ಬ್ರೇಕಿಂಗ್ ನ್ಯೂಸ್
05-10-22 11:01 pm Mangalore Correspondent ಕರಾವಳಿ
ಮಂಗಳೂರು, ಅ.5 : ಎರಡು ವರ್ಷಗಳಲ್ಲಿ ಕೊರೊನಾ ಇದ್ದ ಕಾರಣವೋ ಏನೋ.. ಈ ಬಾರಿ ಮಂಗಳೂರು ದಸರಾಕ್ಕೆ ಸಂಜೆಯಾಗುತ್ತಲೇ ಕಾಲಿಡಲು ಜಾಗ ಇರಲಿಲ್ಲ. ಅದ್ದೂರಿತನಕ್ಕೆ ಮತ್ತೊಂದು ಹೆಸರು ಎನ್ನುವಂತೆ ನಡೆದುಬಂದ ಮಂಗಳೂರು ದಸರಾಕ್ಕೆ ಈ ಬಾರಿ ಎಣೆಯೇ ಇರಲಿಲ್ಲ.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ಪೂಜೆಗೊಳ್ಳುವ ನವದುರ್ಗೆಯರು ಮತ್ತು ಶಾರದೆ, ಗಣಪತಿಯ ವಿಗ್ರಹದ ಮೆರವಣಿಗೆ ವಿಜಯದಶಮಿಯ ದಿನ ಎಂದಿನಂತೆ ಅದ್ದೂರಿಯಾಗಿ ನಡೆಯಿತು. ಕುದ್ರೋಳಿ ಕ್ಷೇತ್ರದಲ್ಲಿ ದೇವಸ್ಥಾನದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಿದರು. ಸಂಜೆ ಐದು ಗಂಟೆ ವೇಳೆಗೆ ಮೆರವಣಿಗೆ ಆರಂಭಗೊಂಡರೂ, ಶೋಭಾಯಾತ್ರೆಗೆ ಸ್ತಬ್ಧಚಿತ್ರಗಳು ಸಾಥ್ ನೀಡಲಿಲ್ಲ. ಈ ಹಿಂದೆಲ್ಲ ನವದುರ್ಗೆಯರ ಮೆರವಣಿಗೆಗೂ ಮುಂದಿನಿಂದ ಇತರೇ ಸ್ತಬ್ಧಚಿತ್ರಗಳು ಸಾಗಿ ಬರುತ್ತಿದ್ದವು. ಮಣ್ಣಗುಡ್ಡ, ಲೇಡಿಹಿಲ್ ನಲ್ಲಿ ಮೆರವಣಿಗೆ ಸೇರುತ್ತಿದ್ದ ಸ್ತಬ್ಧಚಿತ್ರಗಳು ಈ ಬಾರಿ ದೇವರ ವಿಗ್ರಹದ ಮುಂದಿನಿಂದ ಸಾಗಿ ಬರಲಿಲ್ಲ.












ಸಾವಿರಾರು ಜನರು ಸಂಜೆಯೇ ಲಾಲ್ ಬಾಗ್, ಬಳ್ಳಾಲ್ ಬಾಗ್ ನಲ್ಲಿ ಬಂದು ನಿಂತಿದ್ದರೂ ರಾತ್ರಿ ಹತ್ತುವರೆ ಕಳೆದರೂ ಮೆರವಣಿಗೆ ಲಾಲ್ ಬಾಗ್ ಬಂದು ತಲುಪಲಿಲ್ಲ. ಹೀಗಾಗಿ ಜನರು ಕಾದು ನಿರಾಶೆಯಾಗಿದ್ದರು. ಶಾರದೆಯ ಜೊತೆಗೆ ಸಾಗಬೇಕೆಂಬ ಕೆಲವು ತಂಡಗಳ ಧಾವಂತ, ಕೆಲವರ ಪ್ರತಿಷ್ಠೆಗಳು ಮೇಳೈಸಿದ ಕಾರಣ ಜನರು ರಾತ್ರಿಯಾದರೂ ಸ್ತಬ್ಧಚಿತ್ರಗಳು ನೋಡಲು ಸಿಗಲಿಲ್ಲ. ಹತ್ತು ಗಂಟೆ ವೇಳೆಗೆ ಲೇಡಿಹಿಲ್, ಲಾಲ್ ಬಾಗ್ ವೃತ್ತದಿಂದ ಬಳ್ಳಾಲ್ ಬಾಗ್ ಪಿವಿಸ್ ಉದ್ದಕ್ಕೆ ಲಕ್ಷಾಂತರ ಜನರು ಸೇರಿದ್ದರು. ಇದೇ ಮೊದಲ ಬಾರಿಗೆ ಎನ್ನುವಂತೆ ಈ ಪರಿ ಜನರು ಸೇರಿದ್ದರು.




ಸ್ಥಳೀಯರಲ್ಲದೆ, ಹೊರ ರಾಜ್ಯಗಳ ಕಾರ್ಮಿಕರು, ಉತ್ತರ ಭಾರತದ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ದಸರಾ ಶೋಭಾಯಾತ್ರೆಗೆ ಎಂದಿನ ವೈಭವ ಇರಲಿಲ್ಲ. ಹೀಗಾಗಿ ಜನರು ಮೈಸೂರು ದಸರಾಕ್ಕಿಂತಲೂ ಹೆಚ್ಚೆಂಬಂತೆ ಸೇರಿದ್ದರು.
Kudroli Dasara in Mangalore, lakhs of people gather for celebration.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 12:06 pm
HK News Desk
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
15-11-25 02:47 pm
Mangalore Correspondent
ಬಿಹಾರದಲ್ಲಿ ಚುನಾವಣೆ ಮುನ್ನ ಹತ್ತು ಸಾವಿರ ಕೊಟ್ಟು ಮ...
15-11-25 01:51 pm
ಬಿ.ಸಿ. ರೋಡ್ ಬಳಿ ಭೀಕರ ಅಪಘಾತ ; ಉಡುಪಿ ಕೃಷ್ಣ ಮಠಕ್...
15-11-25 12:12 pm
Kumapal Dog Attack, Ullal, Mangalore: ಕುಂಪಲ ಬ...
14-11-25 11:01 pm
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm