ಬ್ರೇಕಿಂಗ್ ನ್ಯೂಸ್
31-10-23 09:41 pm Mangaluru Correspondent ಕರಾವಳಿ
ಉಳ್ಳಾಲ, ಅ.31: ರಾಜ್ಯದ 68 ವೈಯಕ್ತಿಕ ಸಾಧಕರು, 10 ಸಂಘ ಸಂಸ್ಥೆಗಳಿಗೆ ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಕ್ರಿಕೆಟ್ ಆಟದಲ್ಲಿ ಉತ್ತುಂಗಕ್ಕೇರಿ ಬಂದ ಪ್ರಶಸ್ತಿ ಮೊತ್ತದಲ್ಲೇ ಜನಸೇವೆಯಲ್ಲಿ ತೊಡಗಿಸಿದ್ದ ಉಳ್ಳಾಲದ ಮಾರುತಿ ಜನಸೇವಾ ಸಂಘಕ್ಕೆ ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಕಳೆದ ಮೂವತ್ತು ವರುಷಗಳ ಹಿಂದೆ ಉಳ್ಳಾಲದ ಮೊಗವೀರ ಪಟ್ಣದಲ್ಲಿ ಹುಟ್ಟಿಕೊಂಡ ಮಾರುತಿ ಕ್ರಿಕೆಟರ್ಸ್ ತಂಡವು ಕ್ರಿಕೆಟ್ ಆಟದಲ್ಲಿ ಉತ್ತಮ ಪ್ರದರ್ಶನಗಳನ್ನ ನೀಡಿ ಸಿಕ್ಕಿದ ಪ್ರಶಸ್ತಿಯ ಮೊತ್ತವನ್ನ ಸಮಾಜ ಸೇವೆಗೆ ವಿನಿಯೋಗಿಸುತ್ತ ಮಾರುತಿ ಜನಸೇವಾ ಸಂಘವೆಂದು ಹೆಸರುವಾಸಿಯಾಗಿದೆ.
ವಿ.ವಿ ಮಟ್ಟದ ಖ್ಯಾತ ಕ್ರಿಕೆಟ್ ಆಟಗಾರರಾದ ಸುಧೀರ್ ವಿ. ಅಮೀನ್, ಅಶ್ವಥ್ ಪುತ್ರನ್, ಉದಯ ಸಾಲ್ಯಾನ್, ದಿನೇಶ್ ಕರ್ಕೇರ, ಅನಿಲ್ ಚರಣ್ ರಂತವರಿಗೆ ಇದೇ ತಂಡ ವೇದಿಕೆ ಆಗಿತ್ತು.
ಸಂಘದ ಬೆಳ್ಳಿಹಬ್ಬದ ನೆನಪಿಗಾಗಿ ಉಳ್ಳಾಲ ಮೊಗವೀರ ಸಂಘದ ಹಿರಿಯರು ಕಟ್ಟಿಸಿದ್ದ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಗೆ ಅಂದಾಜು 1.5 ಕೋಟಿ ರೂ. ವೆಚ್ಚದಲ್ಲಿ ಒಂದು ಮಹಡಿಯ ಸುಸಜ್ಜಿತ ಕಟ್ಟಡವನ್ನ ಮರು ನಿರ್ಮಿಸಿ ಕೊಟ್ಟು ಅದರ ಉದ್ಘಾಟನಾ ಸಮಾರಂಭದ ಪ್ರಯುಕ್ತ ಉಳ್ಳಾಲದಲ್ಲಿ ಪ್ರಪ್ರಥಮವಾಗಿ ಎರಡು ದಿವಸಗಳ ಬೀಚ್ ಉತ್ಸವವನ್ನು ನಡೆಸಿ ಸರ್ವ ಧರ್ಮೀಯರಿಂದ ಶಹಬಾಷ್ ಗಳಿಸಿದ ಕೀರ್ತಿ ಮಾರುತಿ ಜನಸೇವಾ ಸಂಘಕ್ಕೆ ಸಲ್ಲುತ್ತದೆ.
ಕಡಲ್ಕೊರೆತಕ್ಕೆ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸಂಘದ ವತಿಯಿಂದ ಐದು ಮನೆ ನಿರ್ಮಿಸಿ ಕೊಡಲಾಗಿದೆ. ಕನಿಷ್ಟ ಎಂದರೂ ವರ್ಷಕ್ಕೆ ಐದು ಲಕ್ಷ ರೂ. ವ್ಯಯಿಸಿ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ, ಸ್ಥಳೀಯ ದೇವಸ್ಥಾನದ ಪ್ರಧಾನ ಅರ್ಚಕರು, ಗುರಿಕಾರ ವೃಂದ ಹಾಗೂ ದೈವ ನರ್ತಕರಿಗೆ ಸಹಾಯಧನ ವಿತರಣೆ,ಕೊರೊನ ಲಾಕ್ ಡೌನ್ ಸಂದರ್ಭ 6ಲಕ್ಷ ರೂ. ವೆಚ್ಚ ಭರಿಸಿ ಆಹಾರ ಕಿಟ್ ಗಳನ್ನ ಸಂಘದ ವತಿಯಿಂದ ವಿತರಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ಮೂವತ್ತು ಕುಟುಂಬಕ್ಕೆ ಸಾಮೂಹಿಕ ವಿವಾಹ ಮಾಡುವ ಭವಿಷ್ಯದ ಯೋಜನೆಯನ್ನ ಸಂಘ ಇಟ್ಟುಕೊಂಡಿದೆ. ಮಾರುತಿ ಜನ ಸೇವಾ ಸಂಘವು ಕೆಲ ವರುಷಗಳ ಹಿಂದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನ ಗಳಿಸಿದ್ದು ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.
Ullal Maruthi Jana Seva Sangha to get karnataka rajyotsava award 2023 in Mangalore by Cricket charity.
25-04-25 07:32 pm
Bangalore Correspondent
ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ, ಕಾಶ್...
25-04-25 07:30 pm
ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸ...
25-04-25 06:30 pm
Pahalgam Attack, Shivamogga, Manjunath: ಉಗ್ರರ...
24-04-25 10:13 pm
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
26-04-25 08:21 pm
HK News Desk
Iran Blast: ಇರಾನ್ ಬಂದರಿನಲ್ಲಿ ಭಯಾನಕ ಸ್ಫೋಟ ; 4...
26-04-25 07:46 pm
Terror attack, Pak News: ಭಯೋತ್ಪಾದಕ ಸಂಘಟನೆಗಳಿಗ...
26-04-25 04:36 pm
Indus Water To Pak: ಪಹಲ್ಗಾಮ್ ಉಗ್ರರ ದಾಳಿ ; ಪಾಕ...
26-04-25 02:00 pm
Gokarna Beach, Drowning, Mbbs: ಗೋಕರ್ಣ ಸಮುದ್ರದ...
25-04-25 06:37 pm
26-04-25 08:03 pm
Mangalore Correspondent
NIA, PFI, DGP OM Prakash, Anupama Shenoy, Man...
26-04-25 07:11 pm
KMF Mangalore, Elections 2025: ಕೆಎಂಎಫ್ ಚುನಾವಣ...
25-04-25 10:49 pm
Bhatkal News, Pakistani Origin Mangalore: ಭಟ್...
25-04-25 07:43 pm
Mangalore News, Facebook post, Pahalgam Terro...
24-04-25 11:08 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm