ಬ್ರೇಕಿಂಗ್ ನ್ಯೂಸ್
17-10-23 11:07 pm Mangalore Correspondent ಕರಾವಳಿ
ಮಂಗಳೂರು, ಅ.17: ನಗರದ ಫಳ್ನೀರ್ ನಲ್ಲಿ ಎಂಎಫ್ ಸಿ ಆಹಾರ ಮಳಿಗೆಯ ಮೇಲೆ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದು, 24 ಗಂಟೆಯಲ್ಲಿ ಟ್ರೇಡ್ ಲೈಸನ್ಸ್ ಇನ್ನಿತರ ದಾಖಲೆಗಳನ್ನು ಹಾಜರುಪಡಿಸದೇ ಇದ್ದರೆ ಕೇಂದ್ರಕ್ಕೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಎಂಎಫ್ ಸಿ ಮಳಿಗೆಯಿರುವ ಕಟ್ಟಡದ ಮಾಲಕರ ದೂರಿನಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಒಳಗೆ ಬರುತ್ತಿದ್ದಂತೆ ಮಳಿಗೆಯ ಮಾಲಕರು ತಡೆದು ತೀವ್ರ ಜಟಾಪಟಿ ನಡೆಸಿದ್ದಾರೆ. ನಾವು ತಪಾಸಣೆ ನಡೆಸುವುದಕ್ಕೆ ಆಗಮಿಸಿದ್ದು ಎಂದು ಅಧಿಕಾರಿಗಳು ಹೇಳಿದರೆ, ಹೊಟೇಲ್ ಮಾಲಕರು ಒಳಗೆ ಬಂದು ತಪಾಸಣೆ ನಡೆಸುವುದಕ್ಕೆ ಬಿಡಲ್ಲ ಎಂದು ತಡೆದಿದ್ದಾರೆ. ನಾವು ಎಲ್ಲ ಲೈಸನ್ಸ್ ಇದ್ದುಕೊಂಡೇ ವ್ಯವಹಾರ ನಡೆಸುತ್ತಿದ್ದೇವೆ. ಹೊಟೇಲ್ ಒಳಗಡೆ ಉತ್ತಮ ಸೌಲಭ್ಯವನ್ನೂ ಹೊಂದಿದ್ದೇವೆ ಎಂದು ಮಾಲಕ ಸಿದ್ದಿಕ್ ಹೇಳಿದ್ದು ಅಧಿಕಾರಿ ಸಿಬಂದಿಯನ್ನು ತರಾಟೆಗೆತ್ತಿಕೊಂಡಿದ್ದಾರೆ.
ನಮ್ಮ ಆಹಾರ ಮಳಿಗೆ ಯಾವುದೇ ಕಾನೂನು ಉಲ್ಲಂಘಿಸಿಲ್ಲ. ನಾವು ಟ್ರೇಡ್ ಲೈಸನ್ಸ್ ಗಾಗಿ ಸಲ್ಲಿಸಿರುವ ಅರ್ಜಿಯನ್ನು ಇಲಾಖೆಯಿಂದ ನಿರಾಕರಿಸಿಯೂ ಇಲ್ಲ. 2017ರಿಂದ ಇದೇ ಜಾಗದಲ್ಲಿ ನಾವು ಬಿಸಿನೆಸ್ ಹೊಂದಿದ್ದೇವೆ. ಈಗ ಅಧಿಕಾರಿಗಳು ಕೆಲವು ಬಾಡಿಗೆ ಗೂಂಡಾಗಳನ್ನು ಜೊತೆಗೆ ಕರೆದುಕೊಂಡು ಬಂದಿದ್ದಾರೆ. ಯಾರಿಂದಲೋ ಲಂಚ ಪಡೆದು ದಾಳಿಗೆ ಬಂದಿದ್ದಾರೆ ಎಂದು ಎನ್.ಎಂ.ಎ ಸಿದ್ದಿಕ್ ಆರೋಪ ಮಾಡಿದ್ದಾರೆ. ಕೊನೆಗೆ, 24 ಗಂಟೆಯ ಗಡುವು ಕೊಡುತ್ತೇವೆ, ಸೂಕ್ತ ಟ್ರೇಡ್ ಲೈಸನ್ಸ್ ಇನ್ನಿತರ ದಾಖಲೆ ಪತ್ರಗಳನ್ನು ಇಲಾಖೆಗೆ ಹಾಜರುಪಡಿಸಬೇಕು ಎಂದು ಹೇಳಿ ಅಧಿಕಾರಿಗಳು ಹೊರ ನಡೆದಿದ್ದಾರೆ.
Food department sleuths have raided a food outlet called MFC FOOD MART running business at Falnir without a trade license. The owners of the outlet have expressed anguish at the attitude of the officials who had to return after inspecting the hygiene maintained at the outlet.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
17-06-25 09:57 pm
Mangalore Correspondent
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm