ಬ್ರೇಕಿಂಗ್ ನ್ಯೂಸ್
05-03-24 04:28 pm Mangalore Correspondent ಕರಾವಳಿ
ಉಳ್ಳಾಲ, ಮಾ.5: ಗಟ್ಟಿ ಸಮುದಾಯದವರ ಬಗ್ಗೆ ಕ್ಷುಲ್ಲಕವಾಗಿ ಹೇಳಿಕೆ ನೀಡಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ವಿರುದ್ಧ ಗಟ್ಟಿ ಸಮಾಜ ಬಾಂಧವರು ತಿರುಗಿ ಬಿದ್ದಿದ್ದು ಸದಾಶಿವ ಉಳ್ಳಾಲ್ ಅವರು ತಕ್ಷಣ ಬಹಿರಂಗ ಕ್ಷಮೆ ಯಾಚಿಸದಿದ್ದರೆ ಅವರ ಮನೆ, ಕಚೇರಿಯೆದುರು ಉಗ್ರ ಪ್ರತಿಭಟನೆ ನಡೆಸೋದಾಗಿ ಎಚ್ವರಿಸಿದ್ದಾರೆ.
ಭಾನುವಾರ ತೊಕ್ಕೊಟ್ಟಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು ಗಟ್ಟಿ ಸಮಾಜವನ್ನು ಬೊಟ್ಟು ಮಾಡಿ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಕ್ರೋಶ ವ್ಯಕ್ತವಾಗಿತ್ತು.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ಬಲ್ಲಿ ಈ ಬಗ್ಗೆ ಗಟ್ಟಿ ಸಮಾಜದ ಪ್ರಮುಖರು ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿದ್ದಾರೆ. ಪ್ರಮುಖರಾದ ಪವಿತ್ರ ಗಟ್ಟಿ ಮಾತನಾಡಿ ನಮ್ಮ ಸಮುದಾಯವನ್ನ ಬಹಿರಂಗವಾಗಿ ಅವಹೇಳನ ಮಾಡಿದ ಸದಾಶಿವ ಉಳ್ಳಾಲ್ ಅವರು ತಕ್ಷಣವೇ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ಮನೆ, ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.
ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ವಿಶ್ವನಾಥ ಗಟ್ಟಿ ಮಾತನಾಡಿ ಕೊಂಡಾಣ ಕ್ಷೇತ್ರದಲ್ಲಿ ನಡೆದಿದ್ದ ಗಲಾಟೆ ವಿಚಾರದಲ್ಲಿ ಸದಾಶಿವ ಉಳ್ಳಾಲ್ ಅವರು ನಮ್ಮ ಸಮಾಜವನ್ನ ವಿನಾಕಾರಣ ಎಳೆ ತಂದು ಅವಮಾನಿಸುವ ಹೇಳಿಕೆ ನೀಡಿರುವುದು ಖಂಡನೀಯ. 1930 ಇಸವಿಯಿಂದ 1988 ಇಸವಿಯ ವರೆಗೆ ಗಟ್ಟಿ ಸಮಾಜದವರೇ ಸೋಮನಾಥ ದೇವಸ್ಥಾನದ ಆಡಳಿತ ನಡೆಸಿದ್ದು, ಕ್ಷೇತ್ರದಲ್ಲಿ ನಡೆಯುವ ಪಂಚ ಪರ್ವ, ವಾರ್ಷಿಕ ಉತ್ಸವಗಳನ್ನ ಸಮಾಜದ ಜನರ ಸಹಕಾರದೊಂದಿಗೆ ಅತ್ಯಂತ ಸುಂದರವಾಗಿ ನಡೆಸಿಕೊಂಡು ಬರುತ್ತಿದ್ದರು. ಅಂದಿನ ಕಾಲದಲ್ಲಿ ಬಹಳ ಕಷ್ಟದಲ್ಲಿ ಸಮುದಾಯದವರ ಪ್ರತೀ ಮನೆಯಿಂದಲೂ ಒಂದು ಮುಷ್ಟಿ ಅಕ್ಕಿ, ಒಂದು ಗಿಂಡೆ ಎಲ್ಲೆಣ್ಣೆಯನ್ನು ಕುಲ ಸ್ವಾಮಿ ಸೋಮನಾಥನಿಗೆ ಅರ್ಪಿಸುತ್ತಿದ್ದರು. ಸೋಮನಾಥನಿಲ್ಲದೆ ಗಟ್ಟಿ ಸಮಾಜವಿಲ್ಲ ಎಂಬ ನಂಬಿಕೆ ನಮ್ಮದು. ಈಗಲೂ ಸೋಮನಾಥನ ವಾರ್ಷಿಕ ಜಾತ್ರೆಗೆ ಗಟ್ಟಿ ಸಮಾಜ ಬಾಂಧವರು ಮನೆ, ಮನೆಯಿಂದ ದೇಣಿಗೆ ಸಂಗ್ರಹಿಸಿ ಹೊರೆ ಕಾಣಿಕೆ ಅರ್ಪಿಸುತ್ತಾರೆ. ಸದಾಶಿವ ಉಳ್ಳಾಲ್ ಅವರು ಗಟ್ಟಿ ಸಮಾಜದ ಮೇಲೆ ಮಾಡಿರುವ ಆರೋಪ ನಮ್ಮ ಲೋಪದಿಂದ ಆಗಿರುವುದಲ್ಲ. ನಮ್ಮದೇ ಹಿಂದೂ ಬಾಂಧವರ ಕೆಲವು ವಿಕೃತ ಮನಸ್ಥಿತಿಯ ಜನರಿಂದ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಗಟ್ಟಿ ಸಮಾಜದ ನಾಯ್ಗರಾದ ಹರೀಶ್ಚಂದ್ರ ಗಟ್ಟಿ ಬೊಂಬಾಯಿ ಮನೆ, ಮೇಲ್ಡರಾದ ಯಾದವ ಗಟ್ಟಿ, ಪ್ರಮುಖರಾದ ಜಯರಾಮ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Mangalore Gatti community warns of protest for controversial remkars by sadashiv ullal on kondana temple row.
09-06-25 04:41 pm
HK News Desk
BK Hariprasad, Suhas Shetty, NIA: ರೌಡಿಗಳಿಗೆಲ್...
09-06-25 03:02 pm
Union Minister Prahlad Joshi, Mangalore SP Ar...
09-06-25 02:00 pm
Suhas Shetty Murder, NIA, Home Minister: ಸುಹಾ...
09-06-25 12:35 pm
ಕಾಲ್ತುಳಿತ ಸಂತ್ರಸ್ತರಿಗೆ ಒಂದು ತಿಂಗಳ ವೇತನ ಬಿಟ್ಟು...
08-06-25 06:03 pm
09-06-25 05:16 pm
HK News Desk
# Arrest kohli ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್...
07-06-25 09:54 pm
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
09-06-25 11:03 pm
Mangalore Correspondent
Mangalore BY Vijayendra, BJP: ಕಾಂಗ್ರೆಸ್ ಆಡಳಿತ...
09-06-25 09:56 pm
Suhas Shetty Murder, NIA, Mangalore: ಸುಹಾಸ್ ಶ...
08-06-25 10:51 pm
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
09-06-25 09:20 pm
HK News Desk
ತನ್ನನ್ನು ಕಾರ್ಡಿಯೋಲಜಿಸ್ಟ್ ಅಂತ ಹೇಳಿಕೊಂಡು 50ಕ್ಕೂ...
08-06-25 10:29 pm
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm