ಬ್ರೇಕಿಂಗ್ ನ್ಯೂಸ್
23-07-23 07:20 pm Mangalore Correspondent ಕರಾವಳಿ
ಉಳ್ಳಾಲ, ಜು.23: ಒಂದು ಕೈಲಿ ಮೊಬೈಲ್ ನೋಡ್ಕೊಂಡೇ ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ತಿರುಗಿಸುತ್ತ ಸಿಟಿ ಬಸ್ಸನ್ನ ಓಡಿಸುತ್ತಿದ್ದ ಚಾಲಕನ ನಿರ್ಲಕ್ಷ್ಯವನ್ನ ಬಸ್ ಪ್ರಯಾಣಿಕರೋರ್ವರು ವೀಡಿಯೋ ರೆಕಾರ್ಡ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಮಂಗಳೂರಿನಿಂದ ತಲಪಾಡಿ ನಡುವೆ ಓಡಾಟ ನಡೆಸುವ 42 ರೂಟ್ ಸಂಖ್ಯೆಯ "ಸೈಂಟ್ ಆಂಟನಿ" ಸಿಟಿ ಬಸ್ಸಿನ ಚಾಲಕ ನಿರ್ಲಕ್ಷ್ಯದಿಂದ ಬಸ್ಸು ಚಲಾಯಿಸಿದ್ದಾನೆ. ಭಾನುವಾರ ಮಧ್ಯಾಹ್ನದ ವೇಳೆ ಪ್ರಯಾಣಿಕರು ತುಂಬಿದ್ದ ಬಸ್ಸು ಮಂಗಳೂರಿನಿಂದ ತಲಪಾಡಿಗೆ ಸಾಗುತ್ತಿದ್ದ ವೇಳೆ ಚಾಲಕ ಮೊಬೈಲನ್ನ ನೋಡ್ಕೊಂಡೇ ಒಂದು ಕೈಯಲ್ಲೇ ಸ್ಟೇರಿಂಗನ್ನ ತಿರುಗಿಸಿ ಬಸ್ಸು ಚಲಾಯಿಸಿದ್ದಾನೆ. ಬಸ್ಸಿನ ಎದುರಿನ ಕ್ಯಾಬಿನ್ ಸೀಟಲ್ಲಿ ಕುಳಿತುಕೊಂಡಿದ್ದ ಪ್ರಯಾಣಿಕರೋರ್ವರು ಚಾಲಕನ ನಡೆಯಿಂದ ಕುಪಿತಗೊಂಡಿದ್ದು ಜಪ್ಪಿನಮೊಗರುವಿಗೆ ಬಸ್ಸು ತಲುಪಿದಾಗ ತನ್ನ ಮೊಬೈಲಲ್ಲಿ ಅಜಾಗರೂಕತೆಯ ಚಾಲನೆಯನ್ನ ವೀಡಿಯೋ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.
ಚಾಲಕನನ್ನ ನಂಬಿಯೇ ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಪ್ರಯಾಣಿಕರ ನಂಬಿಕಸ್ಥ ಚಾಲಕನೇ ಈ ರೀತಿ ಯಾರ ಗೊಡವೆ ಇಲ್ಲದೆ ಮೊಬೈಲನ್ನ ನೋಡಿಕೊಂಡು ಬಸ್ಸು ಚಲಾಯಿಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಚಾಲನೆಯಲ್ಲಿ ಮೊಬೈಲ್ ಬಳಸಿದರೆ ಅಂಥವರ ಡ್ರೈವಿಂಗ್ ಲೈಸೆನ್ಸ್ ರದ್ದು ಪಡಿಸುವ ಹಕ್ಕು ಆರ್ ಟಿಓ ಅಧಿಕಾರಿಗಳಿಗೆ ಇದೆ. ಇಂತಹ ಬೇಜವ್ದಾರಿ ಚಾಲಕರ ಡ್ರೈವಿಂಗ್ ಲೈಸನ್ಸ್ ರದ್ದು ಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
St Antony Travels Route No. 42 bus driver in #Mangalore uses his #mobile while operating the #bus for kilometres through the city without thinking twice about endangering the lives of the passengers. One of the travellers films the trip. #BreakingNews
— Headline Karnataka (@hknewsonline) July 23, 2023
@compolmlr @alokkumar6994 pic.twitter.com/yqswLeETDk
St Antony Travels Route No. 42 bus driver in Mangalore uses his mobile while operating the bus for kilometres through the city without thinking twice about endangering the lives of the passengers. One of the travellers films the trip.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
19-06-25 10:58 pm
HK News Desk
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
ಪಾಕ್ ಸೇನಾ ಮುಖ್ಯಸ್ಥನಿಗೆ ಡೊನಾಲ್ಡ್ ಟ್ರಂಪ್ ಔತಣ ಕೂ...
18-06-25 09:54 pm
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
19-06-25 10:08 pm
Mangalore Correspondent
ಜಪ್ಪಿನಮೊಗರು ಕಾರು ಅಪಘಾತಕ್ಕೆ ಮದ್ಯ ಸೇವನೆ, ಅತಿ ವೇ...
19-06-25 07:48 pm
Mangalore Police, Sudheer Kumar Reddy: ಕೋಮು ಸ...
19-06-25 01:05 pm
Udupi Bus Driver: ಅಡ್ಡಾದಿಡ್ಡಿ ಬಸ್ ಚಲಾಯಿಸಿ ರಂಪ...
18-06-25 10:57 pm
Lokayukta Arrest, Mangalore: ಸಿಂಗಲ್ ಸೈಟ್ ನಕ್ಷ...
18-06-25 10:46 pm
19-06-25 04:37 pm
Mangalore Correspondent
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm