ಬ್ರೇಕಿಂಗ್ ನ್ಯೂಸ್
11-11-23 11:12 pm Mangalore Correspondent ಕರಾವಳಿ
ಮಂಗಳೂರು, ನ.11: ಸಾರ್ವಜನಿಕ ಕಟ್ಟಡ, ಬಡಾವಣೆ ಇರುವ ನಗರ ಪ್ರದೇಶಗಳಲ್ಲಿ ಅಥವಾ ರಸ್ತೆ ಬದಿಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಬಾರದು ಎಂಬ ಹೈಕೋರ್ಟ್ ಸೂಚನೆಯಂತೆ ಮಂಗಳೂರಿನಲ್ಲಿ ಪಟಾಕಿ ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಎಲ್ಲೆಂದರಲ್ಲಿ ರಸ್ತೆ ಬದಿ ಪಟಾಕಿ ದಾಸ್ತಾನು ಇಡಬಾರದು ಅನ್ನುವ ನೆಲೆಯಲ್ಲಿ ಮಂಗಳೂರು ನಗರದ ನೆಹರು ಮೈದಾನ ಸೇರಿದಂತೆ ನಾಲ್ಕು ಕಡೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಲಾಗಿದೆ.
ಜಿಲ್ಲಾಧಿಕಾರಿ ಸೂಚನೆಯಂತೆ, ಮಹಾನಗರ ಪಾಲಿಕೆಯಿಂದಲೇ ಬಿಡ್ ಕರೆದು ಸ್ಟಾಲ್ ಗಳನ್ನು ಹರಾಜಿನಲ್ಲಿ ಮಾರಾಟಗಾರರಿಗೆ ನೀಡಲಾಗಿದೆ. ಅದರಂತೆ, ನೆಹರು ಮೈದಾನ, ಬೋಂದೆಲ್ ಮೈದಾನ, ಪಚ್ಚನಾಡಿ ಪ್ರದೇಶ ಮತ್ತು ಬೈಕಂಪಾಡಿ ಎಪಿಎಂಸಿ ಕಟ್ಟಡದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ಕೊಡಲಾಗಿದೆ. ಎರಡು ದಿನದ ಹಿಂದೆ ಮಹಾನಗರ ಪಾಲಿಕೆಯಿಂದಲೇ ಈ ರೀತಿಯ ಹರಾಜು ಹಾಕಿ, ಸ್ಟಾಲ್ ಹಂಚಿಕೆ ಮಾಡಿದ್ದರೂ, ನಗರದ ಪಿವಿಎಸ್ ವೃತ್ತದ ಬಳಿ ಪಟಾಕಿ ಮಾರಾಟದ ಅಂಗಡಿ ತೆರೆದುಕೊಂಡಿದೆ.

ವೃತ್ತದ ಬಳಿಯಲ್ಲೇ ರಸ್ತೆ ಬದಿಯಲ್ಲಿ ಪಟಾಕಿ ದಾಸ್ತಾನಿರಿಸಿ ಮಾರಾಟ ಮಾಡಲಾಗುತ್ತಿದ್ದು, ಶನಿವಾರ ಸಂಜೆ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಮುಗಿಬಿದ್ದಿದ್ದರು. ಅತ್ತ ನೆಹರು ಮೈದಾನ ಇನ್ನಿತರ ಕಡೆಗಳಲ್ಲಿ ಇನ್ನೂ ಸ್ಟಾಲ್ ಹಾಕಿಲ್ಲ. ಶನಿವಾರ ಸಂಜೆಯಷ್ಟೇ ಸ್ಟಾಲ್ ವಿತರಣೆ, ಮಾರ್ಕಿಂಗ್ ಮಾಡಿಕೊಟ್ಟಿದ್ದರಿಂದ ಅಲ್ಲಿ ಮಾರಾಟಗಾರರು ಸ್ಟಾಲ್ ಹಾಕಲು ವಿಳಂಬ ಆಗಿತ್ತು. ರಾತ್ರಿ ವೇಳೆಯೂ ಸ್ಟಾಲ್ ಹಾಕುವ ಕೆಲಸದಲ್ಲಿ ನಿರತರಾಗಿದ್ದರು. ಹೀಗಾಗಿ ಇತರ ಯಾವುದೇ ಕಡೆ ಪಟಾಕಿ ಲಭ್ಯ ಇರಲಿಲ್ಲ. ಇದೇ ವೇಳೆ, ಬಂದರಿನ ಮಾಯಾ ಟ್ರೇಡರ್ಸ್ ಮತ್ತು ಪಿವಿಎಸ್ ವೃತ್ತದಲ್ಲಿ ಪ್ರವೀಣ್ ಶೇಟ್ ಕ್ರಾಕರ್ಸ್ ಶಾಪ್ ನವರು ಮಾತ್ರ ಪಟಾಕಿ ಅಂಗಡಿ ತೆರೆದಿದ್ದರು. ಪಿವಿಎಸ್ ವೃತ್ತದಲ್ಲಿ ತಾತ್ಕಾಲಿಕ ಶೆಡ್ ನಲ್ಲಿ ಪಟಾಕಿ ಮಾರುತ್ತಿದ್ದರೂ, ಅಧಿಕಾರಿಗಳು ಅದಕ್ಕೆ ಮಾತ್ರ ಅವಕಾಶ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ.
ನೆಹರು ಮೈದಾನದಲ್ಲಿ ಸ್ಟಾಲ್ ಹಾಕುತ್ತಿದ್ದ ಮಾರಾಟಗಾರರು ಈ ಬಗ್ಗೆ ಆಕ್ಷೇಪ ಎತ್ತಿದ್ದು, ನಾವು ಮಾತ್ರ ಮೈದಾನದಲ್ಲಿ ಮಾರಾಟ ಮಾಡಬೇಕು. ಅವರಿಗೆ ಮಾತ್ರ ರಸ್ತೆ ಬದಿ ಅವಕಾಶ ಕೊಟ್ಟಿದ್ದಾರೆ. ಬಂದರು ಮತ್ತು ಪಿವಿಎಸ್ ವೃತ್ತ ಜನನಿಬಿಡ ಸಾರ್ವಜನಿಕ ಪ್ರದೇಶ ಅಲ್ಲವೇ.. ಇದರ ಹಿಂದೆ ಯಾರಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
Partiality in cracker stall permission by MCC in Mangalore.
01-04-26 12:28 pm
HK News Staffer
ಕೇರಳದಲ್ಲಿ ಮಹಿಳೆಗೆ ಸಿಎಂ ಸ್ಥಾನ, ಉಚಿತ ಸಾರಿಗೆ ಪ್ರ...
31-03-26 10:13 am
ತಮಿಳುನಾಡಿನಲ್ಲಿ ಬಿಜೆಪಿ ಸೀಟು ಹಂಚಿಕೆಯಲ್ಲಿ ಲೋಪ ;...
29-03-26 10:19 am
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
01-04-26 12:46 pm
HK News Staffer
ಯುದ್ಧ ವಿರಾಮ ಉಲ್ಲಂಘಿಸಿ ಇರಾನ್ ಅಣು ಸ್ಥಾವರಕ್ಕೆ ಬಾ...
31-03-26 11:00 pm
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
ಗಲ್ಫ್ ಯುದ್ಧ ಎಫೆಕ್ಟ್ ; ಡಾಲರ್ ಮುಂದೆ ರುಪಾಯಿ ಮಹಾಪ...
30-03-26 10:31 pm
31-03-26 10:06 pm
HK News Desk
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಿಂದ ಹೊರಬಿದ್...
31-03-26 03:01 pm
ಮಂಗಳೂರು ಬಂದರಿಗೆ ಬರಲಿದೆ ಮತ್ತೆರಡು ಎಲ್ಪಿಜಿ ಹೊತ್ತ...
30-03-26 11:13 pm
31-03-26 11:11 am
HK News Staffer
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm
ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸ...
29-03-26 10:22 pm
ಅರ್ಕುಳ ಬಳಿ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಗೆ ಹಿ...
29-03-26 07:49 pm