ಸುರತ್ಕಲ್ ಟೋಲ್ ಗೇಟ್ ನೇರ ಕಾರ್ಯಾಚರಣೆ ಹಿನ್ನೆಲೆ ; ಗೇಟ್ ಸುತ್ತಮುತ್ತ ಪೊಲೀಸರ ಸೆಕ್ಯುರಿಟಿ ! 

17-10-22 10:57 pm       Mangalore Correspondent   ಕರಾವಳಿ

ಸುರತ್ಕಲ್ ಟೋಲ್ ಗೇಟ್ ವಿರುದ್ಧ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಟೋಲ್ ಗೇಟ್ ಸುತ್ತಮುತ್ತ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 

ಮಂಗಳೂರು, ಅ.17 : ಸುರತ್ಕಲ್ ಟೋಲ್ ಗೇಟ್ ವಿರುದ್ಧ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಟೋಲ್ ಗೇಟ್ ಸುತ್ತಮುತ್ತ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 

ಟೋಲ್ ಗೇಟ್ ವಿರೋಧಿ ಸಮಿತಿಯ ಸವಾಲನ್ನು ಎದುರಿಸಲು ಜಿಲ್ಲಾಡಳಿತ ಪೊಲೀಸ್ ಸರ್ಪಗಾವಲನ್ನು ಹಾಕಿದೆ. ಸೋಮವಾರ ಸಂಜೆಯಿಂದಲೇ ಟೋಲ್ ಗೇಟ್ ಎರಡೂ ಬದಿಯಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಆಮೂಲಕ ವಿರೋಧಿ ಹೋರಾಟಕ್ಕಾಗಿ ಜನರು ಸೇರದಂತೆ ಬೆದರಿಸುವ ತಂತ್ರ ಹೆಣೆಯಲಾಗಿದೆ. 

ಈಗಾಗಲೇ ನೇರ ಕಾರ್ಯಾಚರಣೆ ಹೆಸರಲ್ಲಿ ಜನರನ್ನು ಸೇರಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪ್ರಚಾರ ಅಭಿಯಾನ ನಡೆಸಿದೆ. ಇದರ ನಡುವೆ, ಪ್ರಮುಖರಿಗೆ ನೋಟೀಸ್ ಕೊಟ್ಟು ಬಾಂಡ್ ನೀಡುವ ಬಗ್ಗೆ ಎಚ್ಚರಿಕೆ ನೀಡಿದೆ. ಪೊಲೀಸರು ರಾತ್ರೋರಾತ್ರಿ ಮನೆಗೆ ನುಗ್ಗಿ ನೋಟಿಸ್ ಕೊಟ್ಟಿರುವ ವಿಚಾರ ವಿರೋಧಕ್ಕೆ ಕಾರಣ ಆಗಿರುವಾಗಲೇ ವಿವಿಧ ಪಕ್ಷಗಳ ನಾಯಕರು ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ಜೊತೆಗೆ ಬಿಜೆಪಿ ಸರಕಾರದ ನಿಲುವನ್ನೂ ಖಂಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಕೂಡ ಮುತ್ತಿಗೆ ಹೋರಾಟ ಬೆಂಬಲಿಸಿ ತಮ್ಮ ಕಾರ್ಯಕರ್ತರಿಗೆ ನೇರ ಕಾರ್ಯಾಚರಣೆಗೆ ಕರೆ ನೀಡಿದ್ದಾರೆ. 

ಇದರಿಂದಾಗಿ ಜಿಲ್ಲಾಡಳಿತ ಪೊಲೀಸರನ್ನು ನಿಯೋಜಿಸಿ ಜನರು ಟೋಲ್ ಗೇಟ್ ಬಳಿ ಸೇರದಂತೆ ಮಾಡಲು ತಂತ್ರ ಹೆಣೆದಿದೆ. ಇದಕ್ಕಾಗಿ ಪೊಲೀಸ್ ಕಮಿಷನರ್ ಶಶಿಕುಮಾರ್, ಟೋಲ್ ಗೇಟ್ ಪರವಾಗಿ ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಈ ನಿಲುವನ್ನು ಖಂಡಿಸಿರುವ ಟೋಲ್ ಗೇಟ್ ಹೋರಾಟಗಾರರು, ಧನದಾಹಿ ನವಯುಗ್ ಕಂಪನಿಗೆ ಪೊಲೀಸರು ಸೆಕ್ಯುರಿಟಿ ಕೊಟ್ಟಿದ್ದಾರೆ. ಜನರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ‌

Protest over illegal toll, Hundreds of police deployed at Surathkal toll in Mangalore. The police have ordered the protesters to furnish a bond for Rs 2 lacs along with a government bail and also to report themselves at the Police Commissioner's office on Monday.