ ರೈ, ನಾಸೀರ್ ಅಹ್ಮದ್ ಸಾಮಣಿಗೆ, ಸಲೀಂ ಯು.ಬಿ., ಶರೀಫ್ ವೈಟ್ ಸ್ಟೋನ್, ಸಾಗರ್ ಇಸ್ಮಾಯಿಲ್, ಪಾಲುದಾರರಾದ ಯು.ಎನ್.ತಯ್ಯುಬ್ ಹಾಜಿ , ಫೈಝಲ್, ಯು.ಎಂ.ಹಸನಬ್ಬ ಹಾಜಿ, ಯು.ಎ.ಮೊಹಮ್ಮದ್, ಯು.ಎಂ.ಸೀದಿಯಬ್ಬ, ಅಬ್ದುಲ್ ರಹಿಮಾನ್ ಹಾಜಿ, ಮಾರ್ಕೆಟಿಂಗ್ ಮ್ಯಾನೇಜಿಂಗ್ ಪಾರ್ಟ್ನರ್ಸ್ ಮೊಹಮ್ಮದ್ ಖಲಂದರ್, ಮೊಹಮ್ಮದ್ ನದೀಂ ಮತ್ತಿತರರು ಉಪಸ್ಥಿತರಿದ್ದರು. ವಿಜೆ ಶಿಶಾನ್ ಕೌಡೂರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಆಸೀಫ್ ವಂದಿಸಿದರು.
Mangalore Super gold and diamound showroom inaugurated at Thokottu by speaker UT Khader.
16-06-25 02:56 pm
HK News Desk
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
16-06-25 05:29 pm
HK News Desk
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
16-06-25 08:34 pm
Giridhar shetty, Mangalore Correspondent
Mangalore Rain, Belthanagdy, Bike: ಸವಣಾಲು ; ಧ...
16-06-25 05:07 pm
Mangalore, Pregnant Wife Suicide, Puthila Par...
16-06-25 12:30 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಲ್ಲಿಸಿದ್ದ ಲಾರಿಗೆ...
16-06-25 12:13 pm
Mangalore Fire, Deralakatte Hostel, Rain: ಜಡಿ...
15-06-25 11:04 pm
16-06-25 03:05 pm
HK News Desk
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm