ಬ್ರೇಕಿಂಗ್ ನ್ಯೂಸ್
14-04-24 09:01 pm Mangaluru Correspondent ಕರಾವಳಿ
ಮಂಗಳೂರು, ಎ.14: ಮಂಗಳೂರಿನಲ್ಲಿ ಇಂದು ಕೇಸರಿ ಪಾಳಯದ ಜನಸಾಗರವೇ ಹರಿದಿತ್ತು. ಪ್ರಧಾನಿ ಮೋದಿಯನ್ನು ನೋಡಲು ಸಂಜೆ ಐದು ಗಂಟೆಯಿಂದಲೇ ಲಕ್ಷಾಂತರ ಜನರು ಸೇರಿದ್ದರು. ಜನರು ಹೂಮಳೆಗರೆಯುತ್ತಿದ್ದಂತೆ ಮೋದಿ ಕೈಮುಗಿಯುತ್ತಲೇ ಸಾಗಿದರು.
ಸರಿಯಾಗಿ 7.50ಕ್ಕೆ ಲೇಡಿಹಿಲ್ ಬಳಿಯ ನಾರಾಯಣ ಗುರು ಸರ್ಕಲ್ ಬಂದಿಳಿದ ಮೋದಿ, ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ರೋಡ್ ಶೋ ವಾಹನ ಏರಿದರು. ವಾಹನದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಜೊತೆಗಿದ್ದರು.
ರಸ್ತೆಯ ಇಕ್ಕೆಲಗಳಲ್ಲೂ ಜನರು, ಅಭಿಮಾನಿಗಳು ನೆರೆದಿದ್ದರು. ಅಲ್ಲಲ್ಲಿ ಮೋದಿ ಬರುವ ಮೊದಲು ಜನರಿಗೆ ಬೋರ್ ಆಗದಂತೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಾಡಾಗಿತ್ತು. ಮೋದಿ ತೆರೆದ ವಾಹನದಲ್ಲಿ ಬರುತ್ತಿದ್ದಂತೆ ಜನರ ಮೋದಿ ಮೋದಿ ಜೈಕಾರ ಮೊಳಗಿತು. ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಮೋದಿ ಮೋದಿ ಘೋಷಣೆ ಹಾಕಿದರು. ರಸ್ತೆಯುದ್ಸಕ್ಕೂ ಸೇರಿದ ಜನರ ಒಂದೇ ಕಂಠದ ಕೂಗು ಕೇಳಿ ಸ್ವತಃ ಮೋದಿಯೇ ಪುಳಕಗೊಂಡರು. ಕೆಲವು ಜಾಗದಲ್ಲಿ ಜನರು ಹುಚ್ಚೆದ್ದು ಕುಣಿಯುವುದೂ ಕಂಡುಬಂತು. ಮೋದಿಯವರೇ ತಮಗೆ ಬಿದ್ದ ಹೂವುಗಳನ್ನು ಮರಳಿ ಜನರತ್ತ ಎಸೆದಿದ್ದೂ ಕಂಡುಬಂತು. ಮಹಿಳೆಯರು, ಮಕ್ಕಳು, ವೃದ್ಧರು ಬಹುಪಾಲು ಯುವಜನರು ಬಿಳಿ ಗಡ್ಡದ ಮೋದಿಯವರ ವರ್ಚಸ್ಸು ಕಂಡು ಆನಂದ ತುಂದಿಲರಾದರು.
ನಾರಾಯಣ ಗುರು ವೃತ್ತದಿಂದ ಲಾಲ್ ಬಾಗ್, ಪಿವಿಎಸ್ ವೃತ್ತದ ಮೂಲಕ ನವಭಾರತ್ ಸರ್ಕಲ್ ಬಳಿ ರೋಡ್ ಶೋ ಕೊನೆಗೊಂಡಿತು. ಬಳಿಕ ಅಲ್ಲಿಂದಲೇ ವಾಹನದಿಂದ ಇಳಿದು ಮೋದಿ ಎಸ್ಕಾರ್ಟ್ ವಾಹನದಲ್ಲಿ ಹಂಪನಕಟ್ಟೆ ಮೂಲಕ ಮರಳಿ ಏರ್ಪೋರ್ಟ್ ನತ್ತ ಸಾಗಿದರು. ಜನರು ಜೈಶ್ರೀರಾಮ್, ಜೈ ಮೋದಿ ಎನ್ನುತ್ತ ಮನೆಯತ್ತ ನಡೆದರು.
A massive crowd gathered in Mangaluru to witness the roadshow of Prime Minister (PM) Narendra Modi on Sunday, April 14. The event kicked off at Narayana Guru Circle at Ladyhill and concluded at Navbharath Circle. PM Modi was warmly welcomed at Narayana Guru Circle with an aarti ritual, followed by the garlanding of the statue of Narayana Guru before embarking on the roadshow.
14-06-25 11:05 pm
Bangalore Correspondent
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
ಕಾರವಾರ ಜಿಲ್ಲಾ ಆಸ್ಪತ್ರೆಗೆ ನುಗ್ಗಿದ್ದ ಚರಂಡಿ ನೀರು...
12-06-25 11:07 pm
14-06-25 12:00 pm
HK News Desk
Kasaragod Deputy Tahsildar Suspended: ವಿಮಾನ ದ...
13-06-25 11:09 pm
Air India Plane Crash, Black Box Recovered: ವ...
13-06-25 10:42 pm
ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್...
13-06-25 03:08 pm
ಇರಾನ್ ಮೇಲೆ ಇಸ್ರೇಲ್ ಡೆಡ್ಲಿ ಅಟ್ಯಾಕ್ ; ಅಣ್ವಸ್ತ್ರ...
13-06-25 02:14 pm
15-06-25 03:20 pm
Mangalore Correspondent
Mangalore Rain, Compound Wall Collapsed Video...
15-06-25 12:12 pm
Rahiman Murder, Senior Advocate Balan, Mangal...
14-06-25 10:21 pm
Mangalore Heavy Rain, Traffic, Pumpwell: ಒಂದೇ...
14-06-25 09:00 pm
Bangalore RCB Stampede, Veerappa Moily: ಕಾಲ್ತ...
14-06-25 02:49 pm
14-06-25 11:02 pm
Bangalore Correspondent
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm