ಬ್ರೇಕಿಂಗ್ ನ್ಯೂಸ್
01-08-23 02:45 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 1: ಎರಡನೇ ಬಾರಿಗೆ ಸಿಎಂ ಆದಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡಲು ಮಹಿಳಾ ನಾಯಕಿಯರು ಪೈಪೋಟಿ ನಡೆಸಿದ್ದು ಇಬ್ಬರು ಕಿತ್ತಾಡಿಕೊಂಡ ಘಟನೆ ವಿಡಿಯೋ ವೈರಲ್ ಆಗಿದೆ.
ಮಂಗಳೂರಿನ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ, ಸಿದ್ದರಾಮಯ್ಯ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ತನ್ನ ಬೆಂಬಲಿಗರ ಜೊತೆ ಜೈಕಾರ ಹಾಕುತ್ತಾ ಹೂಗುಚ್ಛ ನೀಡಲು ಮುಂದೆ ಬಂದಿದ್ದಾರೆ. ಈ ವೇಳೆ, ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್ ಅಡ್ಡ ಬಂದಿದ್ದು ಶಾಲೆಟ್ ಹತ್ತಿರ ಹೋಗದಂತೆ ತಡೆದಿದ್ದಾರೆ. ಶಾಲೆಟ್ ಪಿಂಟೋ ಹೂವಿನ ಮಾಲೆ ಹಾಕಲು ಬಂದಾಗ ಕವಿತಾ ಸನಿಲ್ ದೂಡಿದ್ದು ಇಬ್ಬರ ಕಿತ್ತಾಟಕ್ಕೆ ಸಾಕ್ಷಿಯಾಯಿತು.
ಸಿದ್ದರಾಮಯ್ಯ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮಹಿಳಾ ನಾಯಕಿಯರು ಹೂಮಾಲೆ ಹಾಕಲು ಮುಂದೆ ಬಂದಿದ್ದರು. ಈ ವೇಳೆ, ಸಿದ್ದರಾಮಯ್ಯ ಕಾರಿಗೆ ಕವಿತಾ ಸನಿಲ್ ಅಡ್ಡ ಬಂದಿರುವುದು, ಕಾರು ಹೋದ ಬಳಿಕ ಕವಿತಾ ಮತ್ತು ಶಾಲೆಟ್ ಪಿಂಟೋ ಕಿತ್ತಾಡಿಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇಬ್ಬರು ನಾಯಕಿಯರ ಜಡೆ ಕಿತ್ತಾಟ ನೋಡಿದ ಕಾಂಗ್ರೆಸ್ ನಾಯಕರು ಮುಸಿ ಮುಸಿ ನಕ್ಕಿದ್ದಾರೆ.
ಸಿದ್ದರಾಮಯ್ಯ ವಿಮಾನ ನಿಲ್ದಾಣದ ಒಳಗಿರುವಾಗಲೇ ಶಾಲೆಟ್ ಪಿಂಟೋಗೆ ಒಳಗೆ ಹೋಗಲು ಅವಕಾಶ ಸಿಕ್ಕಿರಲಿಲ್ಲ. ಹೊರಗಡೆ ಇದ್ದೇ ಆಚೀಚೆ ಅಡ್ಡಾಡುತ್ತಿದ್ದರು. ಆನಂತರ, ಸಿದ್ದರಾಮಯ್ಯ ಹೊರಬಂದು ಮಾಧ್ಯಮಕ್ಕೆ ಮಾತನಾಡಿದ ಸಂದರ್ಭದಲ್ಲಿಯೂ ಕವಿತಾ ಸನಿಲ್ ಇತರೇ ಕಾಂಗ್ರೆಸ್ ನಾಯಕರನ್ನು ಬದಿಗೊತ್ತಿ ಸಿದ್ದರಾಮಯ್ಯ ಹತ್ತಿರ ನಿಂತುಕೊಳ್ಳಲು ಯಶಸ್ವಿಯಾಗಿದ್ದರು. ಕೊನೆಗೆ, ಜೈಕಾರ ಕೂಗಿ ಹೂಮಾಲೆ ಹಾಕುವ ಸಂದರ್ಭದಲ್ಲಿಯೂ ಸಿದ್ದರಾಮಯ್ಯಗೆ ಕವಿತಾ ಸನಿಲ್ ತಡೆ ಹಾಕಿದ್ದು ಇತರೇ ನಾಯಕಿಯರನ್ನು ಸಿಟ್ಟಾಗಿಸಿತ್ತು.
CM siddaramaiah in Mangalore, Congress members Kavitha Sanil andnl Sharlet Pinto fight to give garlands and bouquet.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
19-06-25 07:13 pm
HK News Desk
ಪಾಕ್ ಸೇನಾ ಮುಖ್ಯಸ್ಥನಿಗೆ ಡೊನಾಲ್ಡ್ ಟ್ರಂಪ್ ಔತಣ ಕೂ...
18-06-25 09:54 pm
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
NHAI, Kasaragod: ಕಾಸರಗೋಡು– ಕಣ್ಣೂರು ಮಧ್ಯೆ ಹೆದ್...
18-06-25 04:09 pm
ಕೊಲೆಗಡುಕ, ಬ್ಲಡಿ ಬಾಸ್ಟರ್ಡ್.. ಪಾಕ್ ಸೇನಾ ಮುಖ್ಯಸ್...
18-06-25 01:29 pm
19-06-25 01:05 pm
Mangalore Correspondent
Udupi Bus Driver: ಅಡ್ಡಾದಿಡ್ಡಿ ಬಸ್ ಚಲಾಯಿಸಿ ರಂಪ...
18-06-25 10:57 pm
Lokayukta Arrest, Mangalore: ಸಿಂಗಲ್ ಸೈಟ್ ನಕ್ಷ...
18-06-25 10:46 pm
Puttur News, Truck: ಸರಕು ಬಾಡಿಗೆ ಮಾಡಲು ಒಯ್ದಿದ್...
18-06-25 06:38 pm
NHRC, Dakshina Kannada, MLA Bharath Shetty: ಹ...
18-06-25 02:10 pm
19-06-25 04:37 pm
Mangalore Correspondent
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm