ಬ್ರೇಕಿಂಗ್ ನ್ಯೂಸ್
11-10-22 08:19 pm Mangalore Correspondent ಕರಾವಳಿ
ಮಂಗಳೂರು, ಅ.11: ಲ್ಯಾಪ್ ಟಾಪ್ ಕೊಡಿಸುತ್ತೇನೆಂದು ಹೇಳಿ ನಗರದ ಉದ್ಯಮಿಯೊಬ್ಬರ ಬಳಿಯಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಶಾಪ್ ಹೊಂದಿರುವ ಉದ್ಯಮಿ, ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳು, ಬಿಡಿ ಭಾಗಗಳನ್ನು ಮಾರಾಟ ಮಾಡುವ ಉದ್ಯಮ ಹೊಂದಿದ್ದಾರೆ. ಇವರಿಗೆ ಜೈಪುರದ ವೈಶಾಲಿ ನಗರದ ಮನೋಜ್ ಚೌರಾಸಿಯಾ ಎಂಬಾತ ಫೋನ್ ಕರೆ ಮಾಡಿ, ನಾವು ಕಡಿಮೆ ದರಕ್ಕೆ ಲ್ಯಾಪ್ ಟಾಪ್ ಪೂರೈಸುತ್ತೇವೆ ಎಂದು ನಂಬಿಸಿದ್ದಾನೆ. ಅದರಂತೆ, ಕಳೆದ ಆಗಸ್ಟ್ ತಿಂಗಳಲ್ಲಿ ಎರಡು ಲ್ಯಾಪ್ ಟಾಪ್ ಖರೀದಿಸಿದ್ದರು.
ಆನಂತರ ಕೆಲವು ದಿನಗಳ ಬಳಿಕ ಮನೋಜ್ ಚೌರಾಸಿಯಾ ಮತ್ತು ಆತನ ಅಸಿಸ್ಟೆಂಟ್ ಸುರಕ್ಷಾ ಖಂಡೇಲ್ ವಾಲಾ ಫೋನ್ ಕರೆ ಮಾಡಿ, ಮತ್ತಷ್ಟು ಲ್ಯಾಪ್ ಟಾಪ್ ಖರೀದಿಸುವಂತೆ ಆಫರ್ ಮಾಡಿದ್ದಾರೆ. ಅದರಂತೆ, ಉದ್ಯಮಿ 15 ಎಚ್ ಪಿ ಬ್ರಾಂಡಿನ ಲ್ಯಾಪ್ ಟಾಪ್ ಮತ್ತು ಕ್ಯಾರಿ ಬ್ಯಾಗನ್ನು ನೀಡುವಂತೆ ಡೀಲ್ ಕುದುರಿಸಲು ಒಪ್ಪಿದ್ದರು. ಅಲ್ಲದೆ, ಸಾಮಗ್ರಿ ಪೂರೈಸುವುದಕ್ಕಾಗಿ 5.70 ಲಕ್ಷ ರೂ.ಗಳನ್ನು ಮನೋಜ್ ಚೌರಾಸಿಯಾಗೆ ನೀಡಿದ್ದರು. ಆದರೆ ಚೌರಾಸಿಯಾ ಹಣ ಪಡೆದು ಲ್ಯಾಪ್ ಟಾಪ್ ನೀಡದೆ ವಂಚಿಸಿದ್ದಾರೆಂದು ದೂರು ನೀಡಲಾಗಿದೆ.
ಪೊಲೀಸರು ಪರಿಶೀಲನೆ ನಡೆಸಿದಾಗ ಮನೋಜ್ ಚೌರಾಸಿಯಾ ಮಂಗಳೂರಿನಲ್ಲೇ ಹಲವರಿಗೆ ಇದೇ ರೀತಿ ಹಣ ಪಡೆದು ಲ್ಯಾಪ್ ಟಾಪ್ ನೀಡದೆ ವಂಚಿಸಿದ್ದಾನೆಂದು ಗೊತ್ತಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
A case is filed in which it is accused that a person was fleeced Rs 5.70 lac on the pretext of supplying laptops. An entrepreneur from the city is selling spare parts of laptop and computers. He was approached by Manoj Chaurasia of Vaishali city in Jaipur saying that he will supply laptops at low price. Accordingly, in the month of August, the city entrepreneur bought two laptops from him.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm