ಬ್ರೇಕಿಂಗ್ ನ್ಯೂಸ್
05-09-23 09:51 pm Mangalore Correspondent ಕರಾವಳಿ
ಮಂಗಳೂರು, ಸೆ.5: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಧಾನಿ ಬೆಂಗಳೂರಿಗೆ ಮತ್ತೊಂದು ಹೊಸ ವಿಮಾನ ದಿನಂಪ್ರತಿ ಸಂಚಾರ ಮಾಡಲಿದೆ. ಇದರೊಂದಿಗೆ ಮಂಗಳೂರು- ಬೆಂಗಳೂರು ಡೈಲೀ ವಿಮಾನ ಸಂಖ್ಯೆ ಐದಕ್ಕೇರಿದರೆ, ಶನಿವಾರ ಆರು ವಿಮಾನಗಳು ಸಂಚಾರ ನಡೆಸಲಿವೆ.
ಸೆ.7ರಿಂದ ಇಂಡಿಗೋ ಸಂಸ್ಥೆಯ ವಿಮಾನ ಹೊಸತಾಗಿ ಇವರೆಡು ನಗರಗಳ ನಡುವೆ ಸಂಚಾರ ಆರಂಭಿಸಲಿದೆ. ಬೆಳಗ್ಗೆ 8.35ಕ್ಕೆ ಮಂಗಳೂರಿಗೆ ತಲುಪಲಿರುವ ಇಂಡಿಗೋ ವಿಮಾನ 9.10ಕ್ಕೆ ಮತ್ತೆ ಬೆಂಗಳೂರಿಗೆ ಹೊರಡಲಿದೆ. ಈಗಾಗಲೇ ಬೆಳಗ್ಗೆ 6.50ಕ್ಕೆ ಬೆಂಗಳೂರು ಮೂಲಕ ಪಾಟ್ನಾಕ್ಕೆ, 11.35ಕ್ಕೆ ಬೆಂಗಳೂರು ವಯಾ ಕೋಲ್ಕತ್ತಾಕ್ಕೆ ಸಂಚರಿಸುತ್ತದೆ. ಸಂಜೆ 4.25 ಮತ್ತು ರಾತ್ರಿ 9.50ಕ್ಕೆ ನೇರವಾಗಿ ಬೆಂಗಳೂರಿಗೆ ಸಂಚರಿಸುವ ಇಂಡಿಗೋ ವಿಮಾನಗಳಿವೆ. ಇದರ ಜೊತೆಗೆ ಹೊಸ ವಿಮಾನ ದಿನವೂ ಬೆಳಗ್ಗೆ 9.10ಕ್ಕೆ ಮಂಗಳೂರಿನಿಂದ ಬೆಂಗಳೂರು ಸಂಚಾರ ಮಾಡಲಿದೆ.

ಶನಿವಾರ ಆರನೇ ವಿಮಾನ ಮಂಗಳೂರಿನಿಂದ ಬೆಂಗಳೂರಿಗೆ ಸಂಚಾರ ಮಾಡಲಿದೆ. ಮಂಗಳೂರು- ಪುಣೆಗೆ ಹೋಗುವ ವಿಮಾನವನ್ನೇ ಹೆಚ್ಚುವರಿಯಾಗಿ ಬೆಂಗಳೂರಿನತ್ತ ಓಡಿಸಲು ನಿರ್ಧರಿಸಲಾಗಿದೆ. ಮಂಗಳವಾರ, ಗುರುವಾರ, ಭಾನುವಾರ ಮತ್ತು ಶನಿವಾರ ಸಂಜೆ 5.50ಕ್ಕೆ ವಿಮಾನ ಮಂಗಳೂರಿಗೆ ಬರಲಿದ್ದು, 6.35ಕ್ಕೆ ನಿರ್ಗಮನ ಆಗಲಿದೆ. ಶನಿವಾರ ಮಾತ್ರ ಬೆಂಗಳೂರಿನಿಂದ ಮಂಗಳೂರಿಗೆ ಇಂಡಿಗೋ ವಿಮಾನ ಬರಲಿದ್ದು, ಅದೇ ವಿಮಾನ 6.35ಕ್ಕೆ ಪುಣೆ ಹೊರಡಲಿದೆ.
ಇಂಡಿಗೋ ಸಂಸ್ಥೆಯ ಹೊಸ ವಿಮಾನ ಸಂಚಾರದಿಂದ ಮಂಗಳೂರು – ಬೆಂಗಳೂರು ಮತ್ತು ಮಂಗಳೂರು- ಪುಣೆ ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ. ಸೋಮವಾರದಿಂದ ಶುಕ್ರವಾರಕ್ಕೆ 38ರಿಂದ 40 ವಿಮಾನಗಳ ಸಂಚಾರ ಆಗಲಿದ್ದರೆ, ಅದೇ ಶನಿವಾರ ಮತ್ತು ಭಾನುವಾರ 40ರಿಂದ 42 ವಿಮಾನಗಳು ಸಂಚಾರ ನಡೆಸಲಿವೆ. ಇದಲ್ಲದೆ, ಮಂಗಳೂರು ಏರ್ಪೋರ್ಟಿನಿಂದ ಇತರ ಏರ್ ಸಂಸ್ಥೆಗಳ ಜೊತೆಗೂ ಸಂಪರ್ಕದಲ್ಲಿದ್ದು, ಮತ್ತಷ್ಟು ವಿಮಾನಗಳ ಸಂಚಾರ ಸದ್ಯದಲ್ಲೇ ಆಗಲಿದೆ ಎಂದು ಮಂಗಳೂರು ಏರ್ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
The Mangaluru International Airport (MIA) is all set to get an additional daily flight during the weekdays and an additional flight on Saturday to Bengaluru from September 7. With these additional flights that IndiGo will operate till October 28, the number of daily flights to Bengaluru will go up to five during weekdays/Sundays and six on Saturdays. At present, IndiGo is operating all four flights daily to Bengaluru
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm