ಬ್ರೇಕಿಂಗ್ ನ್ಯೂಸ್
02-09-22 10:27 pm Mangalore Correspondent ಕರಾವಳಿ
ಮಂಗಳೂರು, ಸೆ.2 : ಮಂಗಳೂರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಎದುರಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಸರು ಕೇಳಿಬರುತ್ತಿದ್ದಂತೆ ಹರ್ಷೋದ್ಗಾರ ಕೇಳಿಬಂದಿದೆ. ಸರ್ಕಾರಿ ಕಾರ್ಯಕ್ರಮ ಆಗಿದ್ದರೂ ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಮೋದಿ ಕಾರ್ಯಕ್ರಮವನ್ನು ಪಕ್ಷದ ಪ್ರಚಾರ ವೇದಿಕೆ ಎಂದೇ ಪರಿಗಣಿಸಲಾಗಿತ್ತು. ಈ ವೇಳೆ, ಯಡಿಯೂರಪ್ಪ ಹೆಸರನ್ನು ಉಲ್ಲೇಖ ಮಾಡುತ್ತಿದ್ದಂತೆ ಕರಾವಳಿ ಜನ ಹರ್ಷ ತೋರಿದ್ದನ್ನು ವಿಶೇಷವಾಗಿ ಪರಿಗಣಿಸಲಾಗಿದೆ.
ಅಂದಾಜು ಎರಡು ಲಕ್ಷದಷ್ಟು ಸೇರಿದ ಜನರ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಮನ ಸೆಳೆದಿದ್ದಾರೆ. ಕೇಂದ್ರ ಸರ್ಕಾರಕ್ಕೆ ಸೇರಿದ್ದ ಕಾರ್ಯಕ್ರಮ ಆಗಿದ್ದರೂ ಯಡಿಯೂರಪ್ಪ ವೇದಿಕೆಯಲ್ಲಿ ಸ್ಥಾನ ಪಡೆದಿದ್ದರು. ಇದಕ್ಕೆ ಪ್ರಧಾನಿ ಮೋದಿ ವೈಯಕ್ತಿಕ ಆಹ್ವಾನವೇ ಕಾರಣ ಎನ್ನಲಾಗುತ್ತಿದೆ. ಇತ್ತೀಚೆಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿರುವ ಯಡಿಯೂರಪ್ಪ ಅವರು ವೇದಿಕೆಗೆ ಬರುತ್ತಿದ್ದಂತೆ ಜನರು ಹರ್ಷೋದ್ಘಾರ ಮಾಡಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ವೇದಿಕೆಗೆ ಆಗಮಿಸಿದ ಬಳಿಕ ಎಲ್ಲರನ್ನೂ ಸ್ವಾಗತಿಸುವ ವೇಳೆಯೂ ಬಿಎಸ್ ವೈ ಹೆಸರು ಬಂದಾಗ ಜನರು ಜಯಘೋಷ ಕೂಗಿದ್ದಾರೆ. ಇದನ್ನು ಪ್ರಧಾನಿ ಮೋದಿ ಎದುರುಗಡೆ ಅಭಿಮಾನಿಗಳು ರಾಜ್ಯದಲ್ಲಿ ಯಡಿಯೂರಪ್ಪ ವರ್ಚಸ್ಸಿನ ಪ್ರದರ್ಶನ ಮಾಡಿದ್ದಾಗಿ ವ್ಯಾಖ್ಯಾನಿಸಲಾಗುತ್ತಿದೆ. ಕರಾವಳಿಯಲ್ಲೂ ಯಡಿಯೂರಪ್ಪ ವರ್ಚಸ್ಸು ಹೊಂದಿರುವುದನ್ನು ಮತ್ತು ಕರಾವಳಿಯವರೇ ರಾಜ್ಯಾಧ್ಯಕ್ಷ ಆಗಿದ್ದರೂ ಯಡಿಯೂರಪ್ಪ ತನ್ನ ಖದರ್ ಉಳಿಸಿಕೊಂಡಿರುವುದನ್ನು ಸೂಚಿಸಿತ್ತು ಎನ್ನುವ ಮಾತು ಕೇಳಿಬಂದಿದೆ.




ಉಡುಪಿ ಕೃಷ್ಣ ಮತ್ತು ಪರಶುರಾಮ ಪುತ್ಥಳಿ
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಗೆ ಮಲ್ಲಿಗೆ ಹೂವಿನ ಮಾಲೆ ಹಾಕಿ ಸನ್ಮಾನಿಸಲಾಯಿತು. ಅಲ್ಲದೆ ಉಡುಪಿ ಶ್ರೀಕೃಷ್ಣ ದೇವರ ಪುತ್ಥಳಿ ಮತ್ತು ಪರಶುರಾಮ ಪುತ್ಥಳಿಯನ್ನು ನೀಡಿ ಗೌರವಿಸಲಾಯಿತು. ಪರಶುರಾಮ ಕೊಡಲಿ ಬೀಸಿ ತುಳುನಾಡೆಂದು ಕರೆಯಲ್ಪಡುವ ಕರಾವಳಿ ಭಾಗವನ್ನು ಸೃಷ್ಟಿಸಿದ್ದಾನೆ ಎನ್ನುವ ಪ್ರತೀತಿ ಇರುವುದರಿಂದ ಇದೇ ವಿಗ್ರಹವನ್ನು ಉಡುಪಿಯಲ್ಲಿ ತಯಾರಿಸಲಾಗಿತ್ತು.
Modi in Mangalore, large crowd greets B S Yediyurappa as he walks on stage. Prime Minister Narendra Modi arrived at Goldfinch City grounds at Bangra Kuluru in Mangaluru at 2.10 p.m. on September 2, 2022 to dedicate and lay foundation stone for eight projects worth Rs. 3,800 crore.
08-05-26 12:21 pm
HK News Staffer
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
ಇರು ಅಂದ್ರೆ ಇರ್ತೀನಿ, ಹೈಕಮಾಂಡ್ ಮಾತನ್ನಷ್ಟೇ ಕೇಳ್ತ...
06-05-26 07:41 pm
ಗದಗದತ್ತ ಹೊರಟಿದ್ದ ಪಲ್ಲಕ್ಕಿ ಬಸ್ಸಿಗೆ ಬೆಂಕಿ ; ನಡು...
05-05-26 03:52 pm
ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ; ಶಾಸಕ ಡಿಎನ್ ಜೀ...
05-05-26 03:37 pm
08-05-26 12:06 pm
HK News Staffer
ಬಂಗಾಳದಲ್ಲಿ ಟಿಎಂಸಿ ಯುಗಾಂತ್ಯ ; ಮಮತಾ ಸರ್ಕಾರ ವಜಾಗ...
07-05-26 10:29 pm
ಬಂಗಾಳದಲ್ಲಿ ಟಿಎಂಸಿ ಯುಗಾಂತ್ಯ ; ಮಮತಾ ಸರ್ಕಾರ ವಜಾಗ...
07-05-26 10:29 pm
ಕೇರಳದಲ್ಲಿ ಸಿಎಂ ಗಾದಿಗೆ ಫೈಟ್ ; ವೇಣುಗೋಪಾಲ್ - ವಿ....
07-05-26 08:57 pm
ತಿರುಪತ್ತೂರಿನಲ್ಲಿ ಒಂದು ಮತದಿಂದ ಗೆದ್ದ ಟಿವಿಕೆ ಅಭ್...
07-05-26 06:20 pm
07-05-26 07:40 pm
HK News Staffer
ಸವಣೂರು ಬಳಿ ಭೀಕರ ಅಪಘಾತ ; ಟ್ಯಾಂಕರ್ ಡಿಕ್ಕಿಯಾಗಿ ಬ...
05-05-26 11:01 pm
ಕೋರ್ಟ್ ಜಟಾಪಟಿ ಬಳಿಕ ಉಳ್ಳಾಲ ದರ್ಗಾ ಆಡಳಿತ ಸಮಿತಿಗೆ...
02-05-26 11:05 pm
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
07-05-26 08:00 pm
HK News Staffer
ಬಂಗಾಳದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಬೆನ್ನಲ್ಲೇ ಸು...
07-05-26 12:17 pm
ಬೆಂಗಳೂರಿನ ಇಸ್ರೋ ಕ್ಯಾಂಪಸ್ನಲ್ಲಿ ಭದ್ರತಾ ಆತಂಕ ;...
06-05-26 11:06 pm
Karkala, Fraud: ಆಯುರ್ವೇದ ಔಷದಿ ಸೇವಿಸಿದರೆ ಕ್ಯಾನ...
06-05-26 01:53 pm
ಯಾದಗಿರಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯ ಪ್ರೇಮ...
06-05-26 11:54 am