ಬ್ರೇಕಿಂಗ್ ನ್ಯೂಸ್
03-11-23 01:32 pm Mangalore Correspondent ಕರಾವಳಿ
ಉಡುಪಿ, ನ.3: ಸತತ ಪರಿಶ್ರಮ, ಛಲಗಾರಿಕೆ ಇದ್ದರೆ ಯಾವುದೇ ಸಾಧನೆಯನ್ನೂ ಮಾಡಬಹುದು ಎಂಬುದನ್ನು ಉಡುಪಿ ಮೂಲದ ನಿವೇದಿತಾ ಶೆಟ್ಟಿ ತೋರಿಸಿಕೊಟ್ಟಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಕೆಲಸವನ್ನೇ ತೊರೆದು ಐಎಎಸ್ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ.
ಯುಪಿಎಸ್ಸಿ 2022ರ ಸಾಲಿನ ಪರೀಕ್ಷೆಯ ಫಲಿತಾಂಶ ಬಂದಿದ್ದು ಪರೀಕ್ಷೆ ಬರೆದ 11 ಲಕ್ಷ ಅಭ್ಯರ್ಥಿಗಳ ಪೈಕಿ 1022 ಮಂದಿ ಆಯ್ಕೆಗೊಂಡಿದ್ದಾರೆ. ಮೂಲತಃ ಉಡುಪಿ ನಗರದ ನಿವಾಸಿಯಾಗಿರುವ ನಿವೇದಿತಾ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದು ಸದಾನಂದ ಶೆಟ್ಟಿ ಮತ್ತು ಸಮಿತಾ ಶೆಟ್ಟಿ ದಂಪತಿಯ ಪುತ್ರಿ. ಇವರ ಪತಿ ದಿವಾಕರ ಶೆಟ್ಟಿ ಒಮಾನ್ ಸರಕಾರಿ ಟೆಕ್ನಿಕಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದು ಮೂರು ವರ್ಷದ ಮಗುವಿನ ಜೊತೆಯಲ್ಲೇ ನಿವೇದಿತಾ ಹಗಲಿರುಳು ಓದುತ್ತಲೇ ಯಾವುದೇ ಕೋಚಿಂಗ್ ಪಡೆಯದೇ ಸಾಧನೆ ಮಾಡಿದ್ದಾರೆ.
ನಿವೇದಿತಾ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು ತಮ್ಮ ಪ್ರೈಮರಿ ವಿದ್ಯಾಭ್ಯಾಸವನ್ನು ಉಡುಪಿಯ ಮಿಲಾಗ್ರಿಸ್ ಶಾಲೆಯಲ್ಲಿ ಮಾಡಿದ್ದರು. ಬಳಿಕ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮುಗಿಸಿದ್ದರು. ಕೊನೆಯ ವರ್ಷದ ಕಲಿಕೆಯಲ್ಲಿರುವಾಗಲೇ ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಒಳ್ಳೆಯ ನೌಕರಿ ಪಡೆದಿದ್ದರು. ನಾಗರಿಕ ಸೇವಾ ಪರೀಕ್ಷೆ ಬರೆಯಬೇಕೆಂಬ ಹಂಬಲದಲ್ಲಿ ಉದ್ಯೋಗ ಮಾಡುತ್ತಲೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಬಳಿಕ ತಮ್ಮ ಉದ್ಯೋಗವನ್ನೇ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಯುಪಿಎಸ್ಸಿ ಪರೀಕ್ಷೆ ತಯಾರಿ ನಡೆಸಿದ್ದರು. ಸತತ ಪ್ರಯತ್ನದಿಂದ ಯಾವುದೇ ಕೋಚಿಂಗ್ ಪಡೆಯದೆ 2022ರ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.
The Union Public Service Commission commonly abbreviated as UPSC released the consolidated list of civil services examinations of 2022. Though lacs of candidates write this examination, considered the toughest in the country, only handful clear the same.
25-04-25 07:32 pm
Bangalore Correspondent
ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ, ಕಾಶ್...
25-04-25 07:30 pm
ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸ...
25-04-25 06:30 pm
Pahalgam Attack, Shivamogga, Manjunath: ಉಗ್ರರ...
24-04-25 10:13 pm
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
26-04-25 08:21 pm
HK News Desk
Iran Blast: ಇರಾನ್ ಬಂದರಿನಲ್ಲಿ ಭಯಾನಕ ಸ್ಫೋಟ ; 4...
26-04-25 07:46 pm
Terror attack, Pak News: ಭಯೋತ್ಪಾದಕ ಸಂಘಟನೆಗಳಿಗ...
26-04-25 04:36 pm
Indus Water To Pak: ಪಹಲ್ಗಾಮ್ ಉಗ್ರರ ದಾಳಿ ; ಪಾಕ...
26-04-25 02:00 pm
Gokarna Beach, Drowning, Mbbs: ಗೋಕರ್ಣ ಸಮುದ್ರದ...
25-04-25 06:37 pm
26-04-25 08:03 pm
Mangalore Correspondent
NIA, PFI, DGP OM Prakash, Anupama Shenoy, Man...
26-04-25 07:11 pm
KMF Mangalore, Elections 2025: ಕೆಎಂಎಫ್ ಚುನಾವಣ...
25-04-25 10:49 pm
Bhatkal News, Pakistani Origin Mangalore: ಭಟ್...
25-04-25 07:43 pm
Mangalore News, Facebook post, Pahalgam Terro...
24-04-25 11:08 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm