ಬ್ರೇಕಿಂಗ್ ನ್ಯೂಸ್
17-11-20 01:10 pm Mangaluru Crime Correspondant ಕರಾವಳಿ
ಮಂಜೇಶ್ವರ, ನವೆಂಬರ್ 17: ಬಜರಂಗದಳ ಕಾರ್ಯಕರ್ತರು ವಾರ್ನ್ ಮಾಡಿದ್ದು , ಫೋಟೊ ವೈರಲ್ ಮಾಡಿದ್ದು ಕಾರಣವೋ ಗೊತ್ತಿಲ್ಲ. ಅಂತೂ, ಲವ್ ಕಂ ಜಿಹಾದಿಯ ಪ್ರೇಮ ಪಾಶಕ್ಕೆ ಸಿಲುಕಿ ಮುಸ್ಲಿಂ ಹುಡುಗನ ಜೊತೆ ಪರಾರಿಯಾಗಿದ್ದ ಹಿಂದು ಯುವತಿ ಮರಳಿ ಮನೆಗೆ ಬಂದಿದ್ದಾಳೆ.
ಕಣ್ಣೂರಿನಲ್ಲಿ ನಿಗೂಢ ಜಾಗದಲ್ಲಿ ಉಳಿದುಕೊಂಡಿದ್ದ ಯುವತಿ ಮತ್ತು ಯುವಕ ಮಂಜೇಶ್ವರ ಠಾಣೆಗೆ ಬಂದು ಸರೆಂಡರ್ ಆಗಿದ್ದು ಅವರನ್ನು ಪೊಲೀಸರು ಕಾಸರಗೋಡಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೋರ್ಟಿನಲ್ಲಿ ಯುವತಿ ತಾನು ತನ್ನ ಹೆತ್ತವರ ಜೊತೆಗೆ ತೆರಳುವುದಾಗಿ ಹೇಳಿಕೆ ನೀಡಿದ್ದು ಅದರಂತೆ ಪೊಲೀಸರು ಆಕೆಯನ್ನು ಕಡಂಬಾರಿನಲ್ಲಿರುವ ಮನೆಗೆ ತಂದು ಬಿಟ್ಟಿದ್ದಾರೆ.

ವಾರದ ಹಿಂದೆ 22 ವರ್ಷದ ಯುವತಿಯನ್ನು ಮುಸ್ಲಿಂ ಯುವಕ ಅಪಹರಿಸಿದ ಬಗ್ಗೆ ವ್ಯಾಪಕ ವದಂತಿ ಕೇಳಿಬಂದಿತ್ತು. ರಾತ್ರಿ ಮಲಗಿದ್ದವಳು ದಿಢೀರ್ ಕಾಣೆಯಾಗಿದ್ದು ಹೆತ್ತವರನ್ನು ದಂಗುಬಡಿಸಿತ್ತು. ಇದರಿಂದ ತಾಯಿ ಆಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದೂ ಆಗಿತ್ತು. ಮನೆಯವರು ಬಳಿಕ ಮಂಜೇಶ್ವರ ಠಾಣೆಗೆ ತೆರಳಿ ನಾಪತ್ತೆ ಕೇಸು ದಾಖಲಿಸಿದ್ದರು. ಆದರೆ, ಅಲ್ತಾಫ್ ಎನ್ನುವ ಯುವಕ ಅಪಹರಿಸಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದರಿಂದ ಬಜರಂಗದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಆಕೆ ಮತ್ತು ಯುವಕನ ಫೋಟೊಗಳನ್ನು ವಾಟ್ಸಪ್ ಮತ್ತು ಫೇಸ್ಬುಕ್ ನಲ್ಲಿ ಹಾಕಿ ಎಲ್ಲಿಯಾದ್ರೂ ಕಂಡುಬಂದರೆ ಕೂಡಲೇ ಪೊಲೀಸರಿಗೆ ಅಥವಾ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಲು ಕೇಳಿಕೊಂಡಿದ್ದರು. ಈ ಫೋಟೊಗಳು ಭಾರೀ ವೈರಲ್ ಆಗಿತ್ತು. ಮಂಗಳೂರಿನ ಬಜರಂಗದಳ ಮತ್ತು ವಿಹಿಂಪ ಮುಖಂಡರು ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಕಾಸರಗೋಡಿಗೆ ತೆರಳಿ, ಎಸ್ಪಿಯನ್ನು ಭೇಟಿಯಾಗಿ ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿ ಯುವಕನ ಬಂಧನಕ್ಕೆ ಒತ್ತಾಯಿಸಿದ್ದರು.

ಇವೆಲ್ಲ ವಿಚಾರ ಮಾಧ್ಯಮಗಳಲ್ಲಿ ಬಂದು ಯುವತಿಯ ಅಪಹರಣ ವಿಚಾರ ವ್ಯಾಪಕ ಚರ್ಚೆಗೀಡಾಗುತ್ತಿದ್ದಂತೆ ಯುವತಿ ಅಲರ್ಟ್ ಆಗಿದ್ದಾಳೆ. ಅಲ್ಲೀ ವರೆಗೂ ಯುವಕನ ಜೊತೆಗೇ ತೆರಳುವುದಾಗಿ ಮಂಜೇಶ್ವರದ ಪೊಲೀಸರಲ್ಲಿ ಹೇಳಿದ್ದ ಯುವತಿ ಈಗ ಯು ಟರ್ನ್ ಹೊಡೆದಿದ್ದಾಳೆ. ಅಲ್ಲದೆ, ದಿಢೀರ್ ಆಗಿ ಮನೆಗೆ ಮರಳಿ, ಹುಡುಕಾಟ ನಡೆಸುತ್ತಿದ್ದ ಹಿಂದು ಸಂಘಟನೆಯ ಕಾರ್ಯಕರ್ತರನ್ನು ನಿಟ್ಟುಸಿರು ಬಿಡುವಂತೆ ಮಾಡಿದ್ದಾಳೆ. ಆದರೆ, ಠಾಣೆಯಲ್ಲಿ ಆರೋಪಿ ಯುವಕನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಕಿಡ್ನಾಪ್ ಪ್ರಕರಣ ದಾಖಲಿಸಬೇಕೆಂದು ಮಾತು ಕೇಳಿಬಂದಿದೆ. ಆದರೆ, ಹೆತ್ತವರೇ ಅಂಥ ದೂರು ನೀಡಬೇಕೆ ಹೊರತು ಇತರರು ನೀಡಲು ಸಾಧ್ಯವಾಗಲ್ಲ. ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಪೊಲೀಸರು ಆರೋಪಿ ಯುವಕನನ್ನು ಬಿಡುಗಡೆ ಮಾಡಿದ್ದಾರೆ.
Also Read: ಲವ್ ಜಿಹಾದ್ ಬಲಿಯಾದ್ಲು ಮತ್ತೊಬ್ಳು ಸುಂದರಿ ; ರಾತ್ರೋರಾತ್ರಿ ಅಪಹರಿಸಿದ ಮುಸ್ಲಿಂ ಯುವಕ !!
Manjeshwar Love Jihad case takes a u-turn. The girl who went missing returns back home after their post became viral on social media.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am