ಸೆ.2ಕ್ಕೆ ಮೋದಿ ಕಾರ್ಯಕ್ರಮ ; ಗಣಪತಿ ವಿಸರ್ಜನೆ ನೆಪದಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಣೆ ! 

30-08-22 04:58 pm       Mangalore Correspondent   ಕರಾವಳಿ

ಸೆ.2ರಂದು ಮಂಗಳೂರಿಗೆ ಪ್ರಧಾನಿ ಮೋದಿ ಆಗಮಿಸುತ್ತಿರುವುದರಿಂದ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಾಲೆ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. 

ಮಂಗಳೂರು, ಆಗಸ್ಟ್ 30 : ಸೆ.2ರಂದು ಮಂಗಳೂರಿಗೆ ಪ್ರಧಾನಿ ಮೋದಿ ಆಗಮಿಸುತ್ತಿರುವುದರಿಂದ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಾಲೆ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. 

ಜಿಲ್ಲಾಧಿಕಾರಿ ಹೊರಡಿಸಿದ ಆದೇಶದಲ್ಲಿ ಮಾತ್ರ ಗಣಪತಿ ವಿಗ್ರಹದ ಶೋಭಾಯಾತ್ರೆ, ವಿಸರ್ಜನೆಯ ಕಾರಣಕ್ಕೆ ರಜೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಗಣಪತಿ ವಿಸರ್ಜನೆಯ ಕಾರಣದಿಂದ ಜನ ದಟ್ಟಣೆ, ವಾಹನ ದಟ್ಟಣೆ ಉಂಟಾಗಲಿದೆ. ಇದರಿಂದಾಗಿ ಶಾಲಾ ಮಕ್ಕಳಿಗೆ ತೊಂದರೆ ಆಗುವುದೆಂದು ಕಾರಣ ನೀಡಲಾಗಿದೆ.‌ ಅದಕ್ಕಾಗಿ ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ರಜೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ‌

ಆದರೆ ಸೆ.2ರಂದು ಮಂಗಳೂರಿಗೆ ಮೋದಿ ಆಗಮಿಸುತ್ತಿದ್ದು ವಾಹನ ದಟ್ಟಣೆ ಉಂಟಾಗಲಿದೆ. ಇದರಿಂದಾಗಿ ಪರೋಕ್ಷವಾಗಿ ಗಣಪತಿ ವಿಸರ್ಜನೆ ನೆಪದಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಿಸಲಾಗಿದೆ. ‌ಖಾಸಗಿ ಮತ್ತು ಸರಕಾರಿ ಎಲ್ಲ ಮಾದರಿಯ ಶಿಕ್ಷಣ ಕೇಂದ್ರಗಳಿಗೂ ರಜೆ ಘೋಷಣೆ ಮಾಡಲಾಗಿದೆ. ‌

Deputy commissioner (DC) Dr Rajendra KV has declared a holiday for schools and colleges on September 2 coming under Mangaluru police commissionerate limits. In a media release, the DC stated, “There is the immersion of the Ganesh idols in several places within Mangaluru police commissionerate limits on September 2 and as per the information from the police department, there will be heavy traffic movement and huge public gatherings in the city. Hence, there will be the possibility of inconvenience for the students.