ಬ್ರೇಕಿಂಗ್ ನ್ಯೂಸ್
15-08-22 12:28 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 15: ಮಂಗಳೂರು ವಿಮಾನ ನಿಲ್ದಾಣದಲ್ಲಿ ವಾಟ್ಸಪ್ ಮೆಸೇಜ್ ಚಾಟಿಂಗ್ ಮೂಲಕ ಆತಂಕಕ್ಕೆ ಕಾರಣವಾಗಿದ್ದ ಯುವಕ- ಯುವತಿಯನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂಡಿಗೋ ವಿಮಾನ ಸಂಸ್ಥೆಯ ಮ್ಯಾನೇಜರ್ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ದೀಪಯಾನ್ ಮಾಜಿ (23) ಮತ್ತು ಸಿಮ್ರಾನ್ ಟಾಮ್ (23) ಪೊಲೀಸರು ವಶಕ್ಕೆ ಪಡೆದ ಯುವಕ ಮತ್ತು ಯುವತಿ. ಇವರಿಬ್ಬರು ಕೂಡ ಹಿಂದೆ ಮಣಿಪಾಲದಲ್ಲಿ ಐಐಟಿ ಕಲಿತಿದ್ದು ಕ್ಲಾಸ್ ಮೇಟ್ ಎನ್ನಲಾಗುತ್ತಿದೆ. ದೀಪಯಾನ್ ಮಾಜಿ ಗುಜರಾತಿನ ವಡೋದರಾದಲ್ಲಿ ಎಲ್ ಎಂಡ್ ಟಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಗಿಟ್ಟಿಸಿದ್ದಾನೆ. ಎರಡು ದಿನಗಳ ಹಿಂದೆ ಮಣಿಪಾಲಕ್ಕೆ ಬಂದು ಭಾನವಾರ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಹಿಂತಿರುಗುತ್ತಿದ್ದರು. ದೀಪಯಾನ್ ಮುಂಬೈಗೆ ಹೊರಟಿದ್ದರೆ, ಯುವತಿ ಬೆಂಗಳೂರಿಗೆ ಹೊರಟಿದ್ದಳು. ಭಾನುವಾರ ಬೆಳಗ್ಗೆ 11 ಗಂಟೆಗೆ ಇಂಡಿಗೋ ವಿಮಾನದಲ್ಲಿ ದೀಪಯಾನ್ ಮುಂಬೈಗೆ ಹೊರಟಿದ್ದ. ಇದೇ ವೇಳೆ, ಏರ್ಪೋರ್ಟ್ ಹೊರಗಡೆ ವಿಮಾನಕ್ಕಾಗಿ ಕಾಯುತ್ತಿದ್ದ ಸಿಮ್ರಾನ್ ಟಾಮ್ ಆತನನ್ನು ಗಮನಿಸಿ ಮೆಸೇಜ್ ಚಾಟಿಂಗ್ ಮಾಡುತ್ತಿದ್ದಳು.
ಸಂಭಾಷಣೆ ನಡುವೆ, ಯು ಆರ್ ದಿ ಬಾಂಬರ್ ಎಂದು ಯುವತಿ ಸಿಮ್ರಾನ್, ದೀಪಯಾನ್ ಮಾಜಿಗೆ ಮೆಸೇಜ್ ಮಾಡಿದ್ದಳು. ಯುವಕನ ಮೊಬೈಲ್ ಚಾಟಿಂಗನ್ನು ಗಮನಿಸಿದ್ದ ಹಿಂದಿನ ಸೀಟಿನಲ್ಲಿದ್ದ ಮಹಿಳೆಯೊಬ್ಬರು ವಿಮಾನ ಸಿಬಂದಿಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಆತಂಕಕ್ಕೆ ಒಳಗಾದ ವಿಮಾನ ನಿಲ್ದಾಣದ ಸಿಬಂದಿ ಮತ್ತು ಭದ್ರತಾ ಸಿಬಂದಿ ಟೇಕಾಫ್ ರೆಡಿಯಾಗಿದ್ದ ವಿಮಾನವನ್ನು ಸ್ಥಗಿತಗೊಳಿಸಿ ತಪಾಸಣೆ ನಡೆಸಿದ್ದರು. ವಿಮಾನವನ್ನು ಹಳೆ ಏರ್ಪೋರ್ಟಿಗೆ ಕರೆದೊಯ್ದು ಅಲ್ಲಿ ಕೂಲಂಕುಷ ತಪಾಸಣೆ ನಡೆಸಿದ ಬಳಿಕ ಸಂಜೆ 5 ಗಂಟೆಗೆ ಪ್ರಯಾಣಕ್ಕೆ ಅನುಮತಿ ನೀಡಲಾಗಿತ್ತು. ಬಳಿಕ 186 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನ ಸಾವಧಾನದಿಂದ ಹೊರಟಿತ್ತು. ಆದರೆ, ಯುವಕ- ಯುವತಿಯನ್ನು ಸಿಐಎಸ್ಎಫ್ ಭದ್ರತಾ ಸಿಬಂದಿ ತೀವ್ರ ವಿಚಾರಣೆ ನಡೆಸಿದ್ದು, ಕೊನೆಗೆ ಬಜ್ಪೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭದ್ರತೆಗೆ ಆತಂಕವೊಡ್ಡುವ ರೀತಿ ಮೆಸೇಜ್ ಮಾಡಿರುವುದರ ಹಿನ್ನೆಲೆಯೇನು ಅನ್ನೋದ್ರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಯುವತಿ ತಮಾಷೆಗೆ ಮೆಸೇಜ್ ಮಾಡಿದ್ದೆ ಎಂದಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ. ಯುವಕ- ಯುವತಿ ಇಬ್ಬರು ಕೂಡ ಐಐಟಿ ಕಲಿತವರಾಗಿದ್ದು, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಈ ರೀತಿ ಮೆಸೇಜ್ ಮಾಡಿರುವುದು ಸಹಜವಾಗಿಯೇ ಆತಂಕ ಮೂಡಿಸಿದೆ.
Bomb text chat by boy and girl at Mangalore International airport creates panic, both from IIT Uttarpradesh taken to custody by Bajpe police and serious investigation is going on. A flight journey was cut short and all the passengers were alighted from the aircraft and the flight was intensely checked for any sabotage on Sunday, August 14, in the afternoon at the international airport here.
25-06-25 10:32 pm
Bangalore Correspondent
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
Assault Case, Anant Kumar Hegde, Accident: ಹಲ...
25-06-25 01:09 pm
Bangalore, Reels, Death: 12 ವರ್ಷದ ಪ್ರೀತಿ ಜಗಳದ...
24-06-25 10:42 pm
Chikkamagaluru Student Suicide, Uniform: ಚಿಕ್...
24-06-25 10:15 pm
25-06-25 10:05 pm
HK News Desk
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
ಇರಾನ್ –ಇಸ್ರೇಲ್ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರ...
24-06-25 12:03 pm
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
25-06-25 10:46 pm
Mangalore Correspondent
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
Sixth Sense Beauty Salon, Raid, Mangalore, Po...
24-06-25 09:49 pm
Mangalore, College Student Suicide: ಕಲಿಕೆಯಲ್ಲ...
24-06-25 01:36 pm
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
25-06-25 11:11 pm
Mangalore Correspondent
Social Media, Woman Murder, Affair, Mandya: ಪ...
25-06-25 04:06 pm
ಸ್ನೇಹಿತನಿಂದ 8 ಲಕ್ಷ ರೂ. ಸಾಲ ; ಕೊಟ್ಟ ಸಾಲ ತೀರಿಸಲ...
24-06-25 09:51 pm
Bangalore Chit Fund Scam, 10 Crore: ಚೀಟಿ ಹೆಸ್...
24-06-25 07:39 pm
Davanagere Rape: ಮನೆಯ ಮುಂದೆ ಆಟವಾಡುತ್ತಿದ್ದ 7 ವ...
23-06-25 08:51 pm