ಬ್ರೇಕಿಂಗ್ ನ್ಯೂಸ್
13-11-23 06:53 pm Mangalore Correspondent ಕರಾವಳಿ
ಉಡುಪಿ, ನ.13: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಒಮ್ಮಿಂದೊಮ್ಮೆಲೇ ಬೆಂಕಿ ಹತ್ತಿಕೊಂಡಿದ್ದು, ಹತ್ತಕ್ಕೂ ಹೆಚ್ಚು ಮೀನುಗಾರಿಕಾ ಬೋಟುಗಳು ಬೆಂಕಿಗಾಹುತಿಯಾಗಿವೆ. ಧಗ ಧಗನೆ ಉರಿದ ಬೆಂಕಿಯ ಕೆನ್ನಾಲಿಗೆಗೆ ಬಾನಲ್ಲಿ ದಟ್ಟ ಹೊಗೆ, ಉರಿ ಜ್ವಾಲೆಯನ್ನು ಸೃಷ್ಟಿಸಿತ್ತು.
ಬೈಂದೂರು ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಇಂದು ಬೆಳಗ್ಗೆ ಬೆಂಕಿಯದ್ದೇ ಸದ್ದು. ಒಂದೆರಡಲ್ಲ ಹತ್ತಕ್ಕೂ ಹೆಚ್ಚು ಬೋಟುಗಳಿಗೆ ಹಠಾತ್ ಬೆಂಕಿ ಹತ್ತಿಕೊಂಡಿದ್ದು, ಸಮುದ್ರ ಬದಿಯಲ್ಲಿ ಗಾಳಿಯೊಂದಿಗೆ ಬೆಂಕಿ ಸರಸವಾಡಿದಂತಿತ್ತು. ಇಷ್ಟಕ್ಕೂ ಬೆಂಕಿ ಬೀಳೋದಕ್ಕೆ ಅಲ್ಲಿಯೇ ದೀಪಾವಳಿ ಪಟಾಕಿ ಸಿಡಿಸುತ್ತಿದ್ದ ಬಿಹಾರ ಮೂಲದ ಕಾರ್ಮಿಕರು ಕಾರಣವಂತೆ. ಕಾರ್ಮಿಕರು ಹಾರಿಸಿದ್ದ ಪಟಾಕಿಯ ಕಿಡಿ ನೇರವಾಗಿ ಬೋಟು ಮೇಲಕ್ಕೆ ಬಿದ್ದಿದೆ. ಬೋಟನ್ನು ತೀರಕ್ಕೆ ತಂದು ಮೇಲ್ಗಡೆ ತೆಂಗಿನ ಗರಿಯನ್ನು ಮುಚ್ಚಲಾಗಿತ್ತು. ತೆಂಗಿನ ಗರಿಗಳು ಬಿಸಿಲಿಗೆ ಒಣಗಿದ್ದರಿಂದ ಪಟಾಕಿಯ ಬಾಣದ ಬಿರುಸಿಗೆ ಬೆಂಕಿಯ ಜ್ವಾಲೆ ಏಳುವಂತೆ ಮಾಡಿತ್ತು. ಗಾಳಿಯಿಂದಾಗಿ ಬೆಂಕಿ ಅಕ್ಕಪಕ್ಕದಲ್ಲಿ ಹರಡಿದ್ದು ಅಲ್ಲಿ ನಿಲ್ಲಿಸಿದ್ದ ಹನ್ನೊಂದು ಬೋಟುಗಳಿಗೂ ಹರಡಿದೆ. ಧಗ ಧಗನೆ ಹೊತ್ತಿಕೊಂಡಿದ್ದು, ಅಲ್ಲಿಯೇ ನಿಲ್ಲಿಸಿದ್ದ ಎರಡು ಬೈಕ್ ಕೂಡ ಹೊತ್ತಿ ಉರಿದು ಹೋಗಿದೆ.
ದೀಪಾವಳಿ ನಿಮಿತ್ತ ಕಾರ್ಮಿಕರು ರಜೆಯಲ್ಲಿದ್ದರೆ, ಮೀನುಗಾರರು ಬೋಟನ್ನು ನಿಲ್ಲಿಸಿ ತಮ್ಮ ಮನೆಗೆ ತೆರಳಿದ್ದರು. ಬೆಂಕಿ ಬಿದ್ದ ಕೂಡಲೇ ಅಗ್ನಿಶಾಮಕ ದಳ, ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸುದೀರ್ಘ ನಾಲ್ಕು ಗಂಟೆಗಳ ಬಳಿಕ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿ ಅನಾಹುತದಿಂದ ಸುಮಾರು 5 ಕೋಟಿಗೂ ಹೆಚ್ಚು ನಷ್ಟ ಅಂದಾಜಿಸಲಾಗಿದೆ.
Kundapur Eight boats go up in flames after fire breaks out in harbour. Eight boats that were anchored on the river bank, were gutted in a fire mishap on Monday November 13 at Manganese Road of Gangolli. The loss is estimated to run into crore of rupees.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
18-06-25 04:09 pm
HK News Desk
ಕೊಲೆಗಡುಕ, ಬ್ಲಡಿ ಬಾಸ್ಟರ್ಡ್.. ಪಾಕ್ ಸೇನಾ ಮುಖ್ಯಸ್...
18-06-25 01:29 pm
ಇಸ್ರೇಲ್ ದಾಳಿಗೆ ಕಂಗೆಟ್ಟ ಟೆಹ್ರಾನ್ ; ಯುದ್ಧ ನಿಲ್ಲ...
17-06-25 11:02 pm
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
18-06-25 02:10 pm
Mangalore Correspondent
Mangalore Accident, Jeppinamogaru, Aman Rao,...
18-06-25 10:24 am
Mangalore DC Mullai Muhilan Transferred, Dars...
17-06-25 09:57 pm
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm