ಬ್ರೇಕಿಂಗ್ ನ್ಯೂಸ್
26-11-20 12:35 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 26: ಬಹುನಿರೀಕ್ಷಿತ ಗೈಲ್ ಕಂಪನಿಯ ನೈಸರ್ಗಿಕ ಅನಿಲ ಕೊಚ್ಚಿಯಿಂದ ಪೈಪ್ ಲೈನ್ ಮೂಲಕ ಮಂಗಳೂರು ತಲುಪಿದ್ದು, ಮೊದಲ ಹಂತದಲ್ಲೇ ಎಂಸಿಎಫ್ ನಲ್ಲಿ ನೈಸರ್ಗಿಕ ಅನಿಲ ಬಳಕೆಗೆ ಯೋಜನೆ ಹಾಕಲಾಗಿದೆ.
ಈವರೆಗೆ ಎಂಸಿಎಫ್ ನಲ್ಲಿ ನ್ಯಾಫ್ತಾ ಬಳಸಿ ಯೂರಿಯಾ ಮತ್ತಿತರ ರಸಗೊಬ್ಬರ ತಯಾರಿ ನಡೆಸಲಾಗುತ್ತಿತ್ತು. ಆದರೆ, ನ್ಯಾಫ್ತಾ ಬಳಕೆಯಿಂದ ಪರಿಸರಕ್ಕೆ ಮಾರಕ ಮತ್ತು ಉತ್ಪಾದನಾ ವೆಚ್ಚ ಅಧಿಕ ಎನ್ನುವ ನೆಲೆಯಲ್ಲಿ ನ್ಯಾಫ್ತಾ ಬಳಕೆಯನ್ನು ಆರು ವರ್ಷಗಳ ಹಿಂದೆ ಕೇಂದ್ರ ಸರಕಾರ ನಿಷೇಧಿಸಿತ್ತು. ಕೇಂದ್ರ ಸರಕಾರದ ನಿಷೇಧ ಆದೇಶದಿಂದ ಒಂದು ಹಂತದಲ್ಲಿ ಎಂಸಿಎಫ್ ಉತ್ಪಾದನೆಯನ್ನೂ ಸ್ಥಗಿತಗೊಳಿಸಿತ್ತು. ಆನಂತರ ನೈಸರ್ಗಿಕ ಅನಿಲ ಲಭ್ಯವಾಗುವ ವರೆಗೆ ನ್ಯಾಫ್ತಾ ಬಳಸಲು ಸರಕಾರ ಅನುಮತಿ ನೀಡಿತ್ತು.
ಮೂರು ವರ್ಷಗಳ ಮೊದಲೇ ಗೈಲ್ ಪೈಪ್ ಲೈನ್ ಮೂಲಕ ನೈಸರ್ಗಿಕ ಅನಿಲ ಪೂರೈಕೆಯಾಗಬೇಕಿತ್ತು. ಆದರೆ, ಪೈಪ್ ಲೈನ್ ಹಾಕುವುದು ವಿಳಂಬವಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಅನಿಲ ಪೂರೈಕೆ ಆರಂಭಗೊಂಡಿದ್ದು ಆರಂಭಿಕ ಹಂತದ ಪ್ರಯೋಗ ನಡೆಸಲಾಗುತ್ತಿದೆ. ಅನಿಲ ಆಧಾರಿತ ಯಂತ್ರಗಳನ್ನು ಅಳವಡಿಸಿ ಕಾರ್ಯ ಚಟುವಟಿಕೆಯನ್ನು ಬಗ್ಗೆ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.
ಅಲ್ಲದೆ, ನೈಸರ್ಗಿಕ ಅನಿಲ ಸ್ಟೋರೇಜ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಮುಂದಿನ ತಿಂಗಳಿಂದ ಅಧಿಕೃತವಾಗಿ ನೈಸರ್ಗಿಕ ಅನಿಲದಿಂದ ರಸಗೊಬ್ಬರ ತಯಾರಿ ಆರಂಭಗೊಳ್ಳಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎಂಆರ್ ಪಿಎಲ್ ಗೂ ಗೈಲ್ ಕಂಪನಿಯಿಂದ ನೈಸರ್ಗಿಕ ಅನಿಲ ಪೂರೈಸಲಿದೆ. ಸದ್ಯ ಎಂಆರ್ ಪಿಎಲ್ ನಲ್ಲಿ ಪ್ರತಿದಿನ 2500 ಟನ್ ಎಲ್ ಪಿಜಿ ಉತ್ಪಾದನೆಯಾಗುತ್ತಿದ್ದು, ಅದನ್ನು ರಾಜ್ಯದ ವಿವಿಧೆಡೆಗೆ ಪೂರೈಸಲಾಗುತ್ತಿದೆ. ಇಲ್ಲಿ ಪೆಟ್ರೋಲಿಯಂ ಕಚ್ಚಾ ತೈಲದಿಂದ ಎಲ್ ಪಿಜಿ ಉತ್ಪಾದನೆ ಮಾಡಲಾಗುತ್ತಿತ್ತು. ಇನ್ನು ಗೈಲ್ ಪೂರೈಸುವ ನೈಸರ್ಗಿಕ ಅನಿಲದಿಂದಲೇ ಎಲ್ ಪಿಜಿ ಉತ್ಪಾದನೆಯಾಗಲಿದೆ.
The much-delayed Kochi-Mangalore natural gas pipeline project is finally ready for commissioning any day from now as the national energy major Gail India has completed the final 540-metre treacherous stretch across the Chandragiri river in northern Kerala, according to a senior company official.
05-06-25 11:06 am
Bangalore Correspondent
RCB, Death, CM Siddaramaiah: RCB ಕಾಲ್ತುಳಿತ ;...
04-06-25 10:48 pm
RCB celebration, Bangalore, Stampede, update:...
04-06-25 09:07 pm
R Ashok, RCB, Bangalore, Death: ಕಿಲ್ಲರ್ RCB ;...
04-06-25 08:06 pm
RCB Victory Celebration, Death, Stampede, Ban...
04-06-25 06:21 pm
04-06-25 05:05 pm
HK News Desk
MP Brijesh Chowta, Delegation: ಐದು ದೇಶಗಳಲ್ಲಿ...
03-06-25 10:10 pm
ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದ ಕಟ್ಟಡ ಕಾರ್ಮಿಕನನ್...
01-06-25 12:35 pm
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
05-06-25 01:48 pm
Mangaluru Correspondent
ಕೇಸರಿ ಕಟ್ಟಿ ಹೊಡೆದ್ಕೊಂಡರೆ ಹಿಂದು ಕಾರ್ಯಕರ್ತ ಆಗ್ತ...
05-06-25 10:10 am
ಸೋಮೇಶ್ವರ, ಅಂಬಿಕಾ ರೋಡ್ ರಾಜಕಾಲುವೆಯ ಕಿರು ಸೇತುವೆ...
04-06-25 10:43 pm
Mangalore Police, Social Media, Arrest: ಜಾಲತಾ...
04-06-25 09:34 pm
RCB, Mangalore celebration, IPL Cricket 2025:...
04-06-25 02:26 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm