ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕನಿಗೆ ಕರಾವಳಿ ರಕ್ಷಣಾ ಪಡೆಯ ಸ್ವಾತಂತ್ರ್ಯ ನಮನ 

13-08-22 03:04 pm       Mangalore Correspondent   ಕರಾವಳಿ

ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ರಾಣಿ ಅಬ್ಬಕ್ಕನಿಗೆ ಭಾರತೀಯ ಕರಾವಳಿ ರಕ್ಷಣಾ ಪಡೆಯಿಂದ ಸ್ವಾತಂತ್ರ್ಯ ನಮನ ಸಲ್ಲಿಸಲಾಯಿತು. 

ಉಳ್ಳಾಲ, ಆ.13 : ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ರಾಣಿ ಅಬ್ಬಕ್ಕನಿಗೆ ಭಾರತೀಯ ಕರಾವಳಿ ರಕ್ಷಣಾ ಪಡೆಯಿಂದ ಸ್ವಾತಂತ್ರ್ಯ ನಮನ ಸಲ್ಲಿಸಲಾಯಿತು. 

ಉಳ್ಳಾಲದ ಅಬ್ಬಕ್ಕ ವೃತ್ತದಲ್ಲಿ ವೀರರಾಣಿಗೆ ಕರಾವಳಿ ಕಾವಲು ಪಡೆಯ ಯೋಧರು 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೈಕ್ ರ್ಯಾಲಿ ನಡೆಸಿ ನಮನ ಸಲ್ಲಿಸಿದರು. ಶಾಸಕ ಯು.ಟಿ ಖಾದರ್ ಅವರು ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಧ್ವಜಾರೋಹಣಗೈದರು. ಈ ವೇಳೆ ಮಾತನಾಡಿದ ಅವರು ಅಬ್ಬಕ್ಕ ರಾಣಿ ಉಳ್ಳಾಲದ ಹೆಮ್ಮೆಯ ಪ್ರತೀಕ. ಇಂದಿನಿಂದ ಸ್ವಾತಂತ್ರ್ಯ ದಿನಾಚರಣೆ ವರೆಗೂ ನಿತ್ಯವೂ ನಾಡಿನ ವಿವಿಧ ಸಂಘ, ಸಂಸ್ಥೆಗಳಿಂದ ರಾಣಿ ಅಬ್ಬಕ್ಕಳಿಗೆ ನಮನ ಸಲ್ಲಿಸುವುದರೊಂದಿಗೆ ಧ್ವಜಾರೋಹಣ ಕಾರ್ಯಕ್ರಮ ಜರಗಲಿರುವುದು.15 ರಂದು ಉಳ್ಳಾಲದ ಹೆಬ್ಬಾಗಿಲು ಓವರ್ ಬ್ರಿಡ್ಜಲ್ಲಿ ಸ್ಥಾಪನೆಯಾದ ಜಿಲ್ಲೆಯಲ್ಲೇ ಅತೀ (110 ಅಡಿ) ಎತ್ತರದ ಧ್ವಜ ಸ್ಥಂಭದಲ್ಲಿ ವರ್ಣರಂಜಿತ ಕಾರ್ಯಕ್ರಮದೊಂದಿಗೆ ರಾಷ್ಟ್ರ ಧ್ವಜಾರೋಹಣ ನಡೆಯಲಿರುವುದೆಂದು ಹೇಳಿದರು. 

ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನ ಕರಾವಳಿ ರಕ್ಷಣಾ ಪಡೆಯ ಯೋಧರು ಇದೇ ವೇಳೆ ಅಭಿನಂದಿಸಿದರು. ನಗರಸಭಾ ಅಧ್ಯಕ್ಷೆ ಚಿತ್ರಕಲಾ, ಉಪಾಧ್ಯಕ್ಷ ಆಯುಬ್ ಮಂಚಿಲ, ಆಯುಕ್ತರಾದ ವಿದ್ಯಾ ಕಾಳೆ, ದೈಹಿಕ ಶಿಕ್ಷಕ ತ್ಯಾಗಂ ಹರೇಕಳ ಮೊದಲಾವರು ಉಪಸ್ಥಿತರಿದ್ದರು.

Ullal Independence day Trubute to First Tuluva Queen Rani Abbakka by coastal security force and MLA Khader.