ಬ್ರೇಕಿಂಗ್ ನ್ಯೂಸ್
14-04-24 09:01 pm Mangaluru Correspondent ಕರಾವಳಿ
ಮಂಗಳೂರು, ಎ.14: ಮಂಗಳೂರಿನಲ್ಲಿ ಇಂದು ಕೇಸರಿ ಪಾಳಯದ ಜನಸಾಗರವೇ ಹರಿದಿತ್ತು. ಪ್ರಧಾನಿ ಮೋದಿಯನ್ನು ನೋಡಲು ಸಂಜೆ ಐದು ಗಂಟೆಯಿಂದಲೇ ಲಕ್ಷಾಂತರ ಜನರು ಸೇರಿದ್ದರು. ಜನರು ಹೂಮಳೆಗರೆಯುತ್ತಿದ್ದಂತೆ ಮೋದಿ ಕೈಮುಗಿಯುತ್ತಲೇ ಸಾಗಿದರು.
ಸರಿಯಾಗಿ 7.50ಕ್ಕೆ ಲೇಡಿಹಿಲ್ ಬಳಿಯ ನಾರಾಯಣ ಗುರು ಸರ್ಕಲ್ ಬಂದಿಳಿದ ಮೋದಿ, ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ರೋಡ್ ಶೋ ವಾಹನ ಏರಿದರು. ವಾಹನದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಜೊತೆಗಿದ್ದರು.




































ರಸ್ತೆಯ ಇಕ್ಕೆಲಗಳಲ್ಲೂ ಜನರು, ಅಭಿಮಾನಿಗಳು ನೆರೆದಿದ್ದರು. ಅಲ್ಲಲ್ಲಿ ಮೋದಿ ಬರುವ ಮೊದಲು ಜನರಿಗೆ ಬೋರ್ ಆಗದಂತೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಾಡಾಗಿತ್ತು. ಮೋದಿ ತೆರೆದ ವಾಹನದಲ್ಲಿ ಬರುತ್ತಿದ್ದಂತೆ ಜನರ ಮೋದಿ ಮೋದಿ ಜೈಕಾರ ಮೊಳಗಿತು. ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಮೋದಿ ಮೋದಿ ಘೋಷಣೆ ಹಾಕಿದರು. ರಸ್ತೆಯುದ್ಸಕ್ಕೂ ಸೇರಿದ ಜನರ ಒಂದೇ ಕಂಠದ ಕೂಗು ಕೇಳಿ ಸ್ವತಃ ಮೋದಿಯೇ ಪುಳಕಗೊಂಡರು. ಕೆಲವು ಜಾಗದಲ್ಲಿ ಜನರು ಹುಚ್ಚೆದ್ದು ಕುಣಿಯುವುದೂ ಕಂಡುಬಂತು. ಮೋದಿಯವರೇ ತಮಗೆ ಬಿದ್ದ ಹೂವುಗಳನ್ನು ಮರಳಿ ಜನರತ್ತ ಎಸೆದಿದ್ದೂ ಕಂಡುಬಂತು. ಮಹಿಳೆಯರು, ಮಕ್ಕಳು, ವೃದ್ಧರು ಬಹುಪಾಲು ಯುವಜನರು ಬಿಳಿ ಗಡ್ಡದ ಮೋದಿಯವರ ವರ್ಚಸ್ಸು ಕಂಡು ಆನಂದ ತುಂದಿಲರಾದರು.
ನಾರಾಯಣ ಗುರು ವೃತ್ತದಿಂದ ಲಾಲ್ ಬಾಗ್, ಪಿವಿಎಸ್ ವೃತ್ತದ ಮೂಲಕ ನವಭಾರತ್ ಸರ್ಕಲ್ ಬಳಿ ರೋಡ್ ಶೋ ಕೊನೆಗೊಂಡಿತು. ಬಳಿಕ ಅಲ್ಲಿಂದಲೇ ವಾಹನದಿಂದ ಇಳಿದು ಮೋದಿ ಎಸ್ಕಾರ್ಟ್ ವಾಹನದಲ್ಲಿ ಹಂಪನಕಟ್ಟೆ ಮೂಲಕ ಮರಳಿ ಏರ್ಪೋರ್ಟ್ ನತ್ತ ಸಾಗಿದರು. ಜನರು ಜೈಶ್ರೀರಾಮ್, ಜೈ ಮೋದಿ ಎನ್ನುತ್ತ ಮನೆಯತ್ತ ನಡೆದರು.
A massive crowd gathered in Mangaluru to witness the roadshow of Prime Minister (PM) Narendra Modi on Sunday, April 14. The event kicked off at Narayana Guru Circle at Ladyhill and concluded at Navbharath Circle. PM Modi was warmly welcomed at Narayana Guru Circle with an aarti ritual, followed by the garlanding of the statue of Narayana Guru before embarking on the roadshow.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
10-01-26 10:45 pm
Mangalore Correspondent
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ...
10-01-26 06:07 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm