ಬ್ರೇಕಿಂಗ್ ನ್ಯೂಸ್
26-11-23 09:42 pm Mangaluru Correspondent ಕರಾವಳಿ
ಮಂಗಳೂರು, ನ.26: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆಗೈದ ಪ್ರಕರಣದಲ್ಲಿ ಪತ್ನಿ, ಮಕ್ಕಳನ್ನು ಕಳಕೊಂಡ ನೂರ್ ಮಹಮ್ಮದ್ ಮಂಗಳೂರಿನಲ್ಲಿ ಮಕ್ಕಳಾದ ಐನಾಝ್ ಮತ್ತು ಅಫ್ನಾನ್ ನೆಲೆಸಿದ್ದ ಬಾಡಿಗೆ ಮನೆಗೆ ಆಗಮಿಸಿದ್ದು, ಮನೆಯಲ್ಲಿ ಸಿಕ್ಕ ವಸ್ತುಗಳನ್ನು ನೋಡಿ ಕಣ್ಣೀರಿಟ್ಟಿದ್ದಾರೆ.
ಮಕ್ಕಳಿಬ್ಬರೂ ಒಂದೇ ಕೊಠಡಿಯಲ್ಲಿ ನೆಲೆಸಿದ್ದರು. ತಾವೇ ಅಡುಗೆಯನ್ನೂ ಮಾಡಿಕೊಳ್ಳುತ್ತಿದ್ದರು. ಆರಂಭದಲ್ಲಿ ಬಾಡಿಗೆ ಮನೆ ಹುಡುಕಿಕೊಡಲು ಪ್ರವೀಣ್ ಚೌಗುಲೆ ನೆರವಾಗಿದ್ದ. ಈ ಬಗ್ಗೆ ಮನೆ ಮಾಲೀಕರ ಜೊತೆಗೂ ಮಾತನಾಡಿದ್ದು, ಮನೆ ತೋರಿಸುವುದಕ್ಕೆ ಮಾತ್ರ ಪ್ರವೀಣ್ ಇಲ್ಲಿಗೆ ಬಂದಿದ್ದ ಎಂದು ಹೇಳಿದ್ದಾರೆ. ಈ ನಡುವೆ, ಪ್ರವೀಣ ಚೌಗುಲೆ ಹೊಸತಾಗಿ ಕಾರು ಖರೀದಿಸಿದ್ದು ತನ್ನಲ್ಲಿದ್ದ ಸ್ಕೂಟರನ್ನು ಐನಾಝ್ ಗೆ ನೀಡಿದ್ದ. ಇದನ್ನು ಐನಾಝ್ ಕೂಡ ತನಗೆ ಮಾಹಿತಿ ನೀಡಿದ್ದಳು. ಸ್ಕೂಟರಿಗೆ 28 ಸಾವಿರ ರೂಪಾಯಿ ನೀಡಿದ್ದೇನೆ ಎಂದು ತಿಳಿಸಿದ್ದಳು.
ಮನೆಯ ಹೊರಗಡೆ ಆ ಸ್ಕೂಟರ್ ಹಾಗೇ ಇದೆ. ಮನೆಯಲ್ಲಿ ಮಕ್ಕಳಿಬ್ಬರ ವಸ್ತುಗಳನ್ನು ನೋಡಿ ದುಃಖ ಉಕ್ಕಿ ಬಂದಿದೆ. ಹೆತ್ತವರು ಮುಸ್ಸಂಜೆಯಲ್ಲಿರುವಾಗ ಯೌವನಕ್ಕೆ ಬಂದ ಮಕ್ಕಳು ಈ ರೀತಿ ಕೊಲೆಯಾಗುತ್ತಾರೆಂದು ಯಾರೂ ಅಂದುಕೊಳ್ಳಲ್ಲ. ಮನೆಯಲ್ಲಿ ಐರನ್ ಬಾಕ್ಸ್, ಬಟ್ಟೆಗಳು, ಇದರ ನಡುವೆ ಖುರಾನ್ ಪುಸ್ತಕವೂ ಸಿಕ್ಕಿದೆ. ನನ್ನ ಹೆಣ್ಮಕ್ಕಳಿಬ್ಬರು ಇಸ್ಲಾಂ ಧರ್ಮದ ಚೌಕಟ್ಟಿನಲ್ಲಿ ಬದುಕುತ್ತಿದ್ದರು ಎಂದು ನೂರ್ ಮಹಮ್ಮದ್ ಹೇಳಿದ್ದಾರೆ.
ಉದ್ಯೋಗದಲ್ಲಿ ಸೀನಿಯರ್ ಆಗಿದ್ದರಿಂದ ಪ್ರವೀಣ್ ಚೌಗುಲೆಗೆ ಮಂಗಳೂರಿನಲ್ಲಿ ಪರಿಚಯ ಇದ್ದುದರಿಂದ ಬಾಡಿಗೆ ಮನೆ ಪಡೆಯುವಾಗ ಆತನ ನೆರವು ಕೇಳಿದ್ದಳು. ಈ ಬಗ್ಗೆ ತನ್ನಲ್ಲಿಯೂ ಐನಾಝ್ ಹೇಳಿಕೊಂಡಿದ್ದಳು. ಮನೆಯನ್ನೂ ನೋಡುವುದಕ್ಕೆ ನಾನು ಈ ಹಿಂದೆ ಬಂದಿದ್ದೆ. ಮನೆಯಲ್ಲಿ ಅಡುಗೆ ಇನ್ನಿತರ ಎಲ್ಲದಕ್ಕೂ ವ್ಯವಸ್ಥೆ ಮಾಡಿಕೊಂಡಿದ್ದರು. ಇಬ್ಬರೂ ಸೇರಿಕೊಂಡು ಮನೆ ನಡೆಸುತ್ತಿದ್ದರು. ಮನೆಯಲ್ಲಿ ಬುರ್ಖಾ, ಇನ್ನಿತರ ಎಲ್ಲ ಬಟ್ಟೆ ಬರೆಗಳೂ ಇವೆ ಎಂದು ಎಲ್ಲವನ್ನೂ ನೋಡುತ್ತಲೇ ಕಣ್ಣೀರು ಹಾಕಿದ್ದಾರೆ. ಆರೋಪಿ ಪ್ರವೀಣ್ ಚೌಗುಲೆಯನ್ನು ಬಂಧಿಸಿ ಜೈಲಿಗಟ್ಟಿದ ಬಳಿಕ ಮೊದಲ ಬಾರಿಗೆ ನೂರ್ ಮಹಮ್ಮದ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
Udupi Murder, father of Ainaz visits house in Mangalore, cries looking at her items. My daughter had taken the accused's help as she found difficulty in finding a room to stay. Relying on him as her senior, she had asked for his help because usually Muslim girls don't get the rented rooms so easily.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
18-06-25 09:54 pm
HK News Desk
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
NHAI, Kasaragod: ಕಾಸರಗೋಡು– ಕಣ್ಣೂರು ಮಧ್ಯೆ ಹೆದ್...
18-06-25 04:09 pm
ಕೊಲೆಗಡುಕ, ಬ್ಲಡಿ ಬಾಸ್ಟರ್ಡ್.. ಪಾಕ್ ಸೇನಾ ಮುಖ್ಯಸ್...
18-06-25 01:29 pm
ಇಸ್ರೇಲ್ ದಾಳಿಗೆ ಕಂಗೆಟ್ಟ ಟೆಹ್ರಾನ್ ; ಯುದ್ಧ ನಿಲ್ಲ...
17-06-25 11:02 pm
18-06-25 10:57 pm
Udupi Correspondent
ಸಿಂಗಲ್ ಸೈಟ್ ನಕ್ಷೆ, ಪ್ರಾಪರ್ಟಿ ಕಾರ್ಡ್ ಮಾಡಿಸಲು 4...
18-06-25 10:46 pm
Puttur News, Truck: ಸರಕು ಬಾಡಿಗೆ ಮಾಡಲು ಒಯ್ದಿದ್...
18-06-25 06:38 pm
NHRC, Dakshina Kannada, MLA Bharath Shetty: ಹ...
18-06-25 02:10 pm
Mangalore Accident, Jeppinamogaru, Aman Rao,...
18-06-25 10:24 am
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm