ಬ್ರೇಕಿಂಗ್ ನ್ಯೂಸ್
16-09-23 08:26 pm Mangalore Correspondent ಕರಾವಳಿ
ಮಂಗಳೂರು, ಸೆ.16: ರಾಜ್ಯ ಗುಪ್ತಚರ ಇಲಾಖೆಯ ಮಂಗಳೂರಿನ ಕೊಟ್ಟಾರದ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ರಾಜೇಶ್ ಬಿ.ಯು. (53) ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ನಗರದ ಕೊಟ್ಟಾರದಲ್ಲಿರುವ ಗುಪ್ತಚರ ಇಲಾಖೆಯ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ರಾಜೇಶ್ ಇಂದು ಮಧ್ಯಾಹ್ನ ಎದೆನೋವೆಂದು ಹೇಳಿ ಮಲಗಿದ್ದರು. ಕೂಡಲೇ ಇತರ ಸಿಬಂದಿ ನಿರ್ಲಕ್ಷ್ಯ ಮಾಡಬೇಡಿ ಅಂತ ಹೇಳಿ, ಅವರನ್ನು ಆಟೋದಲ್ಲಿ ಎಜೆಗೆ ಕರೆದೊಯ್ದಿದ್ದಾರೆ. ಈ ವೇಳೆ, ಸಹಜವಾಗಿದ್ದ ಅವರು ಮೊದಲ ಮಹಡಿಯಿಂದ ಕೆಳಗೆ ಇಳಿದು ಬಂದಿದ್ದಾರೆ. ಆಟೋದಲ್ಲಿದ್ದಾಗ ಆಸ್ಪತ್ರೆಗೆ ತೆರಳಿದ್ದ ತಾಯಿ ಜೊತೆಗೂ ಫೋನಲ್ಲಿ ಮಾತನಾಡಿದ್ದಾರೆ. ಎಜೆ ಆಸ್ಪತ್ರೆಯ ಹೊರಭಾಗದಲ್ಲಿ ಇಳಿಯುವ ವರೆಗೂ ಸಹಜ ಉಸಿರಾಟದಲ್ಲೇ ಇದ್ದರು. ಒಳಗೆ ಹೋದ ಕೆಲಹೊತ್ತಿನಲ್ಲೇ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಮೂಲತಃ ವಾಮಂಜೂರು ನಿವಾಸಿಯಾಗಿದ್ದು ನಗರದ ಉರ್ವ ಮಾರಿಗುಡಿ ಬಳಿಯ ವೇಲ್ಸ್ ಪೇಟೆಯಲ್ಲಿ ಮನೆ ಹೊಂದಿದ್ದ ರಾಜೇಶ್ ಅವರ ಪತ್ನಿ ಪ್ರೇಮಾ ಮಂಗಳೂರಿನ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟ್ರಾರ್ ಹುದ್ದೆಯಲ್ಲಿದ್ದಾರೆ. ಏಕೈಕ ಮಗ ಎಂಸಿಎ ಕಲಿಯುತ್ತಿದ್ದಾರೆ.
1993ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ ರಾಜೇಶ್, ಸುರತ್ಕಲ್, ಪಣಂಬೂರು ಸೇರಿ ಹಲವು ಕಡೆ ಕರ್ತವ್ಯ ನಿರ್ವಹಿಸಿದ್ದಾರೆ. ಗುಪ್ತಚರ ಇಲಾಖೆಯಲ್ಲಿ ಮೂರು ವರ್ಷಗಳಿಂದ ಎಎಸ್ಐ ಆಗಿದ್ದು ಇದೇ ತಿಂಗಳಲ್ಲಿ ಎಸ್ಐ ಆಗಿ ಭಡ್ತಿ ಪಡೆಯಲಿದ್ದರು. ಪ್ರಮೋಷನ್ ಲಿಸ್ಟ್ ನಲ್ಲಿ ಅವರ ಹೆಸರಿತ್ತು ಎಂದು ಅಲ್ಲಿನ ಸಿಬಂದಿ ತಿಳಿಸಿದ್ದಾರೆ.
Police Intellegence departmemt ASI Rajesh dies of heart attack while on duty in Mangalore. He was a native of Vamamjoor in Mangalore.
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm