ಬ್ರೇಕಿಂಗ್ ನ್ಯೂಸ್
19-09-23 08:15 pm Mangalore Correspondent ಕರಾವಳಿ
ಉಳ್ಳಾಲ, ಸೆ.19: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವಕ್ಕೆ ವಿರೋಧ, ವಿಘ್ನಗಳು ಎದುರಾದರೂ ಇಂದು ಅದೇ ಸಭಾಂಗಣದಲ್ಲೇ ಉಪ ಕುಲಪತಿಗಳ ಸಮಕ್ಷಮದಲ್ಲಿ ವಿಘ್ನ ವಿನಾಶಕನ ವಿಗ್ರಹ ಪ್ರತಿಷ್ಠಾಪಿಸಿ ಉತ್ಸವ ಆಚರಿಸಲಾಯಿತು.
ಮುಂಜಾನೆಯೇ ಪರಿಸರ ಸ್ನೇಹಿ ಬಣ್ಣ ಲೇಪನವಿಲ್ಲದ ಸಣ್ಣ ಗಾತ್ರದ ಮಣ್ಣಿನ ಗಣೇಶನ ವಿಗ್ರಹವನ್ನು ಮಂಗಳಾ ಸಭಾಂಗಣದ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ವಿ.ವಿ ಸಭಾಂಗಣದಲ್ಲಿ ಗಣೇಶೋತ್ಸವ ಆಚರಣೆಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿ.ವಿ. ಕ್ಯಾಂಪಸ್ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ವಿವಿ ಉಪ ಕುಲಪತಿ ಜಯರಾಜ್ ಅಮೀನ್ ಅವರೇ ಖುದ್ದು ಪುರೋಹಿತರ ಜತೆ ವೈದಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು.
ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು ವಿ.ವಿ ಆಡಳಿತದ ಸೂಚನೆಯಂತೆ ಶಾಲನ್ನ ತೆಗೆದು ಗಣೇಶೋತ್ಸವದಲ್ಲಿ ಪಾಲ್ಗೊಂಡರು.
ವಿ.ವಿ.ಯಲ್ಲಿ ಗಣೇಶೋತ್ಸವ ಮಾಡಿಯೇ ಸಿದ್ಧ ಎಂದು ಚಾಲೆಂಜ್ ಮಾಡಿದ್ದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಸುರತ್ಕಲ್ ಶಾಸಕ ಡಾ.ಭರತ್ ಶೆಟ್ಟಿ ಸೇರಿದಂತೆ ಹಲವು ಮುಖಂಡರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ ಗಣೇಶೋತ್ಸವವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಗಣಪತಿಯ ಮೇಲೆ ನಂಬಿಕೆ ಇಟ್ಟವರು ಅಂತಹ ಕೆಲಸ ಮಾಡಲ್ಲ. ಯಾವುದೇ ಸರಕಾರವಾಗಲಿ ಇಂತಹ ದೃಷ್ಟಿಕೋನ ಇಟ್ಟುಕೊಂಡಿರಬೇಕು. ವಿ.ವಿಯಲ್ಲಿ ನಡೆದ ಗೊಂದಲವನ್ನು ಉಪಕುಲಪತಿಗಳು ಬಗೆಹರಿಸಿ ಗಣೇಶೋತ್ಸವವನ್ನ ಸಾಂಗವಾಗಿ ನಡೆಸಿದ್ದು ಶ್ಲಾಘನೀಯ. ಹಿಂದೂ ರಾಷ್ಟ್ರವಾಸಿಗಳು ಇಲ್ಲಿನ ಧರ್ಮ, ಸಂಸ್ಕೃತಿಯ ಮೂಲ ಆಚರಣೆ, ಆರಾಧನೆಗಳಿಗೆ ತೊಂದರೆಯಾಗದಂತೆ ಬಾಳಬೇಕಿದೆ. ಹಿಂದೂಗಳು ಅನ್ಯ ಧರ್ಮೀಯರ ಉತ್ಸವಗಳಿಗೆ ಕಲ್ಲೆಸೆದ ನಿದರ್ಶನಗಳೇ ಇಲ್ಲ. ಸಾಮರಸ್ಯ, ಸಮನ್ವಯದಿಂದ ಬದುಕುವುದೇ ಹಿಂದೂಗಳ ಆಶಯ ಎಂದರು.
ಮಂಗಳೂರು ವಿ.ವಿ. ಕುಲಸಚಿವ ಕೆ.ರಾಜು ಮಾತನಾಡಿ ಕ್ಯಾಂಪಸ್ಸಿನಲ್ಲಿ ಗಣೇಶೋತ್ಸವ ನಡೆಸುವ ಕುರಿತು ಗೊಂದಲಗಳು ಉಂಟಾದಾಗ ಸರಕಾರದ ಗಮನಕ್ಕೆ ತರಲಾಗಿತ್ತು. ಸರಕಾರದ ಆದೇಶದಂತೆ ಸರಳವಾಗಿ, ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಹಣ ಹೊಂದಿಸಿ ಸಿಬ್ಬಂದಿ ವರ್ಗ ಸೇರಿಕೊಂಡು ಗಣೇಶೋತ್ಸವ ಆಚರಿಸಿದ್ದೇವೆ ಎಂದರು.
Mangalore University Ganeshotsava celebrated in campus amid opposition with Kalladka Prabhakar Bhat. Ganeshotsava was celebrated in Mangala Auditorium of the Mangaluru University on Tuesday in the presence of vice-chancellor by keeping a small colourless idol of Ganesha despite opposition amidst police security.
28-04-25 10:15 pm
HK News Desk
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
28-04-25 06:52 pm
HK News Desk
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
28-04-25 11:41 am
Mangalore Correspondent
Mangalore, Terror Attack, Doctor Post: ಹೈಲ್ಯಾ...
27-04-25 11:09 pm
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm