ಪ್ರವೀಣ್ ಪರ ಬ್ಯಾನರ್ ಹಾಕಲು ವಿರೋಧ ; ತಲ್ವಾರು ಹಿಡಿದು ರಸ್ತೆಯಲ್ಲಿ ಪೋಸು ಕೊಟ್ಟ ಯುವಕ ! 

10-08-22 02:04 pm       Mangalore Correspondent   ಕರಾವಳಿ

ಕೋಮು ವೈಷಮ್ಯ ಕದಡಿರುವ ಸುಳ್ಯದಲ್ಲಿ ಯುವಕನೊಬ್ಬ ಹಾಡಹಗಲೇ ತಲ್ವಾರ್ ಹಿಡಿದು ರಸ್ತೆಯಲ್ಲಿ ಓಡಾಡಿದ್ದು ಕೆಲಕಾಲ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ತಾಲೂಕಿನ ಕನಕಮಜಲು ಗ್ರಾಮದ ಸುಣ್ಣಮೂಲೆ ಎಂಬಲ್ಲಿ ನಡೆದಿದೆ.

ಸುಳ್ಯ, ಆಗಸ್ಟ್ 10 : ಕೋಮು ವೈಷಮ್ಯ ಕದಡಿರುವ ಸುಳ್ಯದಲ್ಲಿ ಯುವಕನೊಬ್ಬ ಹಾಡಹಗಲೇ ತಲ್ವಾರ್ ಹಿಡಿದು ರಸ್ತೆಯಲ್ಲಿ ಓಡಾಡಿದ್ದು ಕೆಲಕಾಲ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ತಾಲೂಕಿನ ಕನಕಮಜಲು ಗ್ರಾಮದ ಸುಣ್ಣಮೂಲೆ ಎಂಬಲ್ಲಿ ನಡೆದಿದೆ.

ತಲವಾರು ಹಿಡಿದು ಓಡಾಡಿದ ಯುವಕನನ್ನು ಸ್ಥಳೀಯ ನಿವಾಸಿ ಸಂದೀಪ ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು ಪರ- ವಿರೋಧ ಮಾತುಗಳು ಕೇಳಿಬಂದಿವೆ. 

ಇತ್ತೀಚೆಗೆ ಕೊಲೆಯಾದ ಪ್ರವೀಣ್ ನೆಟ್ಟಾರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕುರಿತು ಕನಕಮಜಲು ಪೇಟೆಯಲ್ಲಿ ಬ್ಯಾನರ್ ಅಳವಡಿಸಲು ಕೆಲವರು ಮುಂದಾಗಿದ್ದರು. ಗಲಾಟೆಗೆ ಕಾರಣವಾಗುತ್ತೆ ಎಂಬ ಕಾರಣಕ್ಕೆ ಬ್ಯಾನರ್ ಹಾಕಲು ಸ್ಥಳೀಯಾಡಳಿತ ಅನುಮತಿ ನೀಡಿರಲಿಲ್ಲ.‌ ಇದೇ ಕಾರಣಕ್ಕೆ ಕೋಪಗೊಂಡಿದ್ದ ಯುವಕರಲ್ಲಿ ಒಬ್ಬನಾಗಿದ್ದ ಸಂದೀಪ್ ತಲ್ವಾರ್ ಹಿಡಿದು ರಸ್ತೆಯಲ್ಲಿ ನಡೆದಾಡಿದ್ದ.‌ ಅದನ್ನು ಸ್ಥಳೀಯರು ಮೊಬೈಲಿನಲ್ಲಿ ರೆಕಾರ್ಡ್ ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.‌ ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಯ ಗಂಭೀರತೆ ಅರಿತ ಪೊಲೀಸರು ಸ್ಥಳಕ್ಕೆ ಧಾವಿಸಿ ತಲವಾರು ವಶಪಡಿಸಿಕೊಂಡಿದ್ದಾರೆ. ಯುವಕನಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

Man walks with sword in Sullia for objecting to put Praveen Bellare Condolence banner