ಬ್ರೇಕಿಂಗ್ ನ್ಯೂಸ್
02-10-23 03:44 pm Mangalore Correspondent ಕರಾವಳಿ
ಉಳ್ಳಾಲ, ಅ.2: ಗಾಂಧಿ ಜಯಂತಿಯಂದು ಮದ್ಯ ಮಾರಾಟ ನಿಷೇಧವಿದ್ದರೂ ತೊಕ್ಕೊಟ್ಟಿನ ವಿನಮ್ರ ಬಾರಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ನಡೆಸಲಾಗಿದ್ದು ಕ್ವಾಟ್ರಿಗೆ 40 ರೂಪಾಯಿ ಹೆಚ್ಚುವರಿ ವಸೂಲಿ ಮಾಡಿದರೂ ಪಾನಪ್ರಿಯರು ಹಿಡಿ ಶಾಪ ಹಾಕಿ ಮದ್ಯ ಖರೀದಿಸಿದ್ದಾರೆ.
ರಾಷ್ಟ್ರಪಿತ ಗಾಂಧಿ ಜಯಂತಿಯಂದು ಮದ್ಯ ಮಾರಾಟ ನಿಷೇಧ ನಡುವೆ ತೊಕ್ಕೊಟ್ಟಿನ ವಿನಮ್ರ ಬಾರಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ನಡೆಯುತ್ತಿದೆ. ಮದ್ಯ ನಿಷೇಧದ ಲಾಭ ಎತ್ತಿದ ವಿನಮ್ರ ಬಾರ್ ನವರು ಪ್ರತಿ ಮದ್ಯದ ಬ್ರಾಂಡಿಗೂ ಕ್ವಾಟ್ರಿಗೆ ನಲ್ವತ್ತರಂತೆ ಹೆಚ್ಚುವರಿ ಹಣವನ್ನ ಪೀಕಿಸಿ ಮದ್ಯ ಮಾರಾಟ ಮಾಡಿದ್ದಾರೆ. ಹೆಚ್ಚುವರಿ ಹಣ ದೋಚುತ್ತಿರುವುದರ ವಿರುದ್ಧ ಆಕ್ರೋಶಗೊಂಡ ಪಾನ ಪ್ರಿಯರೋರ್ವರು ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನ ವೀಡಿಯೋ ಮಾಡಿದ್ದಾರೆ.


ವಿನಮ್ರ ಬಾರ್ ನಲ್ಲಿ ಬೆಳ್ಳಂಬೆಳಗ್ಗೆಯೇ ಕುಡಿದು ತೂರಾಡುವುದು ಸಾಮಾನ್ಯ ಎನ್ನುವಂಥ ಸ್ಥಿತಿಯಿದೆ. ಬಾರ್ ಬೆಳಗ್ಗೆ 10 ಗಂಟೆ ನಂತರವೇ ತೆರೆಯಬೇಕೆಂದು ಅಬಕಾರಿ ಇಲಾಖೆ ನಿಯಮ ಇದ್ದರೂ ಈ ಬಾರಲ್ಲಿ ಮಾತ್ರ ಬೆಳಗ್ಗೆ 8 ಗಂಟೆಯಿಂದಲೇ ಮದ್ಯ ದೊರೆಯುತ್ತದೆ. ಅದಕ್ಕಾಗಿ ಹಗಲು ಕುಡುಕರಲ್ಲಿ ಬಾರ್ ನಲ್ಲಿ ಹೆಚ್ಚುವರಿ ದರವನ್ನು ಪೀಕಿಸುತ್ತಾರೆಂಬ ಆರೋಪ ಇದೆ. ಇಲ್ಲಿ ಬೆಳಗ್ಗೆಯೇ ಕುಡಿದು ಟೈಟಾಗುವ ಯುವಕರು ಬಾರ್ ಎದುರಲ್ಲೇ ಟೆಂಟ್ ಹಾಕಿ ಲೂಡೊ ಆಡುತ್ತಾರೆ. ನಿತ್ಯವೂ ಬೆಳ್ಳಂಬೆಳಗ್ಗೆ ಎಣ್ಣೆ ಕುಡಿಸುವ ಬಾರ್ ಮಹಾತ್ಮನ ಜನ್ಮ ದಿನಾಚರಣೆಯಂದು ಎಣ್ಣೆ ಪ್ರಿಯರಿಂದಲೇ ಡಬಲ್ ವಸೂಲಿ ಮಾಡಿ ಮದ್ಯ ನಿಷೇಧ ನಿಯಮವನ್ನೇ ಗಾಳಿಗೆ ತೂರಿದ್ದು ವಿಪರ್ಯಾಸ.
Mangalore Vinamra Bar opens at Thokottu amid Gandhi Jayanti lewing 40 Rs. More than the MRP price.
01-04-26 10:51 pm
HK News Staffer
ಅಡಿಕೆಗೆ ನಿಗದಿಪಡಿಸಿದ ತೇವಾಂಶ ಮಿತಿ ಸಡಿಲಿಕೆಗೆ ಕ್ಯ...
01-04-26 08:56 pm
ದುಬಾರಿ ಏಪ್ರಿಲ್; ನೀರು, ವಿದ್ಯುತ್, ಟೋಲ್, ನಗದು ಎಲ...
01-04-26 12:28 pm
ಕೇರಳದಲ್ಲಿ ಮಹಿಳೆಗೆ ಸಿಎಂ ಸ್ಥಾನ, ಉಚಿತ ಸಾರಿಗೆ ಪ್ರ...
31-03-26 10:13 am
ತಮಿಳುನಾಡಿನಲ್ಲಿ ಬಿಜೆಪಿ ಸೀಟು ಹಂಚಿಕೆಯಲ್ಲಿ ಲೋಪ ;...
29-03-26 10:19 am
01-04-26 11:03 pm
HK News Staffer
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
ಯುದ್ಧ ವಿರಾಮ ಉಲ್ಲಂಘಿಸಿ ಇರಾನ್ ಅಣು ಸ್ಥಾವರಕ್ಕೆ ಬಾ...
31-03-26 11:00 pm
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
01-04-26 09:04 pm
HK News Staffer
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಿಂದ ಹೊರಬಿದ್...
31-03-26 03:01 pm
01-04-26 02:54 pm
HK News Staffer
ಕುಂಜತ್ ಬೈಲಿನಲ್ಲಿ ಫಲ್ಗುಣಿ ನದಿಗೆ ಬಿದ್ದು ಇಬ್ಬರು...
01-04-26 02:16 pm
ಜೈಲಿನಲ್ಲಿದ್ದ ಪತಿಯ ನೋಡಲು ಖಾಸಗಿ ಅಂಗದಲ್ಲಿ ಡ್ರಗ್ಸ...
31-03-26 11:11 am
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm