ಬ್ರೇಕಿಂಗ್ ನ್ಯೂಸ್
05-09-23 09:51 pm Mangalore Correspondent ಕರಾವಳಿ
ಮಂಗಳೂರು, ಸೆ.5: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಧಾನಿ ಬೆಂಗಳೂರಿಗೆ ಮತ್ತೊಂದು ಹೊಸ ವಿಮಾನ ದಿನಂಪ್ರತಿ ಸಂಚಾರ ಮಾಡಲಿದೆ. ಇದರೊಂದಿಗೆ ಮಂಗಳೂರು- ಬೆಂಗಳೂರು ಡೈಲೀ ವಿಮಾನ ಸಂಖ್ಯೆ ಐದಕ್ಕೇರಿದರೆ, ಶನಿವಾರ ಆರು ವಿಮಾನಗಳು ಸಂಚಾರ ನಡೆಸಲಿವೆ.
ಸೆ.7ರಿಂದ ಇಂಡಿಗೋ ಸಂಸ್ಥೆಯ ವಿಮಾನ ಹೊಸತಾಗಿ ಇವರೆಡು ನಗರಗಳ ನಡುವೆ ಸಂಚಾರ ಆರಂಭಿಸಲಿದೆ. ಬೆಳಗ್ಗೆ 8.35ಕ್ಕೆ ಮಂಗಳೂರಿಗೆ ತಲುಪಲಿರುವ ಇಂಡಿಗೋ ವಿಮಾನ 9.10ಕ್ಕೆ ಮತ್ತೆ ಬೆಂಗಳೂರಿಗೆ ಹೊರಡಲಿದೆ. ಈಗಾಗಲೇ ಬೆಳಗ್ಗೆ 6.50ಕ್ಕೆ ಬೆಂಗಳೂರು ಮೂಲಕ ಪಾಟ್ನಾಕ್ಕೆ, 11.35ಕ್ಕೆ ಬೆಂಗಳೂರು ವಯಾ ಕೋಲ್ಕತ್ತಾಕ್ಕೆ ಸಂಚರಿಸುತ್ತದೆ. ಸಂಜೆ 4.25 ಮತ್ತು ರಾತ್ರಿ 9.50ಕ್ಕೆ ನೇರವಾಗಿ ಬೆಂಗಳೂರಿಗೆ ಸಂಚರಿಸುವ ಇಂಡಿಗೋ ವಿಮಾನಗಳಿವೆ. ಇದರ ಜೊತೆಗೆ ಹೊಸ ವಿಮಾನ ದಿನವೂ ಬೆಳಗ್ಗೆ 9.10ಕ್ಕೆ ಮಂಗಳೂರಿನಿಂದ ಬೆಂಗಳೂರು ಸಂಚಾರ ಮಾಡಲಿದೆ.
ಶನಿವಾರ ಆರನೇ ವಿಮಾನ ಮಂಗಳೂರಿನಿಂದ ಬೆಂಗಳೂರಿಗೆ ಸಂಚಾರ ಮಾಡಲಿದೆ. ಮಂಗಳೂರು- ಪುಣೆಗೆ ಹೋಗುವ ವಿಮಾನವನ್ನೇ ಹೆಚ್ಚುವರಿಯಾಗಿ ಬೆಂಗಳೂರಿನತ್ತ ಓಡಿಸಲು ನಿರ್ಧರಿಸಲಾಗಿದೆ. ಮಂಗಳವಾರ, ಗುರುವಾರ, ಭಾನುವಾರ ಮತ್ತು ಶನಿವಾರ ಸಂಜೆ 5.50ಕ್ಕೆ ವಿಮಾನ ಮಂಗಳೂರಿಗೆ ಬರಲಿದ್ದು, 6.35ಕ್ಕೆ ನಿರ್ಗಮನ ಆಗಲಿದೆ. ಶನಿವಾರ ಮಾತ್ರ ಬೆಂಗಳೂರಿನಿಂದ ಮಂಗಳೂರಿಗೆ ಇಂಡಿಗೋ ವಿಮಾನ ಬರಲಿದ್ದು, ಅದೇ ವಿಮಾನ 6.35ಕ್ಕೆ ಪುಣೆ ಹೊರಡಲಿದೆ.
ಇಂಡಿಗೋ ಸಂಸ್ಥೆಯ ಹೊಸ ವಿಮಾನ ಸಂಚಾರದಿಂದ ಮಂಗಳೂರು – ಬೆಂಗಳೂರು ಮತ್ತು ಮಂಗಳೂರು- ಪುಣೆ ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ. ಸೋಮವಾರದಿಂದ ಶುಕ್ರವಾರಕ್ಕೆ 38ರಿಂದ 40 ವಿಮಾನಗಳ ಸಂಚಾರ ಆಗಲಿದ್ದರೆ, ಅದೇ ಶನಿವಾರ ಮತ್ತು ಭಾನುವಾರ 40ರಿಂದ 42 ವಿಮಾನಗಳು ಸಂಚಾರ ನಡೆಸಲಿವೆ. ಇದಲ್ಲದೆ, ಮಂಗಳೂರು ಏರ್ಪೋರ್ಟಿನಿಂದ ಇತರ ಏರ್ ಸಂಸ್ಥೆಗಳ ಜೊತೆಗೂ ಸಂಪರ್ಕದಲ್ಲಿದ್ದು, ಮತ್ತಷ್ಟು ವಿಮಾನಗಳ ಸಂಚಾರ ಸದ್ಯದಲ್ಲೇ ಆಗಲಿದೆ ಎಂದು ಮಂಗಳೂರು ಏರ್ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
The Mangaluru International Airport (MIA) is all set to get an additional daily flight during the weekdays and an additional flight on Saturday to Bengaluru from September 7. With these additional flights that IndiGo will operate till October 28, the number of daily flights to Bengaluru will go up to five during weekdays/Sundays and six on Saturdays. At present, IndiGo is operating all four flights daily to Bengaluru
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
18-06-25 04:09 pm
HK News Desk
ಕೊಲೆಗಡುಕ, ಬ್ಲಡಿ ಬಾಸ್ಟರ್ಡ್.. ಪಾಕ್ ಸೇನಾ ಮುಖ್ಯಸ್...
18-06-25 01:29 pm
ಇಸ್ರೇಲ್ ದಾಳಿಗೆ ಕಂಗೆಟ್ಟ ಟೆಹ್ರಾನ್ ; ಯುದ್ಧ ನಿಲ್ಲ...
17-06-25 11:02 pm
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
18-06-25 02:10 pm
Mangalore Correspondent
Mangalore Accident, Jeppinamogaru, Aman Rao,...
18-06-25 10:24 am
Mangalore DC Mullai Muhilan Transferred, Dars...
17-06-25 09:57 pm
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm