ಬ್ರೇಕಿಂಗ್ ನ್ಯೂಸ್
10-10-23 08:22 pm Mangalore Correspondent ಕರಾವಳಿ
ಉಳ್ಳಾಲ, ಅ.10: ಈದ್ ಮಿಲಾದ್ ವಾಹನ ಜಾಥಾ ನೆಪದಲ್ಲಿ ಕರ್ಕಷ ಹಾರ್ನ್, ಸೈಲೆನ್ಸರ್ ಗಳಿಂದ ಅಬ್ಬರಿಸಿ ಸಾರ್ವಜನಿಕರಿಗೆ ಕಿರಿ, ಕಿರಿ ನೀಡಿದ್ದ 15 ಯುವಕರ ವಿರುದ್ಧ ಉಳ್ಳಾಲ ಪೊಲೀಸರು ದಂಡ ಪ್ರಯೋಗಿಸಿದ್ದಲ್ಲದೆ ಪೋಷಕರ ಮುಂದೆಯೇ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕಳೆದ ಸೆ.28 ರಂದು ಪ್ರವಾದಿ ಮಹಮ್ಮದರ ಜನ್ಮದಿನದ ಪ್ರಯುಕ್ತ ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾದಲ್ಲಿ ನಡೆದಿದ್ದ ಈದ್ ಮಿಲಾದ್ ಹಬ್ಬಕ್ಕೆ ಯುವಕರ ಗುಂಪೊಂದು ಕುತ್ತಾರು, ಮಾಡೂರು ಕಡೆಯಿಂದ ವಾಹನ ಜಾಥಾ ನಡೆಸಿ ಕರ್ಕಷ ಹಾರ್ನ್, ಸೈಲೆನ್ಸರ್ ಗಳಿಂದ ಕಿರಿ,ಕಿರಿ ಉಂಟು ಮಾಡಿದಲ್ಲದೆ ಉಳ್ಳಾಲದ ಅಬ್ಬಕ್ಕ ಸರ್ಕಲ್ ಏರಿ ವಿಕೃತವಾಗಿ ವರ್ತಿಸಿ ಘೋಷಣೆಗಳನ್ನ ಕೂಗಿದ್ದ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯುವಕರ ವರ್ತನೆಗೆ ಮುಸ್ಲಿಂ ಧರ್ಮೀಯರೇ ಆಕ್ಷೇಪ ವ್ಯಕ್ತಪಡಿಸಿದ್ದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಘಟನೆ ಸಂಬಂಧ ಉಳ್ಳಾಲ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದರು.
ಮಾಡೂರಿನ ಇಬ್ರಾಹಿಂ, ಅಂಬ್ಲಮೊಗರುವಿನ ಮಹಮ್ಮದ್ ಅರ್ಷಾದ್ ಬಶೀರ್, ಪಡು ಮಾರ್ನಾಡುವಿನ ಅಶೀಶ್ ಪಿಂಟೊ, ಮಂಜನಾಡಿ ಗ್ರಾಮದ ಕೆ.ಎ.ಇಕ್ಬಾಲ್ ಅಬ್ದುಲ್ ರಹಿಮಾನ್, ಇಮ್ರಾನ್, ಇಬ್ರಾಹಿಂ ಬಾತಿಷ್ ಇಸ್ಮಾಯಿಲ್, ಉಮರ್ ಫಾರೂಕ್, ಅಬ್ದುಲ್ ಖಾದರ್, ಕೆ.ಎ.ಇಕ್ಬಾಲ್, ಬಜಾಲಿನ ಮಹಮ್ಮದ್ ಹುಸೇನ್, ಕೋಟೆಕಾರಿನ ಶೌಕತ್ ಆಲಿ, ಬೆಳ್ತಂಗಡಿಯ ಮಹಮ್ಮದ್ ನಿಝಾರ್, ಮಾಡೂರಿನ ಶೇಖ್ ಖಲೀಲ್ ಅಹ್ಮದ್, ಪಾವೂರಿನ ಇಬ್ರಾಹಿಂ, ಸಜೀಪ ನಡುವಿನ ಮಹಮ್ಮದ್ ಇರ್ಷಾದ್ ಸೇರಿದಂತೆ ಒಟ್ಟು 15 ಯುವಕರ ವಿರುದ್ಧ ಉಳ್ಳಾಲ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆಯಡಿ ದಂಡ ವಸೂಲು ಮಾಡಿದ್ದಾರೆ.
ಪೋಷಕರ ಸಮ್ಮುಖದಲ್ಲೇ ಉಳ್ಳಾಲ ಪೊಲೀಸ್ ಠಾಣಾ ನೂತನ ಪಿಐ ಬಾಲಕೃಷ್ಣ ಅವರು ಯುವಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಶಾರದಾ ಉತ್ಸವಕ್ಕೂ ಡಿ.ಜೆ ಅಳವಡಿಸದಂತೆ ಇಲಾಖೆಯ ಆದೇಶ ಬಂದಿದ್ದು ಉಳ್ಳಾಲಕ್ಕೂ ಇದು ಅನ್ವಯಿಸಲಿದೆ ಎಂದು ಪಿಐ ಬಾಲಕೃಷ್ಣ ತಿಳಿಸಿದ್ದಾರೆ.
Mangalore Ullal eid disturbance by youths on abakka circle, Inapector warns all youths found in video.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
16-06-25 05:29 pm
HK News Desk
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
17-06-25 08:17 pm
Mangalore Correspondent
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
Rain, Pilikula Zoo, Mangalore, Flood: ಪಿಲಿಕುಳ...
16-06-25 08:34 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm