ಬ್ರೇಕಿಂಗ್ ನ್ಯೂಸ್
17-11-20 09:39 pm Mangaluru Crime Correspondent ಕರಾವಳಿ
ಉಳ್ಳಾಲ, ನವಂಬರ್ 17: ಕಳೆದ ವಾರವಷ್ಟೆ ಉಳ್ಳಾಲ ಕೋಟೆಪುರದ ಕಡಲ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಧಂಧೆಯನ್ನು ವೀಡಿಯೋ ಸಹಿತ ಹೆಡ್ ಲೈನ್ ಕರ್ನಾಟಕ ವರದಿ ಮಾಡಿತ್ತು. ಇದೀಗ ಕೋಟೆಪುರದ ನದಿ ತೀರದಲ್ಲೂ ಮರಳು ಧಂಧೆ ರಾಜಾರೋಷವಾಗಿ ನಡೆಯುತ್ತಿರುವುದನ್ನು ಪತ್ತೆ ಮಾಡಿದೆ. ಈ ಬಗ್ಗೆ ಡಿಸಿಪಿಗೆ ಮಾಹಿತಿ ನೀಡಿದ್ದು, ಉಳ್ಳಾಲ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಧಂಧೆಕೋರರು ಎಸ್ಕೇಪ್ ಆಗಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಕೋಟೆಪುರ ವೃತ್ತದ ಬಲಗಡೆಯ ನದಿ ತೀರದಲ್ಲಿ ನಿತ್ಯವೂ ಲೋಡ್ ಗಟ್ಟಲೆ ಮರಳನ್ನು ಅಕ್ರಮವಾಗಿ ಟಿಪ್ಪರ್ ಲಾರಿಗೆ ತುಂಬಿಸಿ ಸಾಗಿಸಲಾಗುತ್ತಿದೆ. ಈ ಬಗ್ಗೆ ಸ್ಥಳದಿಂದಲೇ ಡಿಸಿಪಿ ಅರುಣಾಂಶು ಗಿರಿ ಅವರಿಗೆ ಫೋನ್ ಮಾಡಿ ವಿಚಾರ ತಿಳಿಸಲಾಗಿದೆ. ಅದರಂತೆ, ಒಂದು ಪಿಸಿಆರ್ ವಾಹನ ಕೋಟೆಪುರ ಸರ್ಕಲ್ ಕಡೆಗೆ ದೌಡಾಯಿಸಿದ್ದಲ್ಲದೆ, ಒಂದು ಸುತ್ತು ಹೊಡೆದು ಮತ್ತೆ ಠಾಣೆ ಕಡೆ ಹಿಂದಿರುಗಿದೆ. ಸ್ಥಳೀಯ ಪೊಲೀಸರೇ ಹೊಯ್ಗೆಯವರಿಗೆ ಮಾಹಿತಿ ನೀಡಿದರೋ ಏನೋ ಎನ್ನುವಂತೆ ಅಲ್ಲಿದ್ದ ಎರಡು ಟಿಪ್ಪರ್ ಗಳು ಕೋಟೆಪುರ ಒಳದಾರಿ ಮೂಲಕ ಕಾಲ್ಕಿತ್ತಿದೆ.



ಇದೇನು ಉಳ್ಳಾಲ ಪೊಲೀಸರಿಗೆ ತಿಳಿಯದೆ ಆಗುತ್ತಿರೋ ವ್ಯವಹಾರ ಏನಲ್ಲ. ಪೊಲೀಸರ ಎದುರಲ್ಲೇ ಟಿಪ್ಪರ್ ಲಾರಿಗಳಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ನದಿ ತೀರದಿಂದ ದೋಣಿಗಳಲ್ಲಿ ತಂದ ಮರಳನ್ನು ರಾಜಾರೋಷವಾಗಿ ಟಿಪ್ಪರ್ ಗೆ ಲೋಡ್ ಮಾಡಲಾಗುತ್ತದೆ. ಆದರೆ, ಈ ಬಗ್ಗೆ ಪೊಲೀಸರಿಗೆ, ಮೇಲಧಿಕಾರಿಗಳಿಗೆ ತಿಳಿಸಿದರೆ, ಅಲ್ಲಿಂದಲೇ ಹೊಯ್ಗೆ ಮಾಫಿಯಾಕ್ಕೆ ವಿಚಾರ ಹೋಗುತ್ತದೆ. ಕಳ್ಳನಿಗೆ ಪೊಲೀಸನೇ ಮಾಹಿತಿದಾರನಾದರೆ ಕಳ್ಳನ ಹಿಡಿಯೋದು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಇದರ ಹಿಂದೆ ಬರೀಯ ಪೊಲೀಸರೇ ಇರೋದಾ, ಪೊಲೀಸರನ್ನು ಕುಣಿಸೋ ಆಡಳಿತ ಪಕ್ಷಗಳ ನಾಯಕರು ಕೂಡ ಇದ್ದಾರೆಯೇ ಎನ್ನುವ ಅನುಮಾನ ಮೂಡಿದೆ.
ಮರಳು ನೀತಿ ಜಾರಿಗೆ ತಡೆ ಯಾರು ?
ಸಾಮಾನ್ಯ ಜನರಿಗೆ ಮರಳು ಸಿಗದ ವಿಚಾರದಲ್ಲಿ ಸಂಸದರ ಬಳಿ ಇತ್ತೀಚೆಗೆ ಮರಳು ವ್ಯಾಪಾರಿಗಳೇ ಹೋಗಿದ್ದರಂತೆ. ಮರಳು ನೀತಿ ವಿಚಾರದಲ್ಲಿ ಜಿಲ್ಲಾಡಳಿತ ನಿರ್ಧಾರಕ್ಕೆ ಬರಬೇಕೆಂದು ಅಹವಾಲು ಮುಂದಿಟ್ಟಿದ್ದರಂತೆ. ಆದರೆ, ಈ ಬಗ್ಗೆ ಸಮಾಲೋಚಿಸಿ ನಿರ್ಧಾರ ಪ್ರಕಟಿಸುವ ಆಯಕಟ್ಟಿನಲ್ಲಿರುವ ವ್ಯಕ್ತಿಯೇ ತಿರುಗಿ ಬಿದ್ದು, ಮರಳು ವ್ಯಾಪಾರಿಗಳನ್ನು ಬೈದು ಕಳಿಸಿದ್ದರಂತೆ.. ಹೀಗೆ ಅಂತೆ ಕಂತೆಗಳನ್ನು ಬಿಜೆಪಿಯವರೇ ಹೇಳುತ್ತಿದ್ದು ಮರಳು ನೀತಿ ಜಾರಿಗೆ ಬರದಿರಲು ಅಡ್ಡಿಯಾಗಿರುವ ಕಾಣದ ಕೈಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ.
The Headline Karnataka Team in Mangalore has exposed the illegal sand mining at Kotepura, Ullal, Mangalore. Though the Ullal police know about the illegal activity yet no action is been taken place.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:19 pm
Mangalore Correspondent
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm