ಬ್ರೇಕಿಂಗ್ ನ್ಯೂಸ್
12-11-20 06:34 pm Mangaluru Correspondent ಕರಾವಳಿ
ಮಂಗಳೂರು, ನವೆಂಬರ್ 12: ಚಿಂದಿಯಾಗಿ ಕಸದ ತೊಟ್ಟಿ ಸೇರುವ ಪ್ಲಾಸ್ಟಿಕ್ ಗಳನ್ನೇ ಬಳಸ್ಕೊಂಡು ಸುಂದರ ಮನೆ ಕಟ್ಟಬಹುದು ಎನ್ನುವುದನ್ನು ಊಹಿಸಲು ಸಾಧ್ಯವೇ..? ಆದರೆ, ಇದು ಬರೀಯ ಊಹನೆ ಮಾತ್ರ ಅಲ್ಲ. ವಾಸ್ತವದಲ್ಲಿ ಸಾಧ್ಯ ಎನ್ನುವುದನ್ನು ಇಲ್ಲೊಂದು ಪರಿಸರ ಪ್ರೀತಿಯ ಸಂಘಟನೆ ತೋರಿಸಿಕೊಟ್ಟಿದೆ. ಬಳಸಿ ಎಸೆಯುವ ಪಾಲಿಥೀನ್ ಬ್ಯಾಗ್, ಗುಟ್ಕಾ ಪ್ಯಾಕೆಟ್, ಚಾಕ್ಲೆಟ್ ರಾಪರ್ಸ್ ಗಳನ್ನು ಬಳಸಿ ಮನೆ ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ.
ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಷನ್ ಎನ್ನುವ ಸಂಘಟನೆ, ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಪ್ಲಾಸ್ಟಿಕ್ ನಿರ್ಮಿತ ವಾಸದ ಮನೆಯನ್ನು ಮಂಗಳೂರಿನಲ್ಲಿ ರೆಡಿ ಮಾಡಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕ ವೃತ್ತಿಯಲ್ಲಿದ್ದು ನಿವೃತ್ತರಾದ ಕಮಲಾ ಎಂಬವರಿಗೆ ಪಚ್ಚನಾಡಿ ಎಂಬಲ್ಲಿ ಈ ಪ್ಲಾಸ್ಟಿಕ್ ಮನೆ ನಿರ್ಮಿಸಿಕೊಟ್ಟಿದ್ದು ಜನ ಹುಬ್ಬೇರುವಂತೆ ಮಾಡಿದ್ದಾರೆ.





ಮರು ಬಳಕೆ ಸಾಧ್ಯವಾಗದ ಚಿಂದಿ ಪ್ಲಾಸ್ಟಿಕ್ಗಳನ್ನು ಬಳಸಿ, ಪ್ಲಾಸ್ಟಿಕ್ ಶೀಟ್ ಗಳನ್ನು ರಚಿಸಲಾಗಿದೆ. ತಳದಲ್ಲಿ ಕಾಂಕ್ರೀಟ್ ಅಡಿಪಾಯ, ಗೋಡೆ ಮತ್ತು ಹಂಚಿಗೆ ಅದೇ ಪ್ಲಾಸ್ಟಿಕ್ ನಿರ್ಮಿತ ತಗಟು ಶೀಟ್. 350 ಚದರ ಅಡಿ ವಿಸ್ತೀರ್ಣದ ಈ ಮನೆಗೆ 1500 ಕಿಲೋ ಪ್ಲಾಸ್ಟಿಕ್ ಬಳಕೆಯಾಗಿದೆ. ಈ ರೀತಿಯ ಮನೆ ಕರ್ನಾಟಕದಲ್ಲಿ ಪ್ರಥಮವಾಗಿದ್ದು, ಗಾಳಿ, ಮಳೆಯ ಮೈಯೊಡ್ಡಿ 30 ವರ್ಷ ಬಾಳಿಕೆ ಬರುತ್ತದೆ ಎನ್ನುತ್ತಾರೆ, ಯೋಜನಾ ನಿರ್ದೇಶಕಿ ಶಿಫ್ರಾ ಜೇಕಬ್ಸ್.
ನಿರ್ಮಾಣ ಕಾರ್ಯದಲ್ಲಿ ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಸಂಘಟನೆ ಜೊತೆ ಹೈದರಾಬಾದ್ ಮೂಲದ ಬಾಂಬೂ ಹೌಸ್ ಎನ್ನುವ ಸಂಸ್ಥೆ ಕೈಜೋಡಿಸಿದೆ. ಗುಜರಿ ಅಂಗಡಿ, ತ್ಯಾಜ್ಯ ರಾಶಿಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕನ್ನು ಗುಜರಾತ್ಗೆ ಕಳುಹಿಸಿ ಅಲ್ಲಿನ ಕಾರ್ಖಾನೆಯಲ್ಲಿ ಪ್ಲಾಸ್ಟಿಕ್ ಶೀಟ್ ಗಳಾಗಿ ಪರಿವರ್ತಿಸಲಾಗಿದೆ. ಒಂದಿಷ್ಟು ರಾಸಾಯನಿಕ ಬಳಸಿ, ಒಂದಿಂಚು ದಪ್ಪದ ಶೀಟ್ ಗಳನ್ನು ರಚಿಸಲಾಗಿದೆ. ಈ ಮನೆಗೆ ಸುಮಾರು 4.5 ಲಕ್ಷ ರೂ. ತಗಲಿದ್ದು ಏಕಕಾಲದಲ್ಲಿ ಹಲವು ಮನೆಗಳನ್ನು ನಿರ್ಮಿಸುವುದಿದ್ದರೆ ವೆಚ್ಚ ಕಡಿಮೆ ಆಗಬಹುದು. ಟೆಂಟ್, ಜೋಪಡಿಯಲ್ಲಿ ವಾಸಿಸುವರಿಗೆ ಇದು ಅತ್ಯುತ್ತಮ ಪರ್ಯಾಯ ಎಂದು ಹೇಳುತ್ತಾರೆ, ಯೋಜನಾ ಸಂಯೋಜಕಿ ಜಯಂತಿ.
ಹಿಂದೆ ಜೋಪಡಿಯಲ್ಲಿದ್ದ ಪೌರ ಕಾರ್ಮಿಕ ಮಹಿಳೆ ಕಮಲಾ ಅವರ ಜೋಪಡಿ ಮುರಿದು ಹೋಗಿತ್ತು. ಇದನ್ನು ಕಂಡ ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಸಂಘಟನೆ, ಉಚಿತವಾಗಿ ಮನೆ ನಿರ್ಮಿಸಿಕೊಡಲು ಮುಂದಾಗಿತ್ತು. ಒಟ್ಟಿನಲ್ಲಿ ಕಡಿಮೆ ಖರ್ಚು ಮತ್ತು ಪ್ಲಾಸ್ಟಿಕ್ ಮರು ಬಳಕೆಯಿಂದ ಮನೆ ನಿರ್ಮಿಸಿಕೊಳ್ಳಬಹುದು ಎಂಬುದನ್ನು ಈ ಸಂಘಟನೆ ತೋರಿಸಿಕೊಟ್ಟಿದೆ. ಈ ಚೊಕ್ಕಟ ಮನೆಯನ್ನು ನೋಡಿ, ಪೊಲೀಸ್ ಚೆಕ್ ಪೋಸ್ಟ್, ಸಾರ್ವಜನಿಕ ಶೌಚಾಲಯ, ಶಾಲೆ ನಿರ್ಮಾಣಕ್ಕೆ ಹಲವರು ಆಸಕ್ತಿ ತೋರಿದ್ದಾರೆ.
VIDEO:
The Plastics For Change (PFC) India Foundation has built a plastic house in Pachanady, Mangalore which is working to develop and improve the quality of life of informal waste-collectors in Karnataka.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am