ಬ್ರೇಕಿಂಗ್ ನ್ಯೂಸ್
13-06-23 02:55 pm HK News Desk ಕರಾವಳಿ
ಉಳ್ಳಾಲ, ಜೂ.13: ಸಾರ್ವಜನಿಕ ಬಾವಿಯಿರುವ ನೂರು ಮೀಟರ್ ವ್ಯಾಪ್ತಿಯೊಳಗಿನ ಖಾಸಗಿ ಜಾಗದಲ್ಲಿ ಕೊಳವೆ ಬಾವಿ ನಿರ್ಮಾಣಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಕುಂಪಲ ಮೂರುಕಟ್ಟೆಯ ಬಲ್ಯ ಎಂಬಲ್ಲಿ ನಡೆದಿದ್ದು, ಸ್ಥಳಕ್ಕೆ ಬಂದ ಕೋಟೆಕಾರು ಪಟ್ಟಣ ಪಂಚಾಯತ್ ಕಿರಿಯ ಅಭಿಯಂತರ ಬೋರ್ ವೆಲ್ ಕಾಮಗಾರಿಯನ್ನ ತಡೆ ಹಿಡಿದಿದ್ದಾರೆ.
ಕುಂಪಲದ ಮೂರುಕಟ್ಟೆ ಬಲ್ಯ ಎಂಬಲ್ಲಿ ಸರ್ವೇ ಸಂಖ್ಯೆ 202/1 ರಲ್ಲಿ ಸಂತೋಷ್ ಪ್ರಭು ಎಂಬವರು ಐದು ಸೆಂಟ್ಸ್ ಜಾಗ ಹೊಂದಿದ್ದು ಇಲ್ಲಿ ಕೊಳವೆ ಬಾವಿ ತೋಡಲು ಕೋಟೆಕಾರು ಪಟ್ಟಣ ಪಂಚಾಯತ್ಗೆ ಮನವಿ ಸಲ್ಲಿಸಿದ್ದರು. ಸರಕಾರಿ ಬಾವಿಯ 500 ಮೀಟರ್ ಒಳಗಡೆ ಕೊಳವೆ ಬಾವಿ ತೋಡಲು ನಿರಾಕ್ಷೇಪಣ ಪತ್ರ ನೀಡಲು ಪಂಚಾಯತಿಗೆ ಅಧಿಕಾರ ಇಲ್ಲದ ಕಾರಣ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿಯವರಿಗೆ ಪಂಚಾಯತ್ ಕಡೆಯಿಂದ ಮನವಿ ನೀಡಲಾಗಿತ್ತು.


ಸ್ಥಳ ಪರಿಶೀಲನೆ ನಡೆಸಿದ್ದ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ದಾವೂದ್ ಅವರು ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ವರದಿ ನೀಡಿದ್ದರು. ಹಿರಿಯ ಭೂ ವಿಜ್ಞಾನಿ ದಾವೂದ್ ಅವರ ಶಿಫಾರಸಿನಂತೆ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಕೆಲ ಷರತ್ತುಗಳೊಂದಿಗೆ ಸಂತೋಷ್ ಪ್ರಭು ಅವರಿಗೆ ಕೊಳವೆ ಬಾವಿ ತೋಡಲು ಅನುಮತಿ ನೀಡಲಾಗಿತ್ತು.
ಅನುಮತಿ ದೊರೆತಂತೆ ಸಂತೋಷ್ ಪ್ರಭು ಅವರು ನಿನ್ನೆ ರಾತ್ರಿಯೇ ತರಾತುರಿಯಲ್ಲಿ ಕೊಳವೆ ಬಾವಿ ಕೊರೆಯಲು ಮುಂದಾಗಿದ್ದರು. ನೀರಿಲ್ಲದೆ ಕಂಗೆಟ್ಟಿದ್ದ ಸ್ಥಳೀಯರು ತೀವ್ರ ಪ್ರತಿರೋಧ ಒಡ್ಡಿದ್ದು ಕಾಮಗಾರಿಯನ್ನ ತಡೆದಿದ್ದಾರೆ. ಇಂದು ಬೆಳಗ್ಗೆ ಕೊಳವೆ ಬಾವಿ ಕಾಮಗಾರಿ ಪ್ರದೇಶಕ್ಕೆ ಕೋಟೆಕಾರು ಪಟ್ಟಣ ಪಂಚಾಯತ್ ಕಿರಿಯ ಅಭಿಯಂತರ ದಿನೇಶ್.ಕೆ ಅವರು ಭೇಟಿ ನೀಡಿ ಜನಾಕ್ರೋಶಕ್ಕೆ ಮಣಿದು ಕಾಮಗಾರಿಯನ್ನ ತಡೆಹಿಡಿದಿದ್ದಾರೆ.

ದಿನೇಶ್ ಕೆ ಅವರು ಪಟ್ಟಣ ಪಂಚಾಯತ್ ಕಚೇರಿಗೆ ಸಂತೋಷ್ ಪ್ರಭು ಮತ್ತು ಸ್ಥಳೀಯರನ್ನ ಕರೆಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಂತೋಷ್ ಪ್ರಭು ಅವರು ಜಿಲ್ಲಾಧಿಕಾರಿ ಕಚೇರಿಯ ಷರತ್ತಿನನ್ವಯ ಬೋರ್ ವೆಲ್ ಕೊರೆದು ಸ್ಥಳೀಯರಿಗೆ ನೀರಿನ ಸಮಸ್ಯೆ ಉಂಟಾದಲ್ಲಿ ಪಂಚಾಯತ್ ಮುಖಾಂತರ ರೇಷನಿಂಗ್ ನಡೆಸಿ ಜನರಿಗೆ ನೀರು ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರರು ಬೋರ್ ವೆಲ್ ಕೊರೆದು ಜನರಿಗೆ ನೀರು ಕೊಡುವುದಾದರೆ ಮೂರು ಸೆಂಟ್ಸ್ ಜಾಗವನ್ನ ಪಂಚಾಯತ್ಗೆ ಕೊಡುವುದಾಗಿ ದಾನ ಪತ್ರ ಬರೆದು ಕೊಡಲು ಹೇಳಿದ್ದಾರೆ. ಇರೋದೇ ಐದು ಸೆಂಟ್ಸ್ ಜಾಗದಲ್ಲಿ ಮೂರು ಸೆಂಟ್ಸ್ ಜಾಗವನ್ನ ದಾನ ನೀಡಿದರೆ ಗತಿಯೇನಂತ ಜಾಗದ ಮಾಲೀಕ ಸಂತೋಷ್ ಪ್ರಭು ಹೇಳಿದ್ದು, ತಾನು ಆ ಜಾಗದಲ್ಲಿ ಬಾವಿಯನ್ನ ಅಗೆಯೋದಾಗಿ ಹೇಳಿದ್ದು ಅದಕ್ಕೆ ಊರವರು ಸಹಕಾರ ನೀಡಬೇಕಾಗಿ ಕೋರಿದ್ದು ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿದೆ.
Mangalore Fight over borewell next to water well at Kumpala, borewell work stopped by Panchyath officals
31-12-25 02:35 pm
Bangalore Correspondent
ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಚಕ್ರವರ್ತಿ ಸೂಲಿ...
30-12-25 11:12 pm
ಬಯೋಕಾನ್ ಕಂಪನಿ ಟೆಕ್ಕಿ ಆಫೀಸ್ ಕಟ್ಟಡದ ಆರನೇ ಮಹಡಿಯಿ...
30-12-25 10:14 pm
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾ...
30-12-25 06:34 pm
ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ಮದುವೆ ನಿಶ್ಚಿತಾರ್ಥ...
30-12-25 05:44 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
31-12-25 03:35 pm
Mangalore Correspondent
ಶೀಘ್ರದಲ್ಲೇ ಸ್ಕ್ಯಾನ್ ಜೆಟ್ ವಿಮಾನ ಸೇವೆ ; ವಿಜಯ್ ಮ...
31-12-25 11:47 am
ಹೊಸ ವರ್ಷಾಚರಣೆ ; ಕಾರ್ಯಕ್ರಮಕ್ಕೆ ಪೂರ್ವಾನುಮತಿ ಅಗತ...
30-12-25 10:43 pm
ಯುವತಿಗೆ ಮಗು ಕರುಣಿಸಿದ ಪ್ರಕರಣ ; ಬಿಜೆಪಿಯಿಂದ ಜಗನ್...
29-12-25 11:03 pm
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
30-12-25 10:40 pm
Mangalore Correspondent
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm