ಬ್ರೇಕಿಂಗ್ ನ್ಯೂಸ್
19-08-23 05:36 pm Mangalore Correspondent ಕರಾವಳಿ
ಉಳ್ಳಾಲ, ಆ.19: ತಲಪಾಡಿ ಅಲಂಕಾರಗುಡ್ಡೆಯಲ್ಲಿ ಸುಮಾರು 25 ನಾಯಿಗಳು ಮತ್ತು ಹಸುವೊಂದನ್ನ ವಿಷವಿಕ್ಕಿ ಕೊಂದಿರುವುದಲ್ಲದೆ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದೇನೆಂದು ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ತಾನು ತಪ್ಪು ಮಾಡಿಲ್ಲ ಎಂದು ಯಾವುದೇ ದೈವಸ್ಥಾನಗಳಿಗೆ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಘಟನೆಯ ಆರೋಪಿಯೆಂದು ಹೇಳಲಾಗುತ್ತಿರುವ ಅಬ್ದುಲ್ ಖಾದರ್ ಮಕ್ಯಾರ್ ಹೇಳಿದ್ದಾರೆ.
ಅಲಂಕಾರ ಗುಡ್ಡೆಯಲ್ಲಿ ಆಹಾರದಲ್ಲಿ ನಿರಂತರ ವಿಷಪ್ರಾಷಣ ನಡೆಸಿ ಸುಮಾರು 25 ನಾಯಿಗಳನ್ನ ಕೊಲ್ಲಲಾಗಿತ್ತು. ಮೊನ್ನೆ ಆ.17 ರಂದು ಸ್ಥಳೀಯ ನಿವಾಸಿ ಸತ್ಯೇಂದ್ರ ಎಂಬವರು ಸಾಕುತ್ತಿದ್ದ 8 ತಿಂಗಳ ಹಸುವೊಂದು ವಿಷಾಹಾರ ಸೇವಿಸಿ ಸಾವನ್ನಪ್ಪಿತ್ತು. ಸ್ಥಳೀಯ ನಿವಾಸಿ ಖಾದರ್ ಎಂಬಾತನೇ ಇಂತಹ ಪೈಶಾಚಿಕ ಕೃತ್ಯಗೈದಿದ್ದಾನೆ ಎಂದು ಸತ್ಯೇಂದ್ರ ಅವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.
ಇಂದು ಮಾಧ್ಯಮಗಳ ಮುಂದೆ ಬಂದ ಆರೋಪಿ ಖಾದರ್, ನನ್ನ ಮೇಲೆ ಸ್ಥಳೀಯ ಕೆಲವೇ ಮಂದಿ ಸುಳ್ಳು ಆರೋಪ ಹೊರಿಸಿದ್ದಾರೆ. ನಾನು 62 ವರುಷಗಳಿಂದ ಬಾಳಿದ ಪ್ರದೇಶದ ಅಕ್ಕ, ತಂಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದೇನೆ ಎಂದು ಆರೋಪಿಸಿದವರು ಯಾರಿಗೆ ನಾನು ಕಿರುಕುಳ ನೀಡಿದ್ದೇನೆ ಎಂದು ಹೇಳಲಿ. ವಿದೇಶದಲ್ಲಿರುವ ನನ್ನ ಮಗನೂ ಇದರಿಂದ ಸಾಕಷ್ಟು ನೊಂದಿದ್ದು ನನ್ನ ಇಷ್ಟ ಮಿತ್ರರೂ ನನ್ನಲ್ಲಿ ಪ್ರಶ್ನಿಸುತ್ತಿದ್ದಾರೆಂದರು. 25 ನಾಯಿಗಳನ್ನ ಕೊಂದಿದ್ದೇನೆ ಅಂತ ಹೇಳುತ್ತಾರೆ, ಪಂಚಾಯತ್ ಅಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸಿದ್ದಾರೆಯೇ ಎಂದು ಪ್ರಶ್ನಿಸಿದರು.
ದನ ಮೇಯಿಸುವ ಮಹಿಳೆಯರ ಜೊತೆಗೆ ಖಾದರ್ ತಮ್ಮ ವಾಹನ ನಿಲ್ಲಿಸಿ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಸತ್ತ ಹಸುವಿನ ಮಾಲಕಿ ಆರೋಪಿಸಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಖಾದರ್ ಮಹಿಳೆಯರು ಸಿಕ್ಕಾಗ ವಾಹನವನ್ನ ನಾನು ನಿಲ್ಲಿಸೋಲ್ಲ. ಸ್ಲೋ ಮಾಡ್ತೇನಷ್ಟೆ. ಮಹಿಳೆಯರ ಕೈಯಲ್ಲಿ ದನದ ಹಗ್ಗ ಇರುತ್ತೆ. ಹಗ್ಗ ವಾಹನಕ್ಕೆ ಸುತ್ತಿ ಕೆಳಗೆ ಬೀಳಬಾರದೆಂಬ ಕಾಳಜಿಯಿಂದ ಗಾಡಿಯನ್ನ ಸ್ಲೋ ಮಾಡ್ತೇನಷ್ಟೆ ಎಂದಾಗ ಖಾದರ್ ಹಿಂದೆ ನಿಂತಿದ್ದ ಬೆಂಬಲಿಗರು ಮುಸಿ, ಮುಸಿ ನಕ್ಕಿದ್ದು ಮಾತ್ರ ಖಾದರ್ ಅವರನ್ನೇ ಅಣಕ ಮಾಡಿದಂತಿತ್ತು.
Ullal 25 dogs killed of poisoning, Mulsim man says ready to promise in any temples of not killing dogs in Mangalore.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm